ETV Bharat / state

ಬೆಂಗಳೂರು: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಂದ ಮತಗಟ್ಟೆ ಬಳಿ ಖಾಲಿ ಚೊಂಬು ಪ್ರದರ್ಶನ - Youth Congress Protest

author img

By ETV Bharat Karnataka Team

Published : Apr 26, 2024, 5:23 PM IST

ರಾಜಾಜಿನಗರ ಮತಗಟ್ಟೆ ಬಳಿ ಖಾಲಿ ಚೊಂಬು ಪ್ರದರ್ಶನ
ರಾಜಾಜಿನಗರ ಮತಗಟ್ಟೆ ಬಳಿ ಖಾಲಿ ಚೊಂಬು ಪ್ರದರ್ಶನ

ರಾಜಾಜಿನಗರ ಮತಗಟ್ಟೆಯ ಸಮೀಪ ಯೂತ್​ ಕಾಂಗ್ರೆಸ್​ ಕಾರ್ಯಕರ್ತರು ಚೊಂಬು ಪ್ರದರ್ಶಿಸಿದರು.

ಬೆಂಗಳೂರು: 'ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು' ಎಂಬ ಕಾಂಗ್ರೆಸ್‌ ಪಕ್ಷದ ಜಾಹೀರಾತಿಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಈ ನಡುವೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಇಂದು ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು ಚೊಂಬು ಹಾಗೂ ಗ್ಯಾಸ್‌ ಸಿಲಿಂಡರ್‌ ಪ್ರದರ್ಶನ ಮಾಡಿದರು.

ಖಾಲಿ ಚೊಂಬು ಪ್ರದರ್ಶನ
ಖಾಲಿ ಚೊಂಬು ಪ್ರದರ್ಶನ

ಬೆಂಗಳೂರಿನ ರಾಜಾಜಿನಗರದ ಮಂಜುನಾಥ್ ನಗರದಲ್ಲಿರುವ ಗೌತಮ್ ಕಾಲೇಜಿನ ಮತಗಟ್ಟೆ ಬಳಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹಾಗೂ ಕಾರ್ಯಾಧ್ಯಕ್ಷ ಮಂಜುನಾಥ್‌ ತಂಡ ಚೊಂಬು ಪ್ರದರ್ಶಿಸಿತು. ಇದೇ ವೇಳೆ ಯುವಕನೊಬ್ಬ ಗ್ರ್ಯಾಜುಯೇಟ್‌ ದಿರಿಸಿನಲ್ಲಿ ಬಂದು ಕೈಯಲ್ಲಿ ಚೊಂಬು ಹಿಡಿದು ಪರೋಕ್ಷವಾಗಿ ಟೀಕಿಸಿದರು.

ಇದನ್ನೂ ಓದಿ: ಕಾಂಗ್ರೆಸ್‌ನ ಚೊಂಬು ಜಾಹೀರಾತಿಗೆ ಬಿಜೆಪಿ ಕೌಂಟರ್: 'QR ಕೋಡ್ ಸ್ಕ್ಯಾನ್ ಮಾಡಿ ಕಾಂಗ್ರೆಸ್‌ನ ವೈಫಲ್ಯ ನೋಡಿ' ಪೋಸ್ಟರ್ ರಿಲೀಸ್ - BJP Released QR Code Poster

ETV Bharat Logo

Copyright © 2024 Ushodaya Enterprises Pvt. Ltd., All Rights Reserved.