ETV Bharat / bharat

ಉದ್ಯೋಗದ ಹೆಸರಲ್ಲಿ ಜಮೀನು ಲೂಟಿ ಮಾಡಿದವರ ಬಂಧನಕ್ಕೆ ಕ್ಷಣಗಣನೆ: ಹೆಸರು ಬಳಸದೇ ಆರ್​​ಜೆಡಿ ನಾಯಕನ ವಿರುದ್ಧ ಪ್ರಧಾನಿ ವಾಗ್ದಾಳಿ - PM Modi

author img

By ETV Bharat Karnataka Team

Published : May 25, 2024, 6:38 PM IST

ಬಿಹಾರವನ್ನು ಲೂಟಿ ಮಾಡಿದ ಯಾರೊಬ್ಬರನ್ನು ಎನ್​​ಡಿಎ ಸರ್ಕಾರ ಬಿಡಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ETV Bharat)

ರೋಹ್ತಾಸ್ (ಬಿಹಾರ): ಉದ್ಯೋಗದ ಹೆಸರಲ್ಲಿ ಬಡವರ ಜಮೀನು ಲೂಟಿ ಮಾಡಿದವರ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಹೆಸರು ಬಳಸದೇ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಬಿಹಾರದ ಏಳನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಕರಕತ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕುಶ್ವಾಹ ಪರವಾಗಿ ಪ್ರಚಾರ ನಡೆಸಿದರು. ಈ ವೇಳೆ, ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

" ಉದ್ಯೋಗದ ಹೆಸರಲ್ಲಿ ಬಿಹಾರದ ಬಡ ಜನರ ಜಮೀನನ್ನು ಲೂಟಿ ಮಾಡಿರುವವರ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೆಲಿಕಾಪ್ಟರ್​ ರೈಡ್​ ಮುಕ್ತಾಯಗೊಳ್ಳುತ್ತಿದ್ದಂತೆ ಜೈಲಿಗೆ ಹೋಗಲು ರಸ್ತೆ ಸಿದ್ದಗೊಳ್ಳಲಿದೆ. ಬಿಹಾರವನ್ನು ಲೂಟಿ ಮಾಡಿದ ಯಾರೊಬ್ಬರನ್ನೂ ಎನ್​​ಡಿಎ ಸರ್ಕಾರ ಬಿಡೋದಿಲ್ಲ ಇದು ಎನ್​​ಡಿಎ ಮತ್ತು ಮೋದಿ ಸರ್ಕಾರದ ಗ್ಯಾರಂಟಿಯಾಗಿದೆ" ಎಂದು ಹೆಸರು ಬಳಸದೇ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ವಿರುದ್ಧ ವಾಗ್ದಾಳಿ ನಡೆಸಿದರು.

ಬಳಿಕ ಕಾಂಗ್ರೆಸ್​ ಮೈತ್ರಿ ಕೂಟದ ವಿರುದ್ದ ವಾಗ್ದಾಳಿ ನಡೆಸಿ, "ಇಂಡಿ ಮೈತ್ರಿ ಕೂಟದವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಏನು ಮಾಡಲು ಹಿಂಜರಿಯುವುದಿಲ್ಲ. ಕಾಂಗ್ರೆಸ್​ನ​ ಮಂತ್ರಿಯೊಬ್ಬರು ಹೇಳುತ್ತಾರೆ ಬಿಹಾರಿಗರಿಗೆ ಪಂಜಾಬ್​ನಲ್ಲಿ ಇರಲು ಮತ್ತು ಬರಲು ಬಿಡಲ್ಲ ಎನ್ನುತ್ತಾರೆ. ಮತ್ತೊಂದೆಡೆ ತೆಲಂಗಾಣ, ಪಶ್ಚಿಮ ಬಂಗಾಳ ಸಿಎಂ ಕೂಡ ಅವಮಾನ ಮಾಡಿದ್ದಾರೆ. ಬಿಹಾರದ ಜನರಿಗೆ ಆದಂತಹ ಅನ್ಯಾಯ ಮತ್ತು ಅವಮಾನದ ಬಗ್ಗೆ ಕಾಂಗ್ರೆಸ್​ ಆಗಲಿ ಮತ್ತು ಮೈತ್ರಿ ಕೂಟದ ಯಾವೊಬ್ಬ ನಾಯಕರಾಗಲಿ ಧ್ವನಿ ಎತ್ತುತ್ತಿಲ್ಲ".

" ಅಲ್ಲದೇ ಆರ್​ಜೆಡಿ ನಾಯಕರಿಗೂ ಈ ಬಗ್ಗೆ ಕಾಂಗ್ರೆಸ್​ ಜೊತೆ ಮಾತನಾಡಲು ಧೈರ್ಯವಿಲ್ಲ. ಇವರಿಗೆಲ್ಲ ಬಿಹಾರದ ಗೌರವ, ಮತ್ತು ಜನರ ಬಗ್ಗೆ ಖಾಳಜಿ ಇಲ್ಲ. ಕೇವಲ ಮತಗಳನ್ನು ಸೆಳೆಯಲು ಬಣ್ಣದ ಮಾತುಗಳನ್ನು ಆಡುತ್ತಾರೆ. ಆದರೇ ಇವರ ಮಾತಿಗೆ ಬಿಹಾರಿಗರು ಮರಳಾಗಲ್ಲ" ಎಂದು ಚಾಟಿ ಬೀಸಿದರು.

ಇದನ್ನೂ ಓದಿ: ಜನರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದನ್ನು ಮುಂದೊಂದು ದಿನ ಹೇಳುತ್ತೇವೆ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ - Rajiv Kumar cast vote

ETV Bharat Logo

Copyright © 2024 Ushodaya Enterprises Pvt. Ltd., All Rights Reserved.