ಕರ್ನಾಟಕ

karnataka

ಪರಿಷತ್​ ಚುನಾವಣೆ 2023 ಎಲೆಕ್ಷನ್​​​ ದಿಕ್ಸೂಚಿ ಅಲ್ಲ: ಹೆಚ್​ಡಿ ಕುಮಾರಸ್ವಾಮಿ

By

Published : Dec 1, 2021, 3:23 PM IST

HD Kumaraswamy
ಹೆಚ್​ಡಿ ಕುಮಾರಸ್ವಾಮಿ

ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಎಸ್ಪಿ ಪುರಷೊತ್ತಮ್ ವಿರುದ್ಧ ದೂರು ದಾಖಲಾಗಿರುವ ವಿಚಾರವಾಗಿ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ವಿಧಾನಪರಿಷತ್​ ಚುನಾವಣೆ ವಿಚಾರವಾಗಿ ಮಾತನಾಡಿದರು..

ರಾಮನಗರ :ಎಸ್ಪಿ ಪುರಷೊತ್ತಮ್ ವಿರುದ್ಧ ದೂರು ದಾಖಲಾಗಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ಯಾವ ವಿಚಾರದಲ್ಲಿ ಅವರ ಹೆಸರು ಕೇಳಿ ಬರುತ್ತಿದೆ ಎಂಬುದು ಗೊತ್ತಿಲ್ಲ. ನಾನು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ನಡೆಸಿಲ್ಲ ಎಂದು ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ವಿಶ್ವಾಸದಿಂದ ಚುನಾವಣೆ ನಡೆಸಿಕೊಂಡು ಬಂದಿದ್ದೇನೆ. ಕಾರ್ಯಕರ್ತರು ಚುನಾವಣೆಯಲ್ಲಿ ಮತ ಹಾಕಿಸುತ್ತಾರೆ.

ಅಧಿಕಾರಿಗಳು ಮತ ಹಾಕಿಸಲು ಸಾಧ್ಯವಾಗುತ್ತಾ?. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದೂರು ಕೊಟ್ಟಿದ್ದಾರೋ ಏನೋ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆ ನಂತರ ಸತ್ಯಾಂಶ ಹೊರ ಬರಲಿದೆ ಎಂದರು.

ಪರಿಷತ್​ ಎಲೆಕ್ಷನ್​​​​ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ:ವಿಧಾನಪರಿಷತ್ ಚುನಾವಣೆ 2023ರ ದಿಕ್ಸೂಚಿ ಎನ್ನಲು ಸಾಧ್ಯವಿಲ್ಲ. ಆದರೆ, ಪರಿಷತ್​ ಫಲಿತಾಂಶ 2023ರ ಚುನಾವಣೆಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮಡಿಸುತ್ತದೆ.

ಚುನಾಯಿತ ಪ್ರತಿನಿಧಿಗಳ ಬೆಂಬಲ ಯಾವ ಪಕ್ಷಕ್ಕೆ ಎಂಬುದು ಗೊತ್ತಾಗಲಿದೆ. ಜೆಡಿಎಸ್ ಪಕ್ಷಕ್ಕೆ ಒಳ್ಳೆಯ ಬೆಂಬಲ ಇದೆ. ಆದರೆ, ಚುನಾವಣೆ ಗೆಲ್ಲುವಷ್ಟು ಬೆಂಬಲ ಇಲ್ಲ. ಆದರೆ, ಯಾರನ್ನು ಗೆಲ್ಲಿಸಬಹುದು ಎಂಬ ಶಕ್ತಿ ಜನ ಕೊಟ್ಟಿದ್ದಾರೆ ಎಂದರು.

ರಾಮನಗರ ನಮ್ಮ ಕರ್ಮಭೂಮಿ :ಬಯಸಿದರೆ ಸ್ಪರ್ಧೆ ಮಾಡ್ತೇನೆಂಬ ನಿಖಿಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಪಕ್ಷ ಬಯಸಿದರೆ ಸ್ಪರ್ಧೆ ಎಂದಿದ್ದಾರೆ. ಅದಕ್ಕೆ ಇನ್ನು 2 ವರ್ಷಗಳ ಕಾಲ ಸಮಯವಿದೆ.

ನೋಡೋಣ. ಆದರೆ, ರಾಮನಗರ ನಮ್ಮ ಕರ್ಮಭೂಮಿ. ಕೊನೆ ಉಸಿರು ಇರುವವರೆಗೂ ರಾಮನಗರ ಬಿಡುವ ಪ್ರಶ್ನೆಯೇ ಇಲ್ಲ. ನಾವು ಮಣ್ಣಾಗುವುದು ಸಹ ರಾಮನಗರದಲ್ಲೇ ಎಂದರು.

ಇದನ್ನೂ ಓದಿ: ಡಿ.14ರ ನಂತರ ನನ್ನ-ಡಿಕೆಶಿ ಮಧ್ಯೆ ಬಹಿರಂಗ ವಾರ್ ಆಗಲಿ : ರಮೇಶ್ ಜಾರಕಿಹೊಳಿ‌

ABOUT THE AUTHOR

...view details