ಕರ್ನಾಟಕ

karnataka

ಇಂದು ಪಿತೃಪಕ್ಷ ಮಹಾಲಯ ಅಮಾವಾಸ್ಯೆ.. ಕಾವೇರಿ ನದಿ ದಡದಲ್ಲಿ ಜನಸ್ತೋಮ

By

Published : Sep 25, 2022, 12:03 PM IST

mahalaya amavasya
ಮಹಾಲಯ ಅಮಾವಾಸ್ಯೆ ()

ಪಿತೃಪಕ್ಷದ ಮಹಾಲಯ ಅಮಾವಾಸ್ಯೆಯಾದ ಹಿನ್ನೆಲೆ ಇಂದು ಕಾವೇರಿ ನದಿ ದಡದಲ್ಲಿ ಸಾವಿರಾರು ಮಂದಿ ಪಿಂಡ ಪ್ರದಾನ ಮಾಡುತ್ತಿದ್ದಾರೆ.

ಮಂಡ್ಯ: ಇಂದು ಪಿತೃಪಕ್ಷದ ಮಹಾಲಯ ಅಮಾವಾಸ್ಯೆಯಾದ ಹಿನ್ನೆಲೆ ರಾಜ್ಯದ ವಿವಿಧ ಮೂಲಗಳಿಂದ ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡಕ್ಕೆ ಆಗಮಿಸಿದ ಸಾವಿರಾರು ಮಂದಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಆಸ್ತಿಕರ ಜನ ಜಾತ್ರೆ ನಡೆಯುತ್ತದೆ. ಈ ಹಿನ್ನೆಲೆ ಕಾವೇರಿ ನದಿ ತಟದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ತಮ್ಮ ಕುಟುಂಬದ ಹಿರಿಯರಿಗೆ ಪಶ್ಚಿಮವಾಹಿನಿ, ಸ್ನಾನಘಟ್ಟ, ಗೋಸಾಯಿಘಾಟ್ ಹಾಗೂ ಸಂಗಮದಲ್ಲಿ ಪಿಂಡ ತರ್ಪಣ ಮಾಡಲಾಗುತ್ತಿದೆ.

ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡಕ್ಕೆ ಆಗಮಿಸಿದ ಸಾವಿರಾರು ಮಂದಿ

ಪಿತೃಪಕ್ಷದಲ್ಲಿ ತಿಲತರ್ಪಣ ಅರ್ಪಿಸಿಸುವುದರಿಂದ ಪೂರ್ವಜನರ ಆತ್ಮಕ್ಕೆ ಶಾಂತಿ ಮತ್ತು ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ:ಶಿವಮೊಗ್ಗ: ಮಹಾಲಯ ಅಮವಾಸ್ಯೆ, ಪಿಂಡ ಪ್ರದಾನಕ್ಕೆ ಜನರ ನೂಕುನುಗ್ಗಲು

ABOUT THE AUTHOR

...view details