ETV Bharat / state

ಬೆಳಗಾವಿ : ಮರಕ್ಕೆ ಕಾರು ಡಿಕ್ಕಿ, ಆರು ಮಂದಿ ದುರ್ಮರಣ

author img

By ETV Bharat Karnataka Team

Published : Feb 22, 2024, 6:09 PM IST

Updated : Feb 22, 2024, 7:43 PM IST

ಖಾನಾಪುರ ತಾಲೂಕಿನ ಮಂಗ್ಯಾನಕೊಪ್ಪ ಹಾಗೂ ಬೀಡಿ ಗ್ರಾಮದ ಮಧ್ಯೆ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದಾರೆ.

ಬೆಳಗಾವಿ
ಬೆಳಗಾವಿ

ಮರಕ್ಕೆ ಡಿಕ್ಕಿಹೊಡೆದ ಕಾರು

ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಖಾನಾಪುರ ತಾಲೂಕಿನ ಮಂಗ್ಯಾನಕೊಪ್ಪ ಹಾಗೂ ಬೀಡಿ ಗ್ರಾಮದ ಮಧ್ಯೆ ಇಂದು ಮಧ್ಯಾಹ್ನ ಸಂಭವಿಸಿದೆ.

ಮೃತರು ಧಾರವಾಡ ನಗರದ ಲಂಗೋಟಿ ಗಲ್ಲಿ ನಿವಾಸಿಗಳು ಎಂದು ತಿಳಿದು ಬಂದಿದೆ. ಕಾರು ಚಾಲಕ ಶಾರುಕ್ ಪೆಂಡಾರಿ (30), ಇಕ್ಬಾಲ್ ಜಮಾದಾರ್ (50), ಸಾನಿಯಾ ಲಂಗೋಟಿ (37), ಉಮ್ರ ಬೇಗಂ ಲಂಗೋಟಿ(17), ಶಬಾನಾಮ್​ ಲಂಗೋಟಿ (37), ಪರಾನ್ ಲಂಗೋಟಿ (13) ಮೃತ ದುರ್ದೈವಿಗಳು. ಫರಾಥ್ ಬೆಟಗೇರಿ (18), ಸೋಫಿಯಾ ಲಂಗೋಟಿ(22), ಸಾನಿಯಾ ಇಕ್ಬಾಲ್ ಜಮಾದಾರ್(36), ಮೋಹಿನ್ ಲಂಗೋಟಿ(7) ಗಾಯಾಳುಗಳು ಎಂದು ಗುರುತಿಸಲಾಗಿದೆ.

ನಜ್ಜುಗುಜ್ಜಾದ ವಾಹನ : ಕಾರಿನಲ್ಲಿ ಕಿತ್ತೂರು ಕಡೆಯಿಂದ ಖಾನಾಪುರ ತಾಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆಗೆ ಈ ಕುಟುಂಬಸ್ಥರು ಹೊರಟಿದ್ದರು. ಆದರೆ ಚಾಲಕನ ನಿಯಂತ್ರಣ ತಪ್ಪಿ ಕಾರು ನೇರವಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕ ಮತ್ತು ಇನ್ನೊಬ್ಬನ ದೇಹಗಳು ಛದ್ರ ಛಿದ್ರಗೊಂಡಿವೆ. ವಾಹನ ಸಂಪೂರ್ಣ ನಜ್ಜುಗುಜ್ಜಾಗಿವೆ.

ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರು ತೆರಳಿ ಕಾರಿನಿಂದ ಮೃತದೇಹಗಳನ್ನು ಹೊರ ತೆಗೆದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಜರುಗಿದೆ.

ಇದನ್ನೂ ಓದಿ: ರಾಯಚೂರು ಮಂತ್ರಾಲಯ ಹೆದ್ದಾರಿಯಲ್ಲಿ ಬಸ್ ಬೈಕ್ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

Last Updated : Feb 22, 2024, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.