ETV Bharat / state

ಬಸ್ - ಬೈಕ್ ಡಿಕ್ಕಿಯಿಂದ ಕೊನೆಯುಸಿರೆಳೆದ ಮೂವರು ಯುವಕರು: ಮತ್ತೊಂದೆಡೆ ಸಿಡಿಲಿಗೆ ಇಬ್ಬರ ಬಲಿ - Terrible road accident

author img

By ETV Bharat Karnataka Team

Published : May 27, 2024, 6:49 PM IST

ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರ ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇನ್ನು ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು ಸಿಡಿಲು ಬಡಿದು ಇಬ್ಬರು ಮೃತಪಟ್ಟ ಪ್ರತ್ಯೇಕ ಘಟನೆ ಕೂಡ ನಡೆದಿದೆ.

TERRIBLE ROAD ACCIDENT
ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕರು (ETV Bharat)

ಕಲಬುರಗಿ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಮಲಾಪುರ ತಾಲೂಕಿನ ಡೊಂಗರಗಾಂವ ಕ್ರಾಸ್ ಹತ್ತಿರ ಇಂದು ನಡೆದಿದೆ. ವಿಶಾಲ್​ ಜಾಧವ (20), ಚಂದ್ರಕಾಂತ ಹೊಳಕುಂದಿ (23) ಮತ್ತು ಸಮೀರ್ (23) ಮೃತ ದುರ್ದೈವಿಗಳು.

ಮೃತ ಮೂವರು ಕಿಣ್ಣಿ ಸಡಕ್ ಗ್ರಾಮದವರಾಗಿದ್ದು, ಬೈಕ್ ಮೇಲೆ ಕಮಲಾಪುರಕ್ಕೆ ಹೊರಟಿದ್ದಾಗ ಘಟನೆ ನಡೆದಿದೆ. ಮೃತ ಚಂದ್ರಕಾಂತನಿಗೆ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರದಲ್ಲಿ ಉದ್ಯೋಗ ಲಭಿಸಲಿತ್ತು. ನಾಳೆ (ಮೇ 28) ಹುಬ್ಬಳಿಯಲ್ಲಿ ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನವಿತ್ತು. ಇಂದು ಬೆಳಗ್ಗೆ ಹುಬ್ಬಳ್ಳಿಗೆ ತೆರಳಲು ಸಜ್ಜಾಗಿದ್ದ. ಹಾಗಾಗಿ ಸ್ನೇಹಿತರಾದ ಸಮೀರ ಹಾಗೂ ವಿಶಾಲ್​ ಸೇರಿ ಚಂದ್ರಕಾಂತನನ್ನು ಕಮಲಪುರದವರಿಗೆ ಬಿಟ್ಟುಬರಲು ಬೈಕ್ ಮೇಲೆ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ವಿಜಯಪುರದಿಂದ ಬಸವಕಲ್ಯಾಣಕ್ಕೆ ಹೊರಟಿದ್ದ ಸಾರಿಗೆ ಬಸ್ ಮತ್ತು ಇವರ ಬೈಕ್​ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವಗಳನ್ನು ಸಾಗಿಸಲಾಗಿದೆ. ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು ಸಿಡಿಲು ಬಡಿದು ಇಬ್ಬರು ಮೃತಪಟ್ಟ ಪ್ರತ್ಯೇಕ ಘಟನೆ ಕೂಡ ನಡೆದಿದೆ.

ಇದನ್ನೂ ಓದಿ: 4 ತಿಂಗಳು ಹಿಂದಿನ ಹಿಟ್​ ಆ್ಯಂಡ್​ ರನ್ ಕೇಸ್: ವಾಹನ ಮೇಲಿನ ಹಸು ಚಿತ್ರ ಆಧರಿಸಿ ಆರೋಪಿಗಳ ಬಂಧನ - BENGALURU HIT AND RUN CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.