ಕರ್ನಾಟಕ

karnataka

ಕಲ್ಯಾಣ‌ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ‌ ಬೊಮ್ಮಾಯಿ

By

Published : Sep 17, 2021, 10:59 AM IST

Kalyana Karnataka Utsav

ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಕಲಬುರಗಿ:ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಲಬುರಗಿ ನಗರಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನಿಂದ ಕಲಬುರಗಿಯ ಸರಡಗಿ ಏರ್​ರ್ಪೋಟ್‌‌ಕ್ಕೆ ಬಂದಿಳಿದ ಸಿಎಂ, ನೇರವಾಗಿ ಸರ್ದಾರ್​ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಆಗಮಿಸಿ ಪಟೇಲ್‌ರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ನಂತರ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು. ಪೊಲೀಸ್ ಪರೇಡ್ ಮೂಲಕ‌ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ, ಬೃಹತ್ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಹಾಗೂ 9624.11 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಲೋಕಾರ್ಪಣೆ ನೆರವೇರಿಸಿದರು.

ಈ ಸಂದರ್ಭದಲ್ಲಿ‌ ಕಲ್ಯಾಣ ಕರ್ನಾಟಕ‌ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅಂದಿನ ಯುಪಿಎ ಸರ್ಕಾರಕ್ಕೆ ಎಚ್ಚರಿಕೆ ನೀಡಿದಾಗ 371 ಜೆ ಕಲಂ ಜಾರಿಗೆ ತರಲಾಯಿತು. 371 ಜಾರಿ ನಂತರ ಅಭಿವೃದ್ಧಿಯ ಆಸೆ ಚಿಗುರಿತ್ತು.

ಆದರೆ, ಆಡಳಿತ ವೈಖರಿಯಿಂದಾಗಿ ಇಂದಿಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಿಂದುಳಿದಿವೆ. 371 ಜೆ ಅನುಷ್ಠಾನ ಮಂಡಳಿ ಕಲಬುರಗಿಯಲ್ಲಿ ಸ್ಥಾಪನೆ ಮಾಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.

ಈಗಿನ 1,500 ಕೋಟಿ ರೂ. ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಹೆಚ್ಚಳ 3 ಸಾವಿರ ಕೋಟಿ ನೀಡುತ್ತೇನೆ. ವಿಶೇಷ ಬಜೆಟ್ ಮಾತ್ರವಲ್ಲ ಇದರೊಂದಿಗೆ ಮುಂದಿನ‌ ಬಜೆಟ್​ನಲ್ಲಿ ರಾಜ್ಯದ ಎಲ್ಲ ಜಿಲ್ಲೆಯಂತೆ ಕೆಕೆ ಭಾಗದ ಆರೂ ಜಿಲ್ಲೆಗೂ ಬರಬೇಕಾದ ಯೋಜನೆ‌ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.

ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಎರಡು ತಿಂಗಳಲ್ಲಿ ಸಣ್ಣ, ಬೃಹತ್ ಕೈಗಾರಿಕೆ ಇನ್​ವೆಸ್ಟರ್ ಮೀಟ್ ಹಮ್ಮಿಕೊಳ್ಳಲಾಗುವುದು. ಐಟಿಬಿಟಿಗೆ ಒತ್ತು, ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಸೆಂಟರ್ ಆಫ್ ಎಕ್ಸ್​​ಲೆನ್ಸ್ ನಿರ್ಮಾಣದ ಭರವಸೆ ನೀಡಿದರು.

ABOUT THE AUTHOR

...view details