ಕರ್ನಾಟಕ

karnataka

ನಾಮಪತ್ರ ವಾಪಸ್​ ಪಡೆಯುವುದು ಸಿ.ಆರ್.​ ಬಳ್ಳಾರಿಗೆ ಬಿಟ್ಟ ವಿಚಾರ: ಸಿಎಂ ಬೊಮ್ಮಾಯಿ

By

Published : Oct 12, 2021, 11:40 AM IST

CM Bommai

ಹಾನಗಲ್ ಉಪಕದನ ಕಣದಲ್ಲಿ ಬಿಜೆಪಿಯಿಂದ ಶಿವರಾಜ್ ಸಜ್ಜನ್​ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಸಮಾಧಾನ ಕೇಳಿಬಂದಿತ್ತು. ಬಳಿಕ ಸಿ ಆರ್ ಬಳ್ಳಾರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂಪಡೆಯಲು ನಾಳೆ (ಅ.13) ಕೊನೆಯ ದಿನವಾಗಿದ್ದು, ಬಿಜೆಪಿ ನಾಯಕರು ಮನವೊಲಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ. ಈ ವಿಚಾರವನ್ನು ಸಿಎಂ ಬೊಮ್ಮಾಯಿ ಕೂಡ ಸಿ ಆರ್​ ಬಳ್ಳಾರಿ ಅವರಿಗೆ ಬಿಟ್ಟಿದ್ದಾರೆ.

ದಾವಣಗೆರೆ: ಹಾನಗಲ್ ವಿಧಾನಸಭೆ ಉಪಚುನಾವಣೆ ಸಂಬಂಧ ಕ್ಷೇತ್ರದಲ್ಲಿ ಕೇಳಿಬಂದ ಅಸಮಾಧಾನ ಶಮನಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದರು. ಆದರೆ ಬಂಡಾಯ ಅಭ್ಯರ್ಥಿಯಾಗಿ ಸಿ ಆರ್​ ಬಳ್ಳಾರಿ ಅವರು ನಾಮಪತ್ರ ಸಲ್ಲಿಸಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ ಆರ್ ಬಳ್ಳಾರಿ ನಮ್ಮ ಕುಟುಂಬದ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ನಾನು ದಾವಣಗೆರೆಯಲ್ಲಿರುವ ವಿಚಾರ ತಿಳಿದು ಮಾತನಾಡಿಸಲು ಇಲ್ಲಿಗೆ ಬಂದಿದ್ದಾರೆ. ಆದರೆ ನಾಮಪತ್ರ ವಾಪಸ್​ ಪಡೆಯುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ.

ನಾಮಪತ್ರ ವಾಪಾಸು ಪಡೆಯುವುದು ಸಿ.ಆರ್​ ಬಳ್ಳಾರಿ ಅವರಿಗೆ ಬಿಟ್ಟ ವಿಚಾರ: ಸಿಎಂ ಬೊಮ್ಮಾಯಿ

ಹಾವೇರಿ ಜಿಲ್ಲೆಯ ಪ್ರಮುಖರ ಜೊತೆ ಚರ್ಚೆ ಮಾಡಿರುವೆ. ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

ಬೆಂಗಳೂರು ಉಸ್ತುವಾರಿ ಯಾರೆಂದು ಕಾದು ನೋಡಿ

ಬೆಂಗಳೂರು ಮುಂದಿನ ಉಸ್ತುವಾರಿ ಯಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ನೀವೇ ಕಾದು ನೋಡಿ ಎಂದರು.

ABOUT THE AUTHOR

...view details