ಕರ್ನಾಟಕ

karnataka

ಬೃಹತ್ ಶೋಭಾಯಾತ್ರೆ: ಎಡಿಜಿಪಿ ಅಲೋಕ್ ಕುಮಾರ್ ಚಿಕ್ಕಮಗಳೂರು ರೌಂಡ್ಸ್​

By

Published : Dec 7, 2022, 7:04 AM IST

Updated : Dec 7, 2022, 1:56 PM IST

Etv Bharat

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಬೃಹತ್ ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಖುದ್ದು ಎಡಿಜಿಪಿ ಅಲೋಕ್ ಕುಮಾರ್ ಮತ್ತು ಐಜಿಪಿ ಚಂದ್ರಗುಪ್ತ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಚಿಕ್ಕಮಗಳೂರು:ಇಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಿನ್ನೆಲೆ, ಎಂ.ಜಿ.ರಸ್ತೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದರು. ಇಂದು ಮಧ್ಯಾಹ್ನ ನಗರದ ಬಸವನಹಳ್ಳಿ ಮುಖ್ಯ ರಸ್ತೆ, ಎಂ.ಜಿ.ರಸ್ತೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಬೃಹತ್ ಶೋಭಾಯಾತ್ರೆ ಜರುಗಲಿದೆ.

ಮಂಗಳವಾರ ಸಂಕೀರ್ತನೆ ಯಾತ್ರೆ ನೆರವೇರಿತು. ಈ ವೇಳೆ ದತ್ತಪೀಠಕ್ಕೆ ತೆರಳುವ ಮಾರ್ಗಗಳಲ್ಲಿ ಮೊಳೆಗಳು ಪತ್ತೆಯಾಗಿದೆ. ಕಿಡಿಗೇಡಿಗಳು ಮೊಳೆ ಹಾಕಿರುವ ಆರೋಪ ಕೇಳಿ ಬಂದಿದೆ. ಮೊಳೆ ಪತ್ತೆಯಾಗುತ್ತಿದ್ದಂತೆ ಸಂಜೆ ಕಾಫಿನಾಡಿಗೆ ಎಡಿಜಿಪಿ ಅಲೋಕ್ ಕುಮಾರ್ ಆಗಮಿಸಿದ್ದು, ಸಂಜೆ ದತ್ತ ಪೀಠಕ್ಕೂ ಭೇಟಿ ನೀಡಿದ್ದರು.

ಎಡಿಜಿಪಿ ಅಲೋಕ್ ಕುಮಾರ್ ಚಿಕ್ಕಮಗಳೂರು ರೌಂಡ್ಸ್​

ಜಿಲ್ಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಚಂದ್ರಗುಪ್ತ ಮೊಕ್ಕಾಂ ಹೂಡಿದ್ದು, ಜಿಲ್ಲಾ ಪೊಲೀಸ್ ಕೈಗೊಂಡಿರುವ ಬಂದೋಬಸ್ತ್ ಹಾಗೂ ನಗರದಲ್ಲಿ ಸಂಚಾರ ಮಾಡಿ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಇದನ್ನೂ ಓದಿ:ದತ್ತ ಜಯಂತಿ ಉತ್ಸವಕ್ಕೆ ಅಡ್ಡಿ: ಕಿಡಿಗೇಡಿಗಳ ವಿರುದ್ಧ ಸಿ ಟಿ ರವಿ ಆಕ್ರೋಶ

Last Updated :Dec 7, 2022, 1:56 PM IST

ABOUT THE AUTHOR

...view details