ETV Bharat / state

ದೊಡ್ಡಬಳ್ಳಾಪುರದಲ್ಲಿ ತಮ್ಮನ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಿದ ಅಣ್ಣ - Property Dispute

author img

By ETV Bharat Karnataka Team

Published : Mar 28, 2024, 10:09 AM IST

Updated : Mar 28, 2024, 11:30 AM IST

ಅಣ್ಣ ತನ್ನ ಸ್ವಂತ ತಮ್ಮನ ಮನೆಯನ್ನು ಜೆಸಿಬಿಯಿಂದ ಕೆಡವಿ ವಸ್ತುಗಳನ್ನು ನಾಶಪಡಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

DESTROYED HOUSE
ಧ್ವಂಸಗೊಂಡಿರುವ ಮನೆ

ಘಟನೆಯ ಕುರಿತು ಶ್ರೀನಿವಾಸ್​ ಹೇಳಿಕೆ

ದೊಡ್ಡಬಳ್ಳಾಪುರ: ತಮ್ಮನ ಮೇಲಿನ ದ್ವೇಷಕ್ಕೆ ಆತನ ಮನೆಯನ್ನು ಅಣ್ಣ ಜೆಸಿಬಿ ಯಂತ್ರದಿಂದ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಮನೆಯ ಭಾಗಾಂಶ ನೀಡುವ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಜಗಳ ನಡೆಯುತ್ತಿತ್ತು. ಈ ವಿವಾದ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಮನೆ ಕೆಡವಿದ ಅಣ್ಣನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಸಂಪೂರ್ಣ ವಿವರ: ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಮಾರ್ಚ್‌ 26​ರ ಮಧ್ಯಾಹ್ನ ಘಟನೆ ನಡೆದಿದೆ. ಅಣ್ಣ ಸಂಪತ್​​​ ಕುಮಾರ್​​​ ಮತ್ತು ತಮ್ಮ ಶ್ರೀನಿವಾಸ್​ ನಡುವೆ ನಿವೇಶನ ವಿವಾದವಿದ್ದು, ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ವಿವಾದ ವಿಚಾರಣೆಗೆ ಬಾಕಿಯಿದ್ದರೂ ಸಂಪತ್ ಕುಮಾರ್ ಜೆಸಿಬಿಯಿಂದ ಮನೆ ಧ್ವಂಸ ಮಾಡಿದ್ದಾರೆ ಎಂದು ಶ್ರೀನಿವಾಸ್​ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​​​ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಶ್ರೀನಿವಾಸ್ ಅವರ ಪತ್ನಿ ಭಾಗ್ಯಲಕ್ಷ್ಮೀ, "ನ್ಯಾಯಾಲಯದಲ್ಲಿ ಈ ಕುರಿತು ಅರ್ಜಿ ಹಾಕಿದ್ದೇವೆ. ಸಂಪತ್ ಕುಮಾರ್​​ ಪ್ರತಿನಿತ್ಯ ನಮ್ಮ ಮನೆ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ಕುರಿತು ನ್ಯಾಯ ಒದಗಿಸುವಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಮನೆಯ ದಿವಾನ, ಕುರ್ಚಿ, ಬೀರು ಸೇರಿದಂತೆ ಹಲವು ಪೀಠೋಪಕರಣಗಳು ಹಾಗೂ ಮನೆ ಕಿಟಕಿ ಬಾಗಿಲು, ಟೈಲ್ಸ್​ ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಕನಿಷ್ಠ ಪಕ್ಷ ಮಾಹಿತಿ ನೀಡಿದ್ದರೆ ನಾವು ಅವುಗಳನ್ನು ಉಳಿಸಿಕೊಳ್ಳುತ್ತಿದ್ದೆವು" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸ್​ ಮಾತನಾಡಿ, "ಸಹೋದರನ ಮೋಸದಿಂದ ನಾವು ಇಂದು ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮ ಭಾಗದ ಮನೆಯನ್ನು ನಮ್ಮಿಂದ ಮೋಸ ಹಾಗೂ ದೌರ್ಜನ್ಯದ ಮೂಲಕ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಮಗೆ ನ್ಯಾಯಕೊಡಿ" ಎಂದರು.

ಇದನ್ನೂ ಓದಿ: ತೋಟಕ್ಕೆ ಕುಡಿಯುವ ನೀರು ಬಳಸಿದ ಆರೋಪ: ಗ್ರಾ.ಪಂ ಕಾರ್ಯದರ್ಶಿ ವಿರುದ್ಧ ಎಫ್​ಐಆರ್ - Drinking Water Misuse

Last Updated : Mar 28, 2024, 11:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.