ETV Bharat / bharat

ಹೆದ್ದಾರಿಯಲ್ಲಿ ಹಾಡಹಗಲೇ ಒಬ್ಬ ಯುವಕ, ಇಬ್ಬರು ಯುವತಿಯರ ಕಿಡ್ನಾಪ್: ನಾಳೆ ಲಂಡನ್​ಗೆ ಹೋಗಬೇಕಿದ್ದ ಯುವಕ - Kidnap Case

author img

By ETV Bharat Karnataka Team

Published : Mar 30, 2024, 9:14 PM IST

ಹರಿಯಾಣದ ಕರ್ನಾಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹಾಡಹಗಲೇ ಓರ್ವ ಯುವಕ ಮತ್ತು ಇಬ್ಬರು ಯುವತಿಯರನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ನಡೆದಿದೆ.

kidnapping of a young man along with 2 girls on the National Highway in Haryana
ಹೆದ್ದಾರಿಯಲ್ಲಿ ಹಾಡಹಗಲೇ ಓರ್ವ ಯುವಕ, ಇಬ್ಬರು ಯುವತಿಯರ ಕಿಡ್ನಾ

ಕರ್ನಾಲ್ (ಹರಿಯಾಣ): ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಮೂವರು ಅಪಹರಣ ಮಾಡಿರುವ ಪ್ರಕರಣ ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರು ಯುವತಿಯರು ಮತ್ತು ಯುವಕನೊಬ್ಬ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆದು, ಮೂವರನ್ನೂ ಕಿಡ್ನಾಪ್​ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕರ್ನಾಲ್‌ನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸೌರವ್ ರಾಣಾ ಎಂಬ ಯುವಕ ಮತ್ತು ಇಬ್ಬರು ಯುವತಿಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಇನ್ನೊಂದು ಕಾರು ಇದ್ದಕ್ಕಿದ್ದಂತೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಸೌರವ್ ರಾಣಾ ಸಂಚರಿಸುತ್ತಿದ್ದ ಕಾರು ರಸ್ತೆ ಬಿಟ್ಟು ಡಿವೈಡರ್​ ಮೇಲೇರಿದೆ. ಇದಾದ ಬಳಿಕ ಕಾರಿನಿಂದ ಐವರು ದುಷ್ಕರ್ಮಿಗಳು ಕೆಳಗಿಳಿದು ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ, ಸೌರವ್ ರಾಣಾ ಮತ್ತು ಇಬ್ಬರು ಯುವತಿಯರಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಬಳಿಕ ಇಬ್ಬರು ಯುವತಿಯರು ಹಾಗೂ ಯುವಕನನ್ನು ಬಲವಂತವಾಗಿ ಹೊರತೆಗೆದು ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಈ ವೇಳೆ, ಕಾರಿನ ಬಳಿ ಚಪ್ಪಲಿ, ಒಡೆದ ಗಾಜುಗಳು ಪತ್ತೆಯಾಗಿವೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಸೌರವ್ ಸ್ನೇಹಿತ ರೋಹಿತ್, ಈ ಘಟನೆ ನಡೆದ ರಸ್ತೆಯ ಮೂಲಕವೇ ಹಾದು ಹೋಗುತ್ತಿದ್ದೆ. ರಸ್ತೆ ಬಳಿ ಜಖಂಗೊಂಡು ನಿಂತಿದ್ದ ಕಾರು ಗಮನಿಸಿದಾಗ ಅದು ಸೌರವ್​ಗೆ ಸೇರಿದ್ದು ಎಂದು ಗೊತ್ತಾಯಿತು. ಹೀಗಾಗಿ ನಾನು ವಿಚಾರಿಸಲು ಎಂದು ಸೌರವ್​ಗೆ ಕರೆ ಮಾಡಿದೆ. ಆದರೆ, ತನ್ನ ಫೋನ್ ತೆಗೆಯಲಿಲ್ಲ. ನಂತರ ಸೌರವ್ ಕುಟುಂಬಕ್ಕೆ ಫೋನ್ ಮಾಡಿ ಘಟನೆಯ ಬಗ್ಗೆ ತಿಳಿಸಿದೆ. ಕಾರಿನ ಮುಂಭಾಗ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ, ಸೌರವ್‌ ಲಂಡನ್‌ ಹೋಗಲು ಸಿದ್ಧವಾಗಿದ್ದ, ಭಾನುವಾರ ಆತ ವಿಮಾನ ಹತ್ತಬೇಕಿತ್ತು ಎಂದೂ ರೋಹಿತ್ ತಿಳಿಸಿದರು.

ಈ ಕುರಿತು ಸಿವಿಲ್ ಲೈನ್ ಪೊಲೀಸ್ ಠಾಣೆಯ ಅಧಿಕಾರಿ ಪ್ರಭಾರಿ ವಿಷ್ಣು ಮಿತ್ರ ಪ್ರತಿಕ್ರಿಯಿಸಿ, ಘಟನೆಯ ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಕಾರಿನ ಗಾಜು ಒಡೆದಿರುವುದು ಕಂಡು ಬಂದಿದೆ. ಕಾರಿನ ಬಳಿ ಮಹಿಳೆಯರ ಚಪ್ಪಲಿಗಳು ಹಾಗೂ ಒಡೆದ ಕನ್ನಡಕವೂ ಪತ್ತೆಯಾಗಿದೆ. ಇದೀಗ ಪೊಲೀಸರು ಈ ಘಟನೆ ಕುರಿತು ಸಂಪೂರ್ಣ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಫೋನ್​ ಕದ್ದಾಲಿಕೆ ಕೇಸ್​: ಪಕ್ಷಕ್ಕಾಗಿ ಟಾಸ್ಕ್​ಫೋರ್ಸ್​ ದುರ್ಬಳಕೆ, ಪೊಲೀಸ್​ ವಾಹನಗಳಲ್ಲಿ ಹಣ ಸಾಗಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.