ಕರ್ನಾಟಕ

karnataka

ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ: 3 ವರ್ಷದ ಮಗು ಸೇರಿ ನೀರುಪಾಲಾದ ತಂದೆ

By

Published : Nov 18, 2022, 1:14 PM IST

father and son died

ನಾರಾಯಣಪುರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮೂರು ವರ್ಷದ ಮಗು ಸೇರಿ ತಂದೆ ನೀರುಪಾಲದ ಘಟನೆ ನಡೆದಿದೆ.

ರಾಯಚೂರು: ತಂದೆ ಮತ್ತು ಮಗ ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪಲಗಲದಿನ್ನಿ ಗ್ರಾಮದ ನಾರಾಯಣಪುರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಡೆದಿದೆ.

ಮೂರು ವರ್ಷದ ಮಗು ಲಕ್ಕಪ್ಪ, ತಂದೆ ರಮೇಶ್(35) ಮೃತರು. ಮಗುವಿನ ಮೃತದೇಹ ಪತ್ತೆಯಾಗಿದ್ದು, ತಂದೆಯ ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ನಿನ್ನೆ ರಮೇಶ್​ ಪತ್ನಿ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ‌, ಅಲ್ಲಿಯೇ ಆಟವಾಡುತ್ತಿದ್ದ ಮಗು ಕಾಲು ಜಾರಿ ನೀರಿಗೆ ಬಿದಿದ್ದೆ. ಅಲ್ಲೇ ನದಿಯಲ್ಲಿ ಮೀನು ಹಿಡಿಯುತ್ತಿದ ತಂದೆಗೆ ವಿಷಯ ತಿಳಿದು ಆತುರ ಆತುರವಾಗಿ ಆಗಮಿಸುವಾಗ ಹರಗೋಲು ಪಲ್ಟಿ ಹೊಡೆದು ನದಿಯಲ್ಲಿ ಮುಳುಗಿದ್ದಾರೆ.

ನಾರಾಯಣಪುರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮುಂದುವರೆದ ಶೋಧಕಾರ್ಯ

ಇದನ್ನೂ ಓದಿ:ಕಲಬುರಗಿ: ಮೀನು ಹಿಡಿಯಲು ಹೋಗಿ ತಂದೆ-ಮಗ ನೀರುಪಾಲು

ಈ ಸಂಬಂಧ ಘಟನಾ ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಮೇಶ್ ದೇಹಕ್ಕಾಗಿ ಮೀನಗಾರರು, ಅಗ್ನಿಶಾಮಕ‌ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ.

ABOUT THE AUTHOR

...view details