ತುಮಕೂರು: ಚಿರತೆಯೊಂದು ಐದು ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡ ಘಟನೆ ಗುಬ್ಬಿ ತಾಲೂಕಿನ ಮಣಿಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಸಮಥ೯ ಗೌಡ (5) ಚಿರತೆಗೆ ಬಲಿಯಾದ ಬಾಲಕ. ಇಂದು ಮಧ್ಯಾಹ್ನ ಸುಮಾರು 3.45 ಕ್ಕೆ ಈ ಘಟನೆ ನಡೆದಿದೆ. ಶಿವಕುಮಾರ್ ಎಂಬುವವರ ಮಗ ಸಮಥ೯ ಗೌಡನ ಮೇಲೆ ಚಿರತೆ ದಾಳಿ ನಡೆಸಿ, ಬಾಲಕನ ಕುತ್ತಿಗೆಯನ್ನು ಕಚ್ಚಿ ಕೊಂದು ಹಾಕಿದೆ. ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಕಳೆದ ಎರಡು ವರೆ ತಿಂಗಳಿನಿಂದ ತುಮಕೂರು ತಾಲೂಕು, ಕುಣಿಗಲ್ ಹಾಗೂ ಗುಬ್ಬಿ ತಾಲೂಕಿನ ವ್ಯಾಪ್ತಿಯಲ್ಲಿ ಚಿರತೆ, ದಾಳಿ ನಡೆಸುತ್ತಿದ್ದು, ಈ ವರೆಗೆ ಮೂವರನ್ನು ಬಲಿ ತೆಗೆದುಕೊಂಡಿದೆ. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.
ತುಮಕೂರು
ತುಮಕೂರು ಜಿಲ್ಲೆಯಲ್ಲಿ ಇಂದು ಚಿರತೆಯೊಂದು ಬಾಲಕನೊಬ್ಬನನ್ನು ಬಲಿತೆಗೆದುಕೊಂಡಿದೆ.
ಗುಬ್ಬಿ ತಾಲೂಕಿನ ಮಣಿಕುಪ್ಪೆ ಗ್ರಾಮದ 5 ವಷ೯ದ ಬಾಲಕ ಸಮಥ೯ಗೌಡ ಚಿರತೆಗೆ ಬಲಿಯಾದ ದುರ್ದೈವಿಯಾಗಿದ್ದಾನೆ. ಇಂದು ಮಧ್ಯಾಹ್ನ ಸುಮಾರು 3.45ರಲ್ಲಿ ಈ ಘಟನೆ ನಡೆದಿದೆ. ಶಿವಕುಮಾರ್ ಎಂಬುವರ ಮಗ ಸಮಥ೯ಗೌಡ ನ ಮೇಲೆ ದಾಳಿನಡೆಸಿರುವ ಚಿರತೆ ಬಾಲಕನ ಕುತ್ತಿಗೆಯನ್ನು ಕಚ್ಚಿ ಕೊಂದು ಹಾಕಿದೆ. ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಳೆದ ಎರಡೂವರೆ ತಿಂಗಳಿನಿಂದ ತುಮಕೂರು ತಾಲ್ಲೂಕು, ಕುಣಿಗಲ್ ಹಾಗೂ ಗುಬ್ಬಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಇದರಿಂದ ಮೂವರು ಬಲಿಯಾದಂತಾಗಿದೆ.
ಚಿರತೆ ಹಾವಳಿಯಿಂದ ಜರ್ಜರಿತ ಗೊಂಡಿರುವ ಗ್ರಾಮಸ್ಥರು, ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ನಿಲ೯ಕ್ಷ ವಹಿಸಿದೆ ಎಂದು ಆರೋಪಿಸಿದ್ದಾರೆ.Conclusion: