ETV Bharat / bharat

Rain Alert : ಈ ರಾಜ್ಯದ ಜನರಿಗೆ ಸಿಕ್ತು ಸಿಹಿ ಸುದ್ದಿ, ಮುಂದಿನ 6 ದಿನಗಳ ಕಾಲ ವರುಣನ ಆರ್ಭಟ - Rain Alert

author img

By ETV Bharat Karnataka Team

Published : May 6, 2024, 6:21 PM IST

EL NINO EFFECT IN INDIA  RAIN ALERT IN TELANGANA
ಈ ರಾಜ್ಯದ ಜನರಿಗೆ ಸಿಕ್ತು ಸಿಹಿ ಸುದ್ದಿ, ಮುಂದಿನ 6 ದಿನಗಳ ಕಾಲ ವರುಣನ ಆರ್ಭಟ (Etv Bharat)

Rain Alert in Telangana : ರಾಜ್ಯದಲ್ಲಿ ಭಾರೀ ಬಿಸಿಲಿನಿಂದ ನಲುಗುತ್ತಿರುವ ಜನರಿಗೆ ಹೈದರಾಬಾದ್ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಂದಿನ 6 ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇದಲ್ಲದೇ ಇನ್ನು ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆಯಂತೆ.

ಹೈದರಾಬಾದ್​ (ತೆಲಂಗಾಣ): ಮುಂದಿನ ಆರು ದಿನಗಳ ಕಾಲ ರಾಜ್ಯದಲ್ಲಿ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತೆಲಂಗಾಣದ ಹವಾಮಾನ ಕೇಂದ್ರ ತಿಳಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಕೆಲವು ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಾಳೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಹಲವು ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆ ನೀಡಲಾಗಿದೆ.

El Nino Effect in India : ಮಾನ್ಸೂನ್ ಸಮಯದಲ್ಲಿ ಎಲ್ ನಿನೊ ಸಂಭವಿಸುವುದರಿಂದ ಭಾರತದಲ್ಲಿ ಮಳೆಯ ಪ್ರಮಾಣವು ಶೇಕಡಾ 6 ರಷ್ಟು ಕಡಿಮೆಯಾಗಿದೆ ಎಂದು IMD ಬಹಿರಂಗಪಡಿಸಿದೆ. ಈ ವರ್ಷದ ಫೆಬ್ರವರಿ ನಂತರ, ಪೆಸಿಫಿಕ್ ಸಾಗರದಲ್ಲಿ ತಾಪಮಾನವು ಕಡಿಮೆಯಾಗುತ್ತಿದೆ. ಜೂನ್ ವೇಳೆಗೆ ದೇಶದಲ್ಲಿ ಎಲ್ ನಿನೋ ಕೊನೆಗೊಳ್ಳಲಿದ್ದು, ಲಾ ನಿನಾ ಪ್ರಾರಂಭವಾಗಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ, ಹೆಚ್ಚಿನ ತಾಪಮಾನ ಮತ್ತು ಮಳೆಯಿಂದಾಗಿ ತೀವ್ರ ಹಾನಿ ಸಂಭವಿಸುವ ನಿರೀಕ್ಷೆಯಿದೆ.

ಸೂರ್ಯನ ಆರ್ಭಟ: ಸದ್ಯ ದೇಶಾದ್ಯಂತ ಹಲವೆಡೆ 40-45 ಡಿಗ್ರಿ ತಾಪಮಾನ ದಾಖಲಾಗಿದೆ. ಭಾರತದಲ್ಲಿ ಬಿಸಿಗಾಳಿ ಸಾಮಾನ್ಯ. ಆದರೂ 20 ನೇ ಶತಮಾನದಲ್ಲಿ ಬಿಸಿಗಾಳಿ ಹೆಚ್ಚಾಗಿದೆ ಎಂದು ಹಲವಾರು ವರದಿಗಳು ಸೂಚಿಸುತ್ತವೆ. ಕಳೆದ ನೂರು ವರ್ಷಗಳಲ್ಲಿ ಭಾರತದಲ್ಲಿ ಸರಾಸರಿ ವಾರ್ಷಿಕ ತಾಪಮಾನವು 0.66 ಡಿಗ್ರಿಗಳಷ್ಟು ಹೆಚ್ಚಾಗಿದೆ. 2006 ರಿಂದ ದೇಶದ ಇತಿಹಾಸದಲ್ಲಿ 12 ಅತ್ಯಂತ ಹೆಚ್ಚು ಉಷ್ಣಾಂಶ ವರ್ಷಗಳು ದಾಖಲಾಗಿವೆ ಎಂದು ಹವಾಮಾನ ತಜ್ಞರು ವಿವರಿಸುತ್ತಾರೆ.

2023 ರಲ್ಲಿ ಭೂವಿಜ್ಞಾನ ಇಲಾಖೆಯು ಬಹಿರಂಗಪಡಿಸಿದ ವಿವರಗಳ ಪ್ರಕಾರ, 1961 - 2021ರ ನಡುವಿನ ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ, ದೇಶದಲ್ಲಿ ಶಾಖದ ಅಲೆಗಳು ಸರಾಸರಿ 2.5 ದಿನಗಳಷ್ಟು ಹೆಚ್ಚಾಗಿದೆ. ಅರಣ್ಯನಾಶ, ಮಾಲಿನ್ಯ, ಇಂಗಾಲದ ಹೊರಸೂಸುವಿಕೆ ಹೀಗೆಯೇ ಹೆಚ್ಚಾದರೆ 2050ರ ವೇಳೆಗೆ ದೇಶದಲ್ಲಿ ಮನುಷ್ಯ ಬದುಕಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹವಾಮಾನ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಓದಿ: ಪೂಂಚ್​ನಲ್ಲಿ ಉಗ್ರರ ಪತ್ತೆ ಕಾರ್ಯಾಚರಣೆ ಚುರುಕು: ಶಂಕಿತರ ಬಂಧಿಸಿ ವಿಚಾರಣೆ, ಹೆಚ್ಚುವರಿ ಪಡೆ ರವಾನೆ - Poonch terror attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.