ETV Bharat / state

ಜಿಲ್ಲಾಧಿಕಾರಿಯಿಂದ ಸೀರೆಯಲ್ಲಿ ಮತ ಜಾಗೃತಿ: ಮತದಾರರಿಗೆ ಹಾಡಿನ ಮೂಲಕ ವಿಶಿಷ್ಟ ಸ್ವಾಗತ - Special Voting Awareness

author img

By ETV Bharat Karnataka Team

Published : Apr 26, 2024, 11:01 AM IST

Updated : Apr 26, 2024, 12:54 PM IST

Special Voting Awareness in Chamarajanagara
ಜಿಲ್ಲಾಧಿಕಾರಿ ಸೀರೆಯಲ್ಲಿ ಮತದಾನ ಜಾಗೃತಿ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳ ಮೂಲಕ ಮತದಾರರನ್ನು ಆಕರ್ಷಿಸಲಾಗುತ್ತಿದೆ. ಕೈ ಮಗ್ಗದಿಂದ ನೇದಿರುವ ರೇಷ್ಮೆ ಸೀರೆಯನ್ನುಟ್ಟು ಅಧಿಕಾರಿಗಳು ಮತದಾನ ಜಾಗೃತಿ ಮೂಡಿಸಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿವೆ. ಈ ಮೂಲಕ ಮತದಾನ ಜಾಗೃತಿ ಮತ್ತು ಮತದಾರರನ್ನು ಪ್ರೋತ್ಸಾಹಿಸಲು ಜಿಲ್ಲಾಡಳಿತ ಸಕಲ ಹೆಜ್ಜೆಗಳನ್ನಿಟ್ಟಿದೆ.

Special Voting Awareness
ಚಾಮರಾಜನಗರ ಲೋಕಸಭಾ ಕ್ಷೇತ್ರ

ಸೀರೆಯಲ್ಲಿ ಮತಜಾಗೃತಿ: ಮತದಾನದ ದಿನವಾದ ಇಂದು ಕೂಡ ಜಿಲ್ಲಾಡಳಿತ ಮತಜಾಗೃತಿಗೆ ಮುಂದಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ , ಜಿಲ್ಲೆಯ ಉಪ ಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಅವರು ಧರಿಸಿರುವ ರೇಷ್ಮೆ ಸೀರೆಯಲ್ಲಿ ಮತದಾನ ಘೋಷಣೆ ನೇಯಲಾಗಿದೆ‌. ಕೈ ಮಗ್ಗದಿಂದ ನೇದಿರುವ ರೇಷ್ಮೆ ಸೀರೆಯಲ್ಲಿ ಚುನಾವಣಾ ಪರ್ವ- ದೇಶದ ಗರ್ವ ಎಂಬ ಘೋಷವಾಕ್ಯವನ್ನು ಬರೆಯಲಾಗಿದೆ. ಮತದಾನವನ್ನು ಪ್ರೋತ್ಸಾಹಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಈ ಕಾರ್ಯ ಗಮನ ಸೆಳೆಯಿತು.

Special Voting Awareness
ಚಾಮರಾಜನಗರ ಲೋಕಸಭಾ ಕ್ಷೇತ್ರ

ಹಾಡಿನಿಂದ ಮತದಾರರಿಗೆ ಸ್ವಾಗತ: ರಾಮಸಮುದ್ರದಲ್ಲಿ ತೆರೆದಿರುವ ಸಾಂಸ್ಕೃತಿಕ ಮತಗಟ್ಟೆಯಲ್ಲಿಜಾನಪದ ಕಲಾವಿದರು ಮತದಾರರು ಸ್ವಾಗತಿಸಿ ಮತಗಟ್ಟೆಗೆ ಕರೆದೊಯ್ದರು. ತಂಬೂರಿ ಪದ, ಡಮರುಗ, ತಮಟೆ ವಾದ್ಯಗಳ ಮೂಲಕ ಮತದಾರರನ್ನು ಅದ್ಧೂರಿಯಾಗಿ ಸ್ವಾಗತಿಸಿ ಹಬ್ಬದಂತೆ ಸಂಭ್ರಮಿಸಲಾಯಿತು. ಇನ್ನು, ಮತಗಟ್ಟೆ ಮುಂಭಾಗ ಸೆಲ್ಫಿ ಪಾಯಿಂಟ್ ಕೂಡ ಮಾಡಲಾಗಿದೆ.

Special Voting Awareness
ಚಾಮರಾಜನಗರ ಲೋಕಸಭಾ ಕ್ಷೇತ್ರ

ಮತ್ತೊಂದೆಡೆ ಮತದಾನ ಆರಂಭ ಆಗುತ್ತಿದ್ದಂತೆ ವಿಶೇಷ ಅತಿಥಿ ಬಂದ ಘಟನೆ ಚಾಮರಾಜನಗರ ತಾಲೂಕಿನ ಸಣ್ಣೇಗಾಲ ಗ್ರಾಮದಲ್ಲಿ ನಡೆಯಿತು. ಮತದಾನ ಆರಂಭಗೊಳ್ಳುತ್ತಿದ್ದಂತೆ ಎಲ್ಲಿಂದಲೋ ಬಂದ ರಾಷ್ಟ್ರಪಕ್ಷಿ ನವಿಲು ಮತಗಟ್ಟೆಗೆ ಎಂಟ್ರಿ ಕೊಟ್ಟಿದೆ. ಬಳಿಕ, ಮತದಾರರನ್ನು ಕಂಡು ಸ್ವಲ್ಪ ಹೊತ್ತಿನ ಬಳಿಕ ಹಾರಿ ಹೋಗಿದೆ.

Special Voting Awareness
ಚಾಮರಾಜನಗರ ಲೋಕಸಭಾ ಕ್ಷೇತ್ರ

ವಿಶೇಷ ಮತಗಟ್ಟೆ: ಲಿಂಗ ಸಮಾನತೆ ಹಾಗೂ ಮತದಾನದಲ್ಲಿ ಮಹಿಳೆಯರ ಭಾಗವಹಿಸುವಿಕೆ ಉತ್ತೇಜಿಸಲು 'ಸಖಿ ಸೌರಭ' ಶೀರ್ಷಿಕೆಯಡಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿ ಮಹಿಳೆಯರನ್ನು ಮತದಾನಕ್ಕೆ ಪ್ರೇರೇಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 16 ಸಖಿ ಸೌರಭ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಸಾಂಸ್ಕೃತಿಕ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಮತಗಟ್ಟೆ ಮುಂಭಾಗ ಭರಚುಕ್ಕಿ ಜಲಪಾತದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ‌. ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರೇಕ್ಷಣೀಯ ಸ್ಥಳವಾದ ಭರಚುಕ್ಕಿ ಜಲಪಾತದ ಸೊಬಗನ್ನು ಬಹಳ ವಿಶಿಷ್ಟವಾಗಿ ಮತಗಟ್ಟೆಯಲ್ಲಿ ಸೃಷ್ಟಿಸಲಾಗಿದೆ. ಸಾಂಸ್ಕೃತಿಕ ಮತಗಟ್ಟೆ ಕಲ್ಪನೆಯಲ್ಲಿ ಬಹು ವಿಶಿಷ್ಟವಾಗಿ ಸದರಿ ಬೂತ್ ರಚಿಸಲಾಗಿದ್ದು, ಮತದಾರರನ್ನು ಆಕರ್ಷಿಸುತ್ತಿದೆ.

ಚಾಮರಾಜನಗರ ಜಿಲ್ಲೆಯು ಶೇಕಡಾ 48ರಷ್ಟು ಅರಣ್ಯ ಸಂಪತ್ತನ್ನು ಹೊಂದಿರುವ ಜಿಲ್ಲೆಯಾಗಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಬುಡಕಟ್ಟು ಸಮುದಾಯವನ್ನು ಹೊಂದಿದೆ. ಅರಣ್ಯ ಮಹತ್ವ ಹಾಗೂ ಬುಡಕಟ್ಟು ಸಂಸ್ಕೃತಿ ತೋರಿಸುವ ಸಲುವಾಗಿ ಹಲವು ಮತಗಟ್ಟೆಗಳನ್ನು ಸುಂದರವಾಗಿ ಸಿದ್ಧಪಡಿಸಲಾಗಿದೆ. ಅರಣ್ಯ ವಾಸಿಗಳು ಬಳಸುವ ವಸ್ತುಗಳು, ಆಹಾರ ಪದ್ಧತಿ, ಆಚಾರ ವ್ಯವಸ್ಥೆ ಇತ್ಯಾದಿಗಳನ್ನು ಹಸಿರು ಮತಗಟ್ಟೆ ಮತ್ತು ಬುಡಕಟ್ಟು ಮತಗಟ್ಟೆಗಳಲ್ಲಿ ಚಿತ್ರಿಸಲಾಗಿದೆ.

'ಜಾನಪದ ಕಲೆಗಳ ತವರೂರು ಚಾಮರಾಜನಗರ ' ಚಲುವ ಚಾಮರಾಜ ನಗರ ಹೆಸರಿಗೆ ಸರಿಸಾಟಿಯಾಗಿ ಜಿಲ್ಲೆಯ ಸಾಂಸ್ಕೃತಿಕ ಮಹತ್ವ ಸಾರುವ ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಚಾಮರಾಜನಗರದ ರಾಮಸಮುದ್ರದ ಮತಗಟ್ಟೆಯಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಬೀಸುವಕಲ್ಲು, ಒಣಕೆ, ಜನಪದ ಸಂಗೀತ ಪರಿಕರಗಳಿದ್ದು ಜನಪದ ಕಲಾವಿದರು ಕೂಡ ಇರಲಿದ್ದಾರೆ.

ಇದನ್ನೂ ಓದಿ: Watch; ಉತ್ಸಾಹದಿಂದ ಹಕ್ಕು ಚಲಾಯಿಸುತ್ತಿರುವ ನಟ-ನಟಿಯರು: ಜಗ್ಗೇಶ್​, ಗಣೇಶ್ -​ ರಾಜ್​ ಫ್ಯಾಮಿಲಿಯಿಂದ ವೋಟಿಂಗ್​​​ - Sandalwood Stars Voting

ಜಿಲ್ಲೆಯಲ್ಲಿ ಯುವ ಮತದಾರರನ್ನು ಮತದಾನದತ್ತ ಸೆಳೆಯಲು, ನೈತಿಕ ಮತದಾನ ಬೆಂಬಲಿಸಲು ಪ್ರೇರೆಪಿಸುವ ಸದುದ್ದೇಶದಿಂದ ಯುವ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ರಾಹುಲ್ ದ್ರಾವಿಡ್ ಸೇರಿದಂತೆ ಖ್ಯಾತನಾಮರ ಭಾವಚಿತ್ರಗಳನ್ನು ಅಳವಡಿಸಿ ಮತದಾನದ ಮಹತ್ವ ಸಾರಲಾಗಿದೆ.

Last Updated :Apr 26, 2024, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.