ETV Bharat / bharat

ಅವರಂತಹ ಅಸಮರ್ಥ ವ್ಯಕ್ತಿ ಯಾರೂ ಇಲ್ಲ: ಅಜಿತ್ ಪವಾರ್ ಟೀಕಿಸಿದ ಸಹೋದರ ಶ್ರೀನಿವಾಸ್ ಪವಾರ್

author img

By ETV Bharat Karnataka Team

Published : Mar 18, 2024, 5:42 PM IST

ಇಲ್ಲಿಯವರೆಗೂ ನಾನು ಅಜಿತ್ ಪವಾರ್ ಬೆನ್ನಿಗೆ ನಿಂತಿದ್ದೇನೆ. ನಾನು ನಿಮ್ಮ ಬಗ್ಗೆ ಎಲ್ಲವನ್ನೂ ಸಹೋದರನಾಗಿ ಕೇಳಿದೆ. ಆದರೆ ಇನ್ನು ಮುಂದೆ ಹಾಗಾಗಲ್ಲ. ಈ ವಯಸ್ಸಿನಲ್ಲಿ ಶರದ್ ಪವಾರ್ ಅವರಿಂದ ದೂರ ಸರಿದಿರುವುದು ತಪ್ಪು ಎಂದು ಅವರ ಸಹೋದರ ಶ್ರೀನಿವಾಸ್ ಪವಾರ್ ಹೇಳಿದ್ದಾರೆ.

ಅಜಿತ್ ಪವಾರ್
ಅಜಿತ್ ಪವಾರ್

ಪುಣೆ (ಮಹಾರಾಷ್ಟ್ರ): ಎನ್‌ಸಿಪಿ ವಿಭಜನೆಯ ನಂತರ ಅಜಿತ್ ಪವಾರ್ ವಿರುದ್ಧ ಪವಾರ್ ಕುಟುಂಬದಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರನ್ನು ಅವರ ಹಿರಿಯ ಸಹೋದರ ಶ್ರೀನಿವಾಸ್ ಪವಾರ್ ಅವರು 'ಅಸಮರ್ಥ' ಎಂದು ಟೀಕಿಸಿದ್ದಾರೆ.

ಎನ್‌ಸಿಪಿ ವಿಭಜನೆಯ ನಂತರ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ವಾಗ್ವಾದ ನಡೆದಿದೆ. ಕಾರ್ಯಕರ್ತರು, ಅಧಿಕಾರಿಗಳು, ಮುಖಂಡರು ಪವಾರ್ ಪರ ನಿಂತಿರುವುದು ಕಂಡು ಬರುತ್ತಿದೆ. ಏತನ್ಮಧ್ಯೆ, ಕುಟುಂಬದಲ್ಲಿ ಯಾವುದೇ ಒಡಕು ಇಲ್ಲ ಎಂದು ಇಬ್ಬರೂ ಪದೇ ಪದೇ ಹೇಳುತ್ತಿದ್ದಾರೆ. ಇದೀಗ ಅಜಿತ್ ಪವಾರ್ ವಿರುದ್ಧ ಪವಾರ್ ಕುಟುಂಬದ ಎಲ್ಲರೂ ಒಂದಾಗಿದ್ದಾರೆ. ಅವರ ಸಹೋದರ ಶ್ರೀನಿವಾಸ್ ಪವಾರ್ ಕೂಡ ಅಜಿತ್ ಪವಾರ್ ಅವರನ್ನು ನೇರವಾಗಿ ಟೀಕಿಸಿದ್ದಾರೆ.

ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಇಡೀ ದೇಶದ ಗಮನ ಸೆಳೆದಿರುವ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಸುಪ್ರಿಯಾ ಸುಳೆ ವಿರುದ್ಧ ಸುನೇತ್ರಾ ಪವಾರ್ ಕಣಕ್ಕಿಳಿಯಲಿದ್ದಾರೆ. ಪವಾರ್ ಕುಟುಂಬದ ಅನೇಕರು ಈಗ ಸುಪ್ರಿಯಾ ಸುಳೆ ಪರ ಬೀದಿಗಿಳಿದು ಪ್ರಚಾರ ಮಾಡುತ್ತಿದ್ದಾರೆ. ಕಾಟೆವಾಡಿಯಲ್ಲಿ ನಡೆದ ಸಣ್ಣ ಕಾರ್ಯಕ್ರಮವೊಂದರಲ್ಲಿ ಅಜಿತ್ ಪವಾರ್ ಸಹೋದರ ಶ್ರೀನಿವಾಸ್ ಪವಾರ್ ಮಾತನಾಡಿ, ಇಲ್ಲಿಯವರೆಗೂ ನಾನು ಅಜಿತ್ ಪವಾರ್ ಅವರ ಬೆನ್ನಿಗೆ ನಿಂತಿದ್ದೆ. ನಾನು ನಿಮ್ಮ ಬಗ್ಗೆ ಎಲ್ಲವನ್ನೂ ಸಹೋದರನಾಗಿ ಕೇಳಿದೆ. ಆದರೆ, ಇನ್ನು ಮುಂದೆ ಅಲ್ಲ. ಈ ವಯಸ್ಸಿನಲ್ಲಿ ಶರದ್ ಪವಾರ್ ಅವರ ಬೆಂಬಲಕ್ಕೆ ನಿಲ್ಲದಿರುವುದು ತಪ್ಪು. ಅಜಿತ್ ಪವಾರ್ ಅವರ ನಿರ್ಧಾರವನ್ನು ಅವರು ಒಪ್ಪುವುದಿಲ್ಲ. ಅವರಂತಹ ಅಸಮರ್ಥ ವ್ಯಕ್ತಿ ಯಾರೂ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದೂ ಶ್ರೀನಿವಾಸ್ ಪವಾರ್ ಅವರು ಹೇಳಿದ್ದಾರೆ.

ಶ್ರೀನಿವಾಸ್ ಪವಾರ್ ಅವರ ಪತ್ನಿ ಶರ್ಮಿಳಾ ಪವಾರ್ ಕೂಡ ಅಜಿತ್ ಪವಾರ್ ಅವರನ್ನು ಟೀಕಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಕೆಲವೊಮ್ಮೆ ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿಗೆ ಬರಬೇಕಾಗುತ್ತದೆ. ಇದು ಎಲ್ಲರಿಗೂ ತುಂಬಾ ಸೂಕ್ಷ್ಮ ಸಮಯ. ಇದು ನೋವಿನಿಂದ ಕೂಡಿದೆ. ಇಂದು ನಾವು ಅನುಭವಿಸುತ್ತಿರುವ ನೋವು, ನೀವು ಸಹ ಅದೇ ನೋವನ್ನು ಅನುಭವಿಸುತ್ತಿದ್ದೀರಿ. ಆದ್ದರಿಂದ ಇಂದು ನಾವು ಒಬ್ಬರಿಗೊಬ್ಬರು ಇಲ್ಲಿದ್ದೇವೆ. ನಾವು ಸಂತೋಷ ಮತ್ತು ದುಃಖವನ್ನು ಅರ್ಥಮಾಡಿಕೊಳ್ಳುತ್ತೇವೆ. ನಾವು ಕುಟುಂಬ ಎಂದು ಹೇಳುತ್ತಿದ್ದೇವೆ, ಆದರೆ ಅದೇ ಗಳಿಗೆಯಲ್ಲಿ ನಾವು ಪರಸ್ಪರರ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಇದೆ ಮತ್ತು ಪ್ರತಿ ಕುಟುಂಬದಲ್ಲಿ ಈ ಸಂಗತಿಗಳು ನಡೆಯುತ್ತವೆ. ಇದು ನಮ್ಮ ಕುಟುಂಬದಲ್ಲಿ ಎಂದಿಗೂ ಸಂಭವಿಸಿರಲಿಲ್ಲ. ಆದರೆ, ಇಂದು ಅದು ಸಂಭವಿಸಿದೆ'' ಎಂದು ಬೇಸರ ವ್ಯಕ್ತಪಡಿಸಿದರು.

"ಇಂದು ನಾನು ಮತ್ತು ಬಾಪು ನಮ್ಮ ಮನೆಯಲ್ಲಿ ಹಿರಿಯರನ್ನು ಗೌರವಿಸುವುದು ಬಹಳ ಮುಖ್ಯ ಎಂದು ಭಾವಿಸಿದ್ದೇವೆ. ಪವಾರ್ ಅವರು ನಮಗಾಗಿ ಏನು ಮಾಡಿದರು ಎಂದು ಯಾರಿಗೂ ಹೇಳಬೇಕಾಗಿಲ್ಲ. ಎಲ್ಲರೂ ಸಾಹೇಬರ ಬೆಂಬಲಕ್ಕೆ ನಿಲ್ಲಬೇಕು." ಅವರ 60 ವರ್ಷಗಳ ಜೀವನದಲ್ಲಿ, ಯಾರೂ ಅವರನ್ನು ಸೋಲಿಸಲಿಲ್ಲ ಎಂದ ಅವರು, ನಾವೇಕೆ ಅವರ ಸೋಲಿಗೆ ಕಾರಣವಾಗಲು ಬಯಸಬೇಕು'' ಎಂದು ಭಾವನಾತ್ಮಕ ಹೇಳಿಕೆ ನೀಡಿದರು.

ಇದನ್ನೂ ಓದಿ : ನಿಮ್ಮ ಜನಪ್ರಿಯತೆಯ ಬಗ್ಗೆ ವಿಶ್ವಾಸ ಹೊಂದಿದ್ದರೆ, ಶರದ್ ಪವಾರ್ ಫೋಟೋ ಏಕೆ ಬಳಸುತ್ತೀರಿ?: ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.