ಕರ್ನಾಟಕ

karnataka

ತುಳು ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ದಯಾನಂದ ಕತ್ತಲ್ ಸಾರ್​ ನೇಮಕ

By

Published : Oct 17, 2019, 11:39 PM IST

ದಯಾನಂದ ಕತ್ತಲ್ ಸಾರ್

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ದಯಾನಂದ ಕತ್ತಲ್ ಸಾರ್ ಅಧಿಕಾರ ವಹಿಸಿಕೊಂಡರು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಮಂಗಳೂರು:ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕು. ಅಲ್ಲದೇ ಅದನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ತುಳು ಭಾಷೆಯು ಪಠ್ಯವಾಗಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಂತದವರೆಗೂ ಆಯೋಜನೆಯಾಗಬೇಕು. ಅಲ್ಲದೆ ತುಳು ಲಿಪಿಯ ಕಲಿಕೆ ಪ್ರಾಥಮಿಕ ಶಾಲೆಯಿಂದಲೇ ಆಗಬೇಕೆಂಬ ಬಯಕೆಯಿದೆ. ಈ ಯೋಜನೆಗಳು ಕಾರ್ಯಗತಗೊಳ್ಳಲು ನನ್ನ ಅಧಿಕಾರಾವಧಿಯಲ್ಲಿ ಅವಿರತ ಶ್ರಮ ಪಡುತ್ತೇನೆ ಎಂದು ಹೇಳಿದರು.

ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ದಯಾನಂದ ಕತ್ತಲ್ ಸಾರ್ ನೇಮಕ

ತುಳು ಭವನದೊಳಗೆ ಯಾರು ಬಂದರೂ ಹಿಂದಿರುಗುವಾಗ ತುಳುವಿನ ವಿಶ್ವರೂಪ ದರ್ಶನವಾಗಬೇಕು. ಆ ಶ್ರೇಷ್ಠ ಸ್ಥಿತಿ ನಿರ್ಮಾಣಕ್ಕೆ ಈ ಹಿಂದಿನ ಅಧ್ಯಕ್ಷರು ತುಂಬಾ ಶ್ರಮ ಪಟ್ಟಿದ್ದಾರೆ. ಅದಕ್ಕೆ ಸುಮಾರು ಮೂರು ಕೋಟಿ ರೂ.ಗಳ ಅವಶ್ಯಕತೆ ಇದೆ. ತುಳು ಭಾಷೆಯ ಸೊಗಡಿನ ಜಾನಪದ ಸಾಹಿತ್ಯದ ದಾಖಲೀಕರಣ ಆಗಬೇಕು. ಶಿಲಾಶಾಸನಗಳು ಉಳಿವಿಗೆ ಸಾಕಷ್ಟು ಪರಿಶ್ರಮ ಆಗಬೇಕು. ಅದಕ್ಕಾಗಿ ತುಳು ಅಕಾಡೆಮಿಯ ಹಿಂದಿನ ಅಧ್ಯಕ್ಷರುಗಳು, ತುಳು ಭಾಷೆಗೆ ಸೇವೆ ಸಲ್ಲಿಸಿದವರನ್ನು ಒಟ್ಟಿಗೆ ಸೇರಿಸಿ, ಸಲಹಾ ಸಮಿತಿ ರಚಿಸಿ ಈ ದೊಡ್ಡ ಹೊರೆಯನ್ನು ಮುಂದುವರಿಸುವ ಜವಾಬ್ದಾರಿ ವಹಿಸುತ್ತೇನೆ ಎಂದು ದಯಾನಂದ ಕತ್ತಲ್ ಸಾರ್ ಹೇಳಿದರು.

Intro:ಮಂಗಳೂರು: ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕು. ಅಲ್ಲದೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದರು.

ನಗರದ ಉರ್ವಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ತುಳುಭಾಷೆಯು ಪಠ್ಯವಾಗಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಂತದವರೆಗೂ ಆಯೋಜನೆಯಾಗಬೇಕು. ಅಲ್ಲದೆ ತುಳು ಲಿಪಿಯ ಕಲಿಕೆ ಪ್ರಾಥಮಿಕ ಶಾಲೆಯಿಂದಲೇ ಆಗಬೇಕೆಂಬ ಬಯಕೆಯಿದೆ. ಈ ಯೋಜನೆಗಳು ಕಾರ್ಯಗತಗೊಳ್ಳಲು ನನ್ನ ಅಧಿಕಾರಾವಧಿಯಲ್ಲಿ ಅವಿರತ ಶ್ರಮ ಪಡುತ್ತೇನೆ ಎಂದು ಹೇಳಿದರು.




Body:ತುಳುಭವನದೊಳಗೆ ಯಾರು ಬಂದರೂ ಹಿಂದಿರುಗುವಾಗ ತುಳುವಿನ ವಿಶ್ವರೂಪ ದರ್ಶನವಾಗಬೇಕು. ಆ ಶ್ರೇಷ್ಠ ಸ್ಥಿತಿ ನಿರ್ಮಾಣಕ್ಕೆ ಈ ಹಿಂದಿನ ಅಧ್ಯಕ್ಷರು ತುಂಬಾ ಶ್ರಮ ಪಟ್ಟಿದ್ದಾರೆ. ಅದಕ್ಕೆ ಸುಮಾರು ಮೂರು ಕೋಟಿ ರೂ.ಗಳ ಅವಶ್ಯಕತೆ ಇದೆ. ತುಳು ಭಾಷೆಯ ಸೊಗಡಿನ ಜಾನಪದ ಸಾಹಿತ್ಯದ ದಾಖಲೀಕರಣ ಆಗಬೇಕು. ಶಿಲಾಶಾಸನಗಳು ಉಳಿವಿಗೆ ಸಾಕಷ್ಟು ಪರಿಶ್ರಮ ಆಗಬೇಕು. ಅದಕ್ಕಾಗಿ ತುಳು ಅಕಾಡೆಮಿಯ ಹಿಂದಿನ ಅಧ್ಯಕ್ಷರುಗಳು, ತುಳು ಭಾಷೆಗೆ ಸೇವೆ ಸಲ್ಲಿಸಿದವರನ್ನು ಒಟ್ಟಿಗೆ ಸೇರಿಸಿ, ಸಲಹಾ ಸಮಿತಿ ರಚಿಸಿ ಈ ದೊಡ್ಡ ಹೊರೆಯನ್ನು ಮುಂದುವರಿಸುವ ಜವಾಬ್ದಾರಿ ವಹಿಸುತ್ತೇನೆ ಎಂದು ದಯಾನಂದ ಕತ್ತಲ್ ಸಾರ್ ಹೇಳಿದರು.

ನನ್ನ ಅಧಿಕಾರಾವಧಿಯಲ್ಲಿ ತುಳು ವಿದ್ವಾಂಸರ ಅಮೂಲ್ಯ ಕೃತಿಗಳನ್ನು ಪುನರ್ಮುದ್ರಿಸುವ ಕನಸು ಇದೆ. ತುಳವರಲ್ಲಿ ಒಂದು ವಿನಂತಿ ತಮಗೆ ಯಾವುದು ಬೇಕು ಅದನ್ನು ಅಧಿಕಾರ ಯುತವಾಗಿ ಕೇಳಬೇಕು. ನಾವದನ್ನು ನಮ್ಮ ಸಮಿತಿಯ ಮುಂದೆ ಇಟ್ಟು ಪರಾಮರ್ಶಿಸಿ ಅದೆಲ್ಲವನ್ನು ತುಳು ಸಾಹಿತ್ಯ ಅಕಾಡೆಮಿಯ ಮುಖಾಂತರ ಎಲ್ಲಾ ತುಳುವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ ತುಳುವಿನ ಉತ್ಕೃಷ್ಟ ವಾದ ಮೌಖಿಕ ಸಾಹಿತ್ಯ ಪಾಡ್ದನಗಳ ದಾಖಲೀಕರಣ ಮಾಡುವ ಬಯಕೆಯೂ ಇದೆ. ಅದೆಲ್ಲವನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಸಾಕಾರ ಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

ನಾನು ಕೇಂದ್ರ ಸರಕಾರದ ಉದ್ಯೋಗಿಯಾಗಿದ್ದು, ಅಂಚೆ ಇಲಾಖೆ ಅನ್ನ ಕೊಟ್ಟಿದೆ. ನನ್ನ ಹಿರಿಯ ಅಧಿಕಾರಿಗಳು ಪೂರ್ಣ ಸಹಕಾರ ನೀಡಿದ್ದಾರೆ. ಇಲಾಖೆಯ ನಿಬಂಧನೆಗಳಿಗೆ ಅನುಸಾರವಾಗಿ ಸರ್ವಿಸ್ ನ ಅವಧಿಯಲ್ಲಿ 5 ವರ್ಷಗಳ ಕಾಲ (ಲೀವ್ ವಿತ್ ಔಟ್ ಪೇ) ಸಂಬಳ ತೆಗೆದುಕೊಳ್ಳದೆ ರಜೆ ಮಾಡುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ಯಾವುದೇ ಸಂಬಳ ಪಡೆಯದೆ ತುಳುಮಾತೆಯ ಸೇವೆಗಾಗಿ ನನ್ನನ್ನು ಮುಡಿಪಾಗಿಡುವೆ ಎಂದು ಹೇಳಿದರು.

ಈ ಸಂದರ್ಭ ತಹಶಿಲ್ದಾರ್ ಗುರುಪ್ರಸಾದ್, ತುಳು ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರಾದ ನಾಗೇಶ್ ಕುಲಾಲ್, ವಿಜಯಲಕ್ಷ್ಮಿ, ದ.ಕ.ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ಪೆರಾರು ಕ್ಷೇತ್ರದ ಅಧ್ಯಕ್ಷ ಸುಧೀರ್ ಪ್ರಸಾದ್ ಶೆಟ್ಟಿ ಹಾಗೂ ದಯಾನಂದ ಕತ್ತಲ್ ಸಾರ್ ಅವರ ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.

Reporter_Vishwanath Panjimogaru


Conclusion:

ABOUT THE AUTHOR

...view details