ಕರ್ನಾಟಕ

karnataka

ಹಾಸನದಲ್ಲಿ ಬೈಕ್​ ಸವಾರನ ಮೇಲೆ ಬಿತ್ತು ಬೃಹತ್ ಮರ.. ವ್ಯಕ್ತಿ ಸಾವು

By

Published : Aug 7, 2022, 7:31 PM IST

Updated : Aug 7, 2022, 9:23 PM IST

two-wheeler-rider-died

ಚನ್ನರಾಯಪಟ್ಟಣದಿಂದ ಗುಲಸಿಂದ ಮಾರ್ಗವಾಗಿ ತನ್ನೂರಿಗೆ ತೆರಳುತ್ತಿದ್ದ ವೇಳೆ ಬೃಹತ್ ಮರ ಬೈಕ್ ಸವಾರನ ಮೇಲೆಯೇ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಸನ : ದ್ವಿಚಕ್ರ ವಾಹನ ಸವಾರನ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ರಂಗಶೆಟ್ಟಿ (40) ಮೃತಪಟ್ಟವರು. ಇವರು ಚನ್ನರಾಯಪಟ್ಟಣ ತಾಲೂಕು ಕಲ್ಲೆಸೋಮನಹಳ್ಳಿ ಗ್ರಾಮದ ವ್ಯಕ್ತಿ ಎಂದು ತಿಳಿದುಬಂದಿದೆ.

ಚನ್ನರಾಯಪಟ್ಟಣದಿಂದ ಗುಲಸಿಂದ ಮಾರ್ಗವಾಗಿ ತಮ್ಮೂರಿಗೆ ತೆರಳುತ್ತಿದ್ದ ವೇಳೆ ಬೃಹತ್ ಮರ ಬೈಕ್ ಸವಾರನ ಮೇಲೆಯೇ ಬಿದ್ದ ಪರಿಣಾಮ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದರು.

ಹಾಸನದಲ್ಲಿ ಬೈಕ್​ ಸವಾರನ ಮೇಲೆ ಬಿತ್ತು ಬೃಹತ್ ಮರ

ಚನ್ನರಾಯಪಟ್ಟಣದಿಂದ ಬಾಗೂರಿಗೆ ತೆರಳುವ ಮಾರ್ಗವಾಗಿ ನೂರಾರು ವರ್ಷ ಹಳೆಯದಾದ ಬೃಹತ್ ಮರಗಳಿದ್ದು, ಅದನ್ನ ಕೂಡಲೇ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಹಾಸನ: ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಖತರ್ನಾಕ್ ಖದೀಮ

Last Updated :Aug 7, 2022, 9:23 PM IST

ABOUT THE AUTHOR

...view details