ETV Bharat / bharat

'ದೇಶವು ನಾನು ರಾಜಕೀಯಕ್ಕೆ ಬರಬೇಕೆಂದು ಬಯಸುತ್ತದೆ': ಅಮೇಥಿಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ವಾದ್ರಾ - ROBERT VADRA GANGA AARTI

author img

By ETV Bharat Karnataka Team

Published : Apr 27, 2024, 12:27 PM IST

RISHIKESH GANGA AARTI  LOK SABHA ELECTION 2024  ROBERT VADRA  RAHUL PRIYANKA
ಗಂಗಾ ಆರತಿ ಮಾಡಿ ರಾಹುಲ್​ ಪ್ರಿಯಾಂಕಾಗೆ ಒಳ್ಳೆದಾಗ್ಲಿ ಎಂದು ಬೇಡಿಕೊಂಡ ವಾದ್ರಾ

Robert Vadra performed Ganga Aarti in Rishikesh ರಾಬರ್ಟ್ ವಾದ್ರಾ ಅವರು ಋಷಿಕೇಶದಲ್ಲಿ ಗಂಗಾ ಆರತಿ ಮಾಡಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾಗೆ ಒಳ್ಳೆದಾಗ್ಲಿ ಎಂದು ಬೇಡಿಕೊಂಡರು. ದೇಶವು ನಾನು ರಾಜಕೀಯಕ್ಕೆ ಬರಬೇಕು ಎಂದು ಬಯಸುತ್ತದೆ ಎಂದು ಹೇಳುವ ಮೂಲಕ ಅಮೇಥಿಯಿಂದ ಸ್ಪರ್ಧಿಸುವ ಇಚ್ಛೆಯನ್ನು ರಾಬರ್ಟ್​ ವಾದ್ರಾ ವ್ಯಕ್ತಪಡಿಸಿದರು.

ರಿಷಿಕೇಶ (ಉತ್ತರಾಖಂಡ್​): ದೇಶದ ಪ್ರಮುಖ ಉದ್ಯಮಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಶುಕ್ರವಾರ ಸಂಜೆ ರಿಷಿಕೇಶ ತಲುಪಿದ್ದಾರೆ. ತ್ರಿವೇಣಿ ಘಾಟ್‌ನಲ್ಲಿ ಗಂಗಾ ಆರತಿ ನೆರವೇರಿಸಿದ ಅವರು, ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಒಳ್ಳೆದಾಗ್ಲಿ ಎಂದು ಆ ದೇವರ ಬಳಿ ಕೇಳಿಕೊಂಡರು. ರಾಹುಲ್ ಮತ್ತು ಪ್ರಿಯಾಂಕಾ ಅವರು ಇಡೀ ದೇಶದಲ್ಲಿ ರಾಜಕೀಯ ಮಾಡುತ್ತಿರುವ ಉದ್ದೇಶ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ದೇಶವು ನಾನು ರಾಜಕೀಯಕ್ಕೆ ಬರಬೇಕು ಎಂದು ಬಯಸುತ್ತದೆ ಎಂದು ಹೇಳಿದರು.

RISHIKESH GANGA AARTI  LOK SABHA ELECTION 2024  Robert Vadra  Rahul Priyanka
ಗಂಗಾ ಆರತಿ ಮಾಡಿದ ರಾಬರ್ಟ್ ವಾದ್ರಾ

ಗಮನ ಸೆಳೆದ ಗಂಗಾ ಆರತಿ: ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಗಮನ ಸೆಳೆದಿದ್ದ ರಾಬರ್ಟ್ ವಾದ್ರಾ ಅವರು ಋಷಿಕೇಶ ತ್ರಿವೇಣಿ ಘಾಟ್‌ನಲ್ಲಿ ಗಂಗಾ ಮಾತೆಯ ಧಾರ್ಮಿಕ ಪೂಜೆಯನ್ನು ನೆರವೇರಿಸಿದರು ಮತ್ತು ಗಂಗಾ ಆರತಿಯಲ್ಲಿ ಪಾಲ್ಗೊಂಡರು. ಗಾಂಧಿ ಕುಟುಂಬದ ಮೇಲೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ದಾಳಿಯೇ ಅವರ ಭಯ ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ. ಈ ಜನರು ನಿಜವಾದ ಸಮಸ್ಯೆಗಳಿಂದ ದೇಶದ ಗಮನವನ್ನು ಬೇರೆಡೆಗೆ ತಿರುಗಿಸಲು ಬಯಸುತ್ತಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ದೇಶದ ನೈಜ ಸಮಸ್ಯೆಗಳನ್ನು ದೇಶದ ಮುಂದೆ ಪ್ರಸ್ತಾಪಿಸುತ್ತಿದ್ದಾರೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕಾಗಿ ಪ್ರಧಾನಿ ಗಾಂಧಿ ಕುಟುಂಬದ ವಿರುದ್ಧವೂ ದಾಳಿ ಮಾಡುತ್ತಿದ್ದಾರೆ.

RISHIKESH GANGA AARTI  LOK SABHA ELECTION 2024  Robert Vadra  Rahul Priyanka
ಗಂಗಾ ಆರತಿ ಮಾಡಿದ ರಾಬರ್ಟ್ ವಾದ್ರಾ

ಪ್ರಧಾನಿ ಮತ್ತು ಬಿಜೆಪಿ ನಾಯಕರು ಚುನಾವಣೆಯಲ್ಲಿ ಸಾರ್ವಜನಿಕರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಸಾರ್ವಜನಿಕರಲ್ಲಿ ಭಯ, ಆತಂಕ ಮೂಡಿದೆ. ಈ ಜನರು ದೇಶದೊಳಗೆ ತಾರತಮ್ಯದ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಬರ್ಟ್ ವಾದ್ರಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಮೃತಿ ಇರಾನಿ ವಿರುದ್ಧ ವಾದ್ರಾ ವಾಗ್ದಾಳಿ: ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ರಾಬರ್ಟ್ ವಾದ್ರಾ ಯಾವುದೇ ಸ್ಪಷ್ಟ ಉತ್ತರವನ್ನು ನೀಡಲಿಲ್ಲ. 2004ರಲ್ಲಿ ಅಮೇಥಿಯಿಂದ ಸೋನಿಯಾ ಗಾಂಧಿ ಅವರನ್ನು ಭಾರಿ ಮತಗಳಿಂದ ಗೆಲ್ಲಿಸಿದ್ದೇವೆ. ನಾನು ನಿರಂತರವಾಗಿ ಈ ಕ್ಷೇತ್ರದಲ್ಲಿ ಸಕ್ರಿಯನಾಗಿದ್ದೇನೆ. ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದು ದೇಶದ ಜನತೆ ಬಯಸುತ್ತಿದ್ದಾರೆ. ಅಮೇಥಿ ಸಂಸದೆಯಾಗಿ ಸ್ಮೃತಿ ಇರಾನಿ ಅವರು ಸಾರ್ವಜನಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ದೇಶದ ಸಂಸತ್ತಿನ ಒಳಗೆ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದು, ಅದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಇಂದು ದೇಶದಲ್ಲಿ ಬದಲಾವಣೆಯ ಅಲೆ ಎದ್ದಿದೆ. ಸಿಬಿಐ ಮತ್ತು ಇಡಿ ದುರ್ಬಳಕೆಯಿಂದ ಜನರು ಆತಂಕಗೊಂಡಿದ್ದಾರೆ. ದೇಶದೊಳಗೆ ಮೊದಲ ಮತ್ತು ಎರಡನೇ ಹಂತದ ಮತದಾನದಲ್ಲಿ ಕಾಂಗ್ರೆಸ್ ಮೇಲೆ ಸಾರ್ವಜನಿಕರ ವಿಶ್ವಾಸ ಹೆಚ್ಚಿದೆ ಎಂದರು.

ರಾಬರ್ಟ್ ವಾದ್ರಾ ಅವರು ಶುಕ್ರವಾರ ಗಂಗಾದಲ್ಲಿ ರಾಫ್ಟಿಂಗ್ ಮಾಡಿ ಆನಂದಿಸಿದರು. ಈ ವೇಳೆ ಕಾಂಗ್ರೆಸ್ ರಾಜ್ಯ ವಕ್ತಾರ ರಾಜೀವ್ ಮೆಹ್ರಿಷಿ, ಕಾಂಗ್ರೆಸ್ ಮುಖಂಡ ಜಯೇಂದ್ರ ರಾಮೋಲಾ, ರಾಜಪಾಲ್ ಖರೋಲಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋಹಿತ್ ಉನಿಯಾಲ್, ಮನೀಶ್ ಶರ್ಮಾ, ಶೈಲೇಂದ್ರ ಬಿಷ್ತ್, ಮಧು ಜೋಶಿ, ಅಂಶುಲ್ ಅರೋರಾ, ವರುಣ್ ಜುನೇಜಾ, ರಾಜೀವ್ ಚೌಧರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಓದಿ: ರಾಜಕೀಯ ಪಕ್ಷಗಳ ಚುನಾವಣಾಪೂರ್ವ ಭರವಸೆಗಳು ಮತದಾರರನ್ನು ಭ್ರಷ್ಟಗೊಳಿಸಿದಂತಲ್ಲ: ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.