ಕರ್ನಾಟಕ

karnataka

ಅಂಬೇಡ್ಕರ್ ಕನಸು ನನಸು ಮಾಡುವ ಅವಶ್ಯಕತೆ ಇದೆ: ಸಿಎಂ ಯಡಿಯೂರಪ್ಪ

By

Published : Sep 19, 2019, 11:48 PM IST

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಆರ್ಥಿಕ ಅಭಿವೃದ್ಧಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಗದೀಶ್ ಶೆಟ್ಟರ್, ಸಚಿವ ಗೋವಿಂದ ಕಾರಜೋಳ ಹಾಗೂ ಕೆಲ ಶಾಸಕರು ಭಾಗಿಯಾಗಿದ್ದರು.

ಅರಿವು ಮೂಡಿಸುವ ಕಾರ್ಯಕ್ರಮ

ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಆರ್ಥಿಕ ಅಭಿವೃದ್ಧಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮ ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಗದೀಶ್ ಶೆಟ್ಟರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಮಹೇಶ್, ರಾಜೀವ್ ಹಾಗೂ ಹೆಚ್.ಕೆ. ಕುಮಾರಸ್ವಾಮಿ ಭಾಗಿಯಾಗಿದ್ದರು.

ಪ.ಜಾ ಮತ್ತು ಪ.ಪಂ ಸಮುದಾಯಗಳ ಆರ್ಥಿಕ ಅಭಿವೃದ್ಧಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮ

ದಲಿತ ಉದ್ಯಮಿಗಳನ್ನು ಅಸ್ಪೃಶ್ಯರಂತೆ ನೋಡಲಾಗುತ್ತಿದೆ. ದಲಿತ ಉದ್ಯಮಿಗಳು ಕಚೇರಿಗಳಿಗೆ ಬಂದರೆ ಅಧಿಕಾರಿಗಳು ನಮ್ಮ ಬಳಿ ಸೌಜನ್ಯಯುತವಾಗಿ ಮಾತನಾಡೊಲ್ಲ, ಕುಳಿತುಕೊಳ್ಳಿ ಎಂದು ಸಹ ಹೇಳೋದಿಲ್ಲ. ಈ ಬಗ್ಗೆ ನಮಗೆ ತುಂಬಾ ನೋವಿದೆ ಎಂದು ಸಿಎಂ ಮತ್ತು ಮಾಜಿ ಸಿಎಂ ಎದುರು ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ್ ತಮ್ಮ ನೋವನ್ನು ತೋಡಿಕೊಂಡರು.

ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಸಮಸಮಾಜ ನಿರ್ಮಾಣದ ಕನಸು ಕಾಣಲು ದುರ್ಬಲರನ್ನು ಸಬಲರನ್ನಾಗಿ ಮಾಡುವ ಅವಶ್ಯಕತೆ ಇದೆ. ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡುವ ಅವಶ್ಯಕತೆ ಹೆಚ್ಚಿದೆ. ರಾಜ್ಯದ 47 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯಾಗಿದ್ದು, ಅದರಲ್ಲಿ 50 ಸಾವಿರ ಹುದ್ದೆಗಳು ಎಸ್ಸಿ, ಎಸ್ಟಿಗಳಿಗಾಗಿ ಮೀಸಲಿವೆ. ದಲಿತ ಉದ್ಯಮಿಗಳಿಗೆ 656 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸಮಗ್ರ ಕೈಗಾರಿಕಾ ನೀತಿ ಜಾರಿಗೆ ತರಲು ಮುಂದಾಗಿದ್ದೇವೆ. ದಲಿತ ಉದ್ಯಮಿಗಳಿಗೆ ರಿಯಾಯಿತಿ, ಪ್ರೋತ್ಸಾಹ ನೀಡುತ್ತೇವೆ. ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ಭೂಮಿಯನ್ನು ಶೇ.75 ರಷ್ಟು ರಿಯಾಯಿತಿ ದರದಲ್ಲಿ ನೀಡುವ ಚಿಂತನೆ ಇದೆ ಎಂದು ತಿಳಿಸಿದರು.

Intro:Sc stBody:ಎಸ್ಸಿ ಎಸ್ಟಿ ಸಮುದಾಯಗಳ ಆರ್ಥಿಕ ಅಭಿವೃದ್ಧಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮ ಇಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು

ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಮಹೇಶ್, ರಾಜೀವ್, ಹೆಚ್.ಕೆ.ಕುಮಾರ ಸ್ವಾಮಿ.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ,ಸಿಎಂ ಯಡಿಯೂರಪ್ಪ ಕೈ ಕುಲುಕಿದರು ನಂತರ, ನಗುಮುಖದೊಂದಿಗೆ ಸಿದ್ದರಾಮಯ್ಯನವರನ್ನು ಮಾತನಾಡಿಸಿದರು ಸಿಎಂ ಯಡಿಯೂರಪ್ಪ ಅಕ್ಕಪಕ್ಕದಲ್ಲೆ ಕುಳಿತರು

ಯಡಿಯೂರಪ್ಪ ಪಕ್ಕದಲ್ಲಿ ಕುಳಿತಿದ್ದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯನವರು ಬಂದ ಬಳಿಕ ಅವರಿಗೆ ಸೀಟು ಬಿಟ್ಟು ಕೊಟ್ಟ ಸಚಿವ ಜಗದೀಶ್ ಶೆಟ್ಟರ್.ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ದಲಿತ ಉದ್ಯಮಿಗಳನ್ನು ಅಸ್ಪೃಶ್ಯರಂತೆ ನೋಡಲಾಗುತ್ತಿದೆ.
ಉದ್ಯಮಿಗಳು ಕಚೇರಿಗಳಿಗೆ ಭೇಟಿ ಮಾಡಿದ್ರೆ ಅಧಿಕಾರಿಗಳು ನಮ್ಮ ಬಳಿ ಸೌಜನ್ಯಯುತವಾಗಿ ಮಾತನಾಡೊಲ್ಲ.ಕುಳಿತುಕೊಳ್ಳಿ ಎಂದು ಸಹ ಅಧಿಕಾರಿಗಳು ಹೇಳೊದಿಲ್ಲ.ಈ ಬಗ್ಗೆ ನಮಗೆ ತುಂಬಾ ನೋವಿದೆ.ಸಿಎಂ ಮತ್ತು ಮಾಜಿ ಸಿಎಂ ಎದುರು ದಲಿತ ಉದ್ಯಮಿಗಳ ನೋವನ್ನು ಹೇಳಿಕೊಂಡ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ್ ತಮ್ಮ ನೋವನ್ನು ತೋಡಿಕೊಂಡರು.

ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ಸಮಸಮಾಜ ನಿರ್ಮಾಣದಷಕನಸು ಕಾಣಲು ದುರ್ಬಲರನ್ನು ಸಬಲರನ್ನಾಗಿ ಮಾಡುವ ಅವಶ್ಯಕತೆ ಇದೆ.ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡುವ ಅವಶ್ಯಕತೆ ಹಿಂದಿಗಿಂತ ಈಗ ಹೆಚ್ಚಿನ ಅಗತ್ಯವಿದೆ.
ರಾಜ್ಯದ 47 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ.50 ಸಾವಿರ ಎಸ್ಸಿ ಎಸ್ಟಿ ಉದ್ಯಮಗಳಿವೆ.
ದಲಿತ ಉದ್ಯಮಿಗಳಿಗೆ 656 ಕೋಟಿ ವೆಚ್ಚವನ್ನು ಮಾಡಲಾಗಿದೆ.
ಸಮಗ್ರ ಕೈಗಾರಿಕಾ ನೀತಿ ಜಾರಿಗೆ ನೀಡಲು ಮುಂದಾಗಿದ್ದೇವೆ.ಉದ್ಯಮಿಗಳಿಗೆ ರಿಯಾಯಿತಿ, ಪ್ರೋತ್ಸಾಹ ನೀಡುತ್ತೇವೆ.ಎಸ್ಸಿ ಎಸ್ಟಿ ಉದ್ಯಮಿಗಳಿಗೆ ಭೂಮಿಯನ್ನು 75 ರಷ್ಟು ರಿಯಾಯಿತಿ ದರದಲ್ಲಿ ನೀಡುವ ಚಿಂತನೆ ಇದೆ.ಬ್ಯಾಂಕ್ ಸಾಲ ಪಡೆದು ಸ್ಥಾಪಿಸುವ ಉದ್ಯಮಿಗಳಿಗೆ ಸಾಫ್ಟ್ ಸೀಡ್ ಸಾಲ ನೀಡಲಾಗುತ್ತೆ.10 ಕೋಟಿಯಷ್ಟು ಹೆಚ್ಚಿನ ಸಾಲಪಡೆಯುವವರಿಗೆ ನಾಲ್ಕರಷ್ಟು ಬಡ್ಡಿ ವಿಧಿಸಲಾಗಿದೆ ಎಂದರುConclusion:Photos attached

ABOUT THE AUTHOR

...view details