ಕರ್ನಾಟಕ

karnataka

ಶಿವಮೊಗ್ಗ ಗಾಂಜಾ ಗ್ಯಾಂಗ್​​ವಾರ್ ಪ್ರಕರಣ​.. ಚಾಕು ಹಿಡಿದು ಹೆದರಿಸಲು ಹೋದವ ಹೆಣವಾದ

By

Published : Sep 21, 2021, 7:49 PM IST

ganja-gangwar-leads-to-end-young-mans-life-in-shivamogga

ಕಳೆದ ಶನಿವಾರ ರಾತ್ರಿ ನಗರದ ಟಿಪ್ಪುನಗರ ನಿವಾಸಿ ಇರ್ಫಾನ್ (28) ಎಂಬಾತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರೋಪಿಗಳು ಮೃತದೇಹವನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದರು. ಈ ಹತ್ಯೆಗೆ ಗಾಂಜಾ ಪೆಡ್ಲಿಂಗ್​ ಕಾರಣ ಎಂಬುದು ತಿಳಿದುಬಂದಿದೆ.

ಶಿವಮೊಗ್ಗ: ಮೂರು ದಿನಗಳ ಹಿಂದೆ ನಗರದ ಟಿಪ್ಪುನಗರ ನಿವಾಸಿ ಇರ್ಫಾನ್ (28) ಎಂಬಾತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯಿಂದ ಇಡೀ ಶಿವಮೊಗ್ಗ ಜನರು ಬೆಚ್ಚಿಬಿದ್ದಿದ್ದರು. ಕೊಲೆ ಮಾಡಿ ಶವವನ್ನ ಚರಂಡಿಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಬಂಧನದ ಬಳಿಕ ಈ ಕೊಲೆಗೆ ಗಾಂಜಾ ಗ್ಯಾಂಗ್​ವಾರ್​ ಕಾರಣ ಎಂಬುದು ಬಯಲಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಲು ಕಾರಣವಾಗಿದೆ.

ಶಿವಮೊಗ್ಗ ಕೊಲೆಗೆ ಕಾರಣವಾಗಿದ್ದು ಗಾಂಜಾ ಗ್ಯಾಂಗ್​​ವಾರ್

ಕೊಲೆಗೆ ಕಾರಣವಾಗಿತ್ತು ಗಾಂಜಾ ವಾರ್​​​

ಗಾಂಜಾ ಪೆಡ್ಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಆರಂಭಗೊಂಡ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆಯಾದ ಶಿವಮೊಗ್ಗ ಮಿಳ್ಳಘಟ್ಟದ ಇರ್ಫಾನ್ ಆರಂಭದಿಂದಲೂ ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಇವನ ವಿರೋಧಿ ಗ್ಯಾಂಗ್ ಲತೀಫ್ ಹಾಗೂ ಸಹಚರರು ಗಾಂಜಾ ಪೆಡ್ಲಿಂಗ್​​​ನಲ್ಲಿ ತೊಡಗಿದ್ದರು.

ಹೀಗಾಗಿ ಇರ್ಫಾನ್ ಹಾಗೂ ಲತೀಫ್ ಗ್ಯಾಂಗ್​​ಗೆ ಆಗುತ್ತಿರಲಿಲ್ಲ. ಗಾಂಜಾ ಪೆಡ್ಲಿಂಗ್ ವಿಚಾರವಾಗಿ ಹಿಂದೆಯೂ ಹತ್ತು ಹಲವು ಬಾರಿ ಈ ಎರಡು ಗ್ಯಾಂಗ್ ನಡುವೆ ಗಲಾಟೆಯಾಗಿತ್ತು. ಶನಿವಾರ ರಾತ್ರಿಯೂ ಇರ್ಫಾನ್ ಗ್ಯಾಂಗ್​​ನ ಅಸಾದಿ ಹಾಗೂ ಲತೀಫ್ ಗ್ಯಾಂಗ್ ನಡುವೆ ಟಿಪ್ಪು ನಗರದ 7ನೇ ತಿರುವಿನಲ್ಲಿ ಗಲಾಟೆಯಾಗಿತ್ತು. ಆಗ ಅಸಾದಿ, ಇರ್ಫಾನ್​ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.

ಅವನೇ ತಂದಿದ್ದ ಚಾಕುವಿನಿಂದ ಹತ್ಯೆ

ಕೂಡಲೇ ಇರ್ಫಾನ್ ಚಾಕು ತೆಗೆದುಕೊಂಡು ಲತೀಫ್​​ನನ್ನು ಹೆದರಿಸುವ ಉದ್ದೇಶದಿಂದ ಟಿಪ್ಪು ನಗರಕ್ಕೆ ತೆರಳಿದ್ದಾನೆ. ಆಗ ಎರಡೂ ಗ್ಯಾಂಗ್ ನಡುವೆ ಮಾತಿನ ಚಕಮಕಿ ನಡೆದಿದೆ. ಇರ್ಫಾನ್ ತಾನು ತಂದಿದ್ದ ಚಾಕುವಿನಿಂದ ಲತೀಫ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಲತೀಫ್ ಹಾಗೂ ಆತನ ಸಹಚರರು ಇರ್ಫಾನ್​ ತಂದಿದ್ದ ಚಾಕುವನ್ನು ಕಸಿದುಕೊಂಡು ಅದೇ ಚಾಕುವಿನಲ್ಲಿ ಇರ್ಫಾನ್ ಎದೆಗೆ ಇರಿದಿದ್ದಾರೆ.

ಇರ್ಫಾನ್ ಉಸಿರು ನಿಲ್ಲಿಸುತ್ತಿದ್ದಂತೆ ಆತನ ಶವವನ್ನು ಅಲ್ಲಿಯೇ ಚರಂಡಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಈಗ ಲತೀಫ್ ಗ್ಯಾಂಗ್​​ನ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details