ಕರ್ನಾಟಕ

karnataka

ವ್ಯಕ್ತಿಯ ರುಂಡ-ಮುಂಡ ಬೇರ್ಪಡಿಸಿ ಭೀಕರ ಕೃತ್ಯ, ಕಲಬುರಗಿಯಲ್ಲಿ ದುರಂತ

By

Published : Aug 31, 2020, 6:24 AM IST

Updated : Aug 31, 2020, 6:46 AM IST

ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಬಾಬು ಕೋಬಾಳ (32) ಕೊಲೆಯಾದ ವ್ಯಕ್ತಿ. ಹಳೆ ವೈಷಮ್ಯ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

Killed a man cruelly in gulbarga
Killed a man cruelly in gulbarga

ಕಲಬುರಗಿ: ನಗರದಲ್ಲಿ ಭೀಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವನ ಕತ್ತನ್ನು ಕತ್ತರಿಸಿ ಕ್ರೂರವಾಗಿ ಕೊಂದಿದ್ದಾರೆ.

ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಬಾಬು ಕೋಬಾಳ (32) ಕೊಲೆಯಾದ ವ್ಯಕ್ತಿ. ಈತ ದ್ವಿಚಕ್ರ ವಾಹನದಲ್ಲಿ‌ ಹೋಗುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು, ಕೊಡಲಿಯಿಂದ ಕೊಚ್ಚಿ ರುಂಡ -ಮುಂಡ ಬೇರ್ಪಡಿಸಿ ಕ್ರೂರತ್ವ ಮೆರೆದಿದ್ದಾರೆ.

ಕಲಬುರಗಿಯಲ್ಲಿ ದುರಂತ

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದ್ರೂ ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಈಗ ಕೊಲೆಯಾದ ಬಾಬು ಕುಟುಂಬದ ಸದಸ್ಯರೊಬ್ಬರು ಕೊಲೆಮಾಡಿ ಜೈಲು ಸೇರಿದ್ದರು. ಮೇಲ್ನೊಟಕ್ಕೆ ಅದೇ ವೈಷಮ್ಯ ಮುಂದುವರೆದಂತೆ ಕಂಡುಬಂದಿದೆ. ಭೀಕರವಾಗಿ ಹತ್ಯೆ ನಡೆದಿರುವುದು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.

ಸ್ಥಳಕ್ಕೆ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೊಲೆಯಾದ ಬಾಬು ಪತ್ನಿ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

Last Updated :Aug 31, 2020, 6:46 AM IST

ABOUT THE AUTHOR

...view details