ಕರ್ನಾಟಕ

karnataka

ಕಾಂಗ್ರೆಸ್​ ನಾಯಕರ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿಕೆ ತಿರುಗೇಟು

By

Published : Nov 28, 2021, 6:15 PM IST

ಯಡಿಯೂರಪ್ಪ ನಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆದ್ರೆ, ಕಾಂಗ್ರೆಸ್​ನವರು ನಮ್ಮ ಬೆಂಬಲ ಕೋರಿಲ್ಲ. ನೀವು ಬಿಜೆಪಿಗೆ ಬೆಂಬಲ ಕೊಡಿ ಎಂದು ಪರೋಕ್ಷವಾಗಿ ನಮಗೆ ತಿಳಿಸುತ್ತಿದ್ದಾರೆ. ಕಾಂಗ್ರೆಸ್​ನವರು ನಮನ್ನು ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ..

h d kumaraswamy reacts on congress statement
ಕಾಂಗ್ರೆಸ್​ ನಾಯಕರ ಹೇಳಿಕೆಗೆ ಹೆಚ್​ಡಿಕೆ ತಿರುಗೇಟು

ಕೋಲಾರ: ಕಾಂಗ್ರೆಸ್​ನವ್ರು ಮಾತಿನ ಮೋಡಿ ಮಾಡಿ ದಾರಿ ತಪ್ಪಿಸುತ್ತಿದ್ದಾರೆ. ನಮ್ಮನ್ನು ಬಿಜೆಪಿಯ ಬಿ ಟೀಂ ಅಂತಾ ಹೇಳುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಯಾರು ಯಾರನ್ನು ಗೆಲ್ಲಿಸಿದ್ರು ಅಂತಾ ತಿಳಿದಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಕಿದರು.

ಕೋಲಾರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ಇಲ್ಲ. ಆರು ಕಡೆಗಳಲ್ಲಿ ಅಭ್ಯರ್ಥಿಗಳು ನಿಂತಿದ್ದಾರೆ. ನಾವು 19 ಕಡೆಗಳಲ್ಲಿ ಅಭ್ಯರ್ಥಿಗಳನ್ನು ಹಾಕಿಲ್ಲ.‌ ಹಾಗಂತಾ, ನಾವು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದರು.

ಯಡಿಯೂರಪ್ಪ ನಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆದ್ರೆ, ಕಾಂಗ್ರೆಸ್​ನವರು ನಮ್ಮ ಬೆಂಬಲ ಕೋರಿಲ್ಲ. ನೀವು ಬಿಜೆಪಿಗೆ ಬೆಂಬಲ ಕೊಡಿ ಎಂದು ಪರೋಕ್ಷವಾಗಿ ನಮಗೆ ತಿಳಿಸುತ್ತಿದ್ದಾರೆ. ಕಾಂಗ್ರೆಸ್​ನವರು ನಮನ್ನು ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ.

ಆದ್ರೆ, ಕಾಂಗ್ರೆಸ್​ನವರೇ ಮುಳುಗಿ ಹೋಗ್ತಿದ್ದಾರೆ. ಯಡಿಯೂರಪ್ಪನವರು ಎರಡು ದಿನ ಕಾಯುತ್ತೇವೆ ಎಂದು ಹೇಳಿದ್ದಾರೆ. ನಾನು‌‌ ಎರಡು ದಿನಗಳ‌ ನಂತರ ನನ್ನ ನಿರ್ಧಾರ‌ ಹೇಳುವೆ ಎಂದರು.

ಇದನ್ನೂ ಓದಿ:ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟ ಮಾಜಿ ಸಚಿವ ವರ್ತೂರು ಪ್ರಕಾಶ್

ಮಾಜಿ ಸ್ಪೀಕರ್ ರಮೇಶ್ ಕುಮಾರ್​ಗೆ ಪರೋಕ್ಷವಾಗಿ ಮಾತಿನ ಗುದ್ದು ನೀಡಿದ ಕುಮಾರಸ್ವಾಮಿ, ಕೋಲಾರ ಜಿಲ್ಲೆಯಲ್ಲಿ ನಾನು ಪ್ರಾಮಾಣಿಕ, ಪರಿಶುದ್ಧ ರಾಜಕಾರಿಣಿ ಅಂತಾ ಒಬ್ಬರು ಬಿಂಬಿಸಿಕೊಂಡಿದ್ದಾರೆ.

ಆದ್ರೆ, ದಲಿತ ಮುಖಂಡ ಕೆ.ಹೆಚ್ ಮುನಿಯಪ್ಪ ಅವರ ಸೋಲಿಗೆ ಯಾರು ಕಾರಣವೆಂಬುದು ಜನರು ತಿಳಿಯಬೇಕು. ತನ್ನ ಸ್ವಾರ್ಥಕ್ಕಾಗಿ ಯಾರನ್ನು ಎಲ್ಲಿಗೆ ಬೇಕಾದ್ರೂ ಅವರು ನಿಲ್ಲಿಸುತ್ತಾರೆ ಎಂದರು.

ABOUT THE AUTHOR

...view details