ಶಿವಮೊಗ್ಗ: ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಕೋರ್ಟ್ ಎಂದರೇನು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅರ್ಥ ಆಗಿದೆ. ಹಾಗಾಗಿಯೇ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರಾಣ ಹೋದರೂ ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದೀರಿ, ಈಗ್ಯಾಕೆ ಪಾದಯಾತ್ರೆ ನಿಲ್ಲಿಸಿದ್ರಿ?, ನಿಮ್ಮ ಪ್ರಾಣ ಹೋಯಿತೇ? ಎಂದರು.
'ಸಿದ್ದರಾಮಯ್ಯ ಮೊದಲ ದಿನ ಪಾದಯಾತ್ರೆಗೆ ಬಂದು ಹೋದರು. ಡಿ.ಕೆ.ಶಿವಕುಮಾರ್ ಒಬ್ಬರೇ ಹೀರೋ ರೀತಿಯಲ್ಲಿ ಪಾದಯಾತ್ರೆ ಮುಂದುವರಿಸಿದರು. ಸಿದ್ದರಾಮಯ್ಯ, ಡಿಕೆಶಿ ನಡುವೆ ಮುಖ್ಯಮಂತ್ರಿಯಾಗುವ ಸ್ಪರ್ಧೆ ಇದೆ. ಹಾಗಾಗಿಯೇ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಸಿದ್ದರಾಮಯ್ಯನವರು ಆರೋಗ್ಯ ಸರಿ ಇಲ್ಲದಿದ್ದರೂ ಪಾದಯಾತ್ರೆಗೆ ಬಂದರು. ಆದ್ರೆ ಬರೆದಿಟ್ಟುಕೊಳ್ಳಿ, ಆಣೆ ಮಾಡಿ ಹೇಳುತ್ತೇನೆ, ಕರ್ನಾಟಕದಲ್ಲಿ ನಿಮ್ಮ ಸರ್ಕಾರ ಬರುವುದಿಲ್ಲ. ನೀವುಗಳ್ಯಾರೂ ಮುಖ್ಯಮಂತ್ರಿಯಾಗೋದಿಲ್ಲ. ಬಿಜೆಪಿಯವರೇ ಮುಖ್ಯಮಂತ್ರಿಯಾಗುತ್ತಾರೆ' ಎಂದು ಅವರು ಹೇಳಿದರು.
'ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಲಿಲ್ಲ'