ETV Bharat / entertainment

ರಾಮನ ಸ್ಮರಿಸಿದ ಮಹೇಶ್​ಬಾಬು, ದೀಪಿಕಾ ಸೇರಿ ಹಲವು ಸೆಲೆಬ್ರಿಟಿಗಳು

author img

By ETV Bharat Karnataka Team

Published : Jan 22, 2024, 5:27 PM IST

mahesh-babu-deepika-padukone-kangana-ranaut-others-react-to-ram-lalla-pran-prathishtha
mahesh-babu-deepika-padukone-kangana-ranaut-others-react-to-ram-lalla-pran-prathishtha

ಅಯೋಧ್ಯೆಯಲ್ಲಿ ರಾಮ ದೇವರ ಪ್ರಾಣಪ್ರತಿಷ್ಠಾಪನೆ ನಡೆದಿದ್ದು, ಈ ದಿನದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವು ಸೆಲೆಬ್ರಿಟಿಗಳು ಹಂಚಿಕೊಂಡಿದ್ದಾರೆ.

ಹೈದರಾಬಾದ್​: ರಾಮಲಲ್ಲಾ ಪ್ರತಿಷ್ಠಾಪನೆ ಇಂದು ಅದ್ಧೂರಿಯಾಗಿ ನಡೆದ್ದು, ಇದೊಂದು ಐತಿಹಾಸಿಕ ಘಟನೆಯಾಗಿ ರೂಪುಗೊಂಡಿದೆ. ಭಾರತದ ಚಿತ್ರರಂಗದ ಹಲವು ಭಾಷೆಯ ನಟ - ನಟಿಯರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರಾಮನಾಮ ಸ್ಮರಣೆ ಮಾಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ರಾಮನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟ ಮಹೇಶ್​ ಬಾಬು, ದೀಪಿಕಾ ಪಡುಕೋಣೆ, ಕಂಗನಾ ರಣಾವತ್​​, ವರುಣ್ ಸೇರಿದಂತೆ ಅನೇಕ ಸೆಲಿಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಐತಿಹಾಸಿಕ ದಿನದ ಕುರಿತು ಪ್ರತಿಕ್ರಿಯಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

ರಾಮಲೀಲಾ ಚಿತ್ರದ ನಟಿ ದೀಪಿಕಾ ಪಡುಕೋಣೆ ತಮ್ಮ ಇನ್​​​​ಸ್ಟಾಗ್ರಾಂನಲ್ಲಿ ರಾಮನ ವಿಗ್ರಹದ ಜೊತೆಗೆ ಬೆಳಗಿನ ದೀಪದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನು ನಟಿ ಕಂಗನಾ ರಣಾವತ್​, ವಿಡಿಯೋವನ್ನು ಹಂಚಿಕೊಂಡಿದ್ದು, 'ರಾಮ ಬಂದನು' ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಈ ವಿಡಿಯೋದಲ್ಲಿ ನಟಿ, ಜೈ ಶ್ರೀ ರಾಮ್​ನ ಜಪ ಮಾಡಿದ್ದಾರೆ. ಕಂಗನಾ ಇಂದು ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇಗುಲದ ಮುಂದೆ ಹೆಲಿಕಾಪ್ಟರ್​ ಮೇಲಿನಿಂದ ಹೂವಿನ ಮಳೆ ಸುರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಸೂಪರ್​ಸ್ಟಾರ್​ ಮಹೇಶ್​ ಬಾಬು ಕೂಡ ಈ ದಿನದ ಸಂಭ್ರಮವನ್ನು ಹಂಚಿಕೊಳ್ಳುವುದನ್ನು ಮರೆತಿಲ್ಲ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ರಾಮನ ದೇಗುಲದ ಫೋಟೋ ಅವರು ಹಂಚಿಕೊಂಡಿದ್ದಾರೆ. ನಟ ವರುಣ್​ ಧವನ್​ ಕೂಡ ಈ ದಿನದ ಸಂತಸನದಲ್ಲಿ ಭಾಗಿಯಾಗಿದ್ದಾರೆ. ಇನ್​​ಸ್ಟಾಗ್ರಾಂನ ಸ್ಟೋರಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಹಂಚಿಕೊಂಡಿದ್ದಾರೆ. ಮೌನಿ ರಾಯ್​ ಕೂಡ ಭಗವಾನ್​ ರಾಮ ಮತ್ತು ಭಗವಾನ್​ ಶಿವನ ಅನಿಮೇಟೆಡ್​ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಜೈ ಶ್ರೀರಾಮ್​. ಓಂ ನಮಃ ಶಿವಾಯ ಎಂದು ಬರೆದುಕೊಂಡಿದ್ದಾರೆ.

ನಟ ಶೌರ್ಯ, ನಟಿ ಸಮಂತಾ ರುತ್​ ಪ್ರಭು ಕೂಡ ಭಗವಾನ್​ ರಾಮನೊಂದಿಗೆ ಸೀತಾ ಮತ್ತು ಲಕ್ಷ್ಮಣನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ 'ಅಯೋಧ್ಯೆಯಲ್ಲಿ ರಾಮ ಮತ್ತೊಮ್ಮೆ ವಿರಾಜಮಾನನಾಗಿದ್ದು, ವಿಜಯ ಪ್ರತಿಧ್ವನಿಸಿದೆ' ಎಂದಿದ್ದಾರೆ.

ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರತಿಷ್ಠಾಪನೆಯಲ್ಲಿ ದಂಪತಿಗಳಾದ ನಟಿ ರಣಬೀರ್​ ಕಪೂರ್​- ಆಲಿಯಾ ಭಟ್​, ಕತ್ರಿನಾ ಕೈಫ್​​- ವಿಕ್ಕಿ ಕೌಶಲ್​ ಹಾಗೂ ನಟ ಅಮಿತಾಬ್​ ಬಚ್ಚನ್​, ಪವನ್​ ಕಲ್ಯಾಣ್​, ಚಿರಂಜೀವಿ, ರಾಮ್​ ಚರಣ್​, ಮಾಧುರಿ ದೀಕ್ಷಿತ್​, ರಜನೀಕಾಂತ್​ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಂದೇ ಅಯೋಧ್ಯೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.