ETV Bharat / bharat

ಜೈಲಿನಲ್ಲಿ ಕೇಜ್ರಿವಾಲ್​ ಹತ್ಯೆ ಸಂಚು- ಆಪ್​ ಆರೋಪ; ದೆಹಲಿ ಸಿಎಂ ಆರೋಗ್ಯ ಚೆನ್ನಾಗಿದೆ-ಜೈಲಧಿಕಾರಿಗಳು - CM Aravind Kejriwal

author img

By ETV Bharat Karnataka Team

Published : Apr 21, 2024, 2:10 PM IST

CM ARAVIND KEJRIWAL
CM ARAVIND KEJRIWAL

ಅರವಿಂದ್​ ಕೇಜ್ರಿವಾಲ್​ ಅವರ ಅನಾರೋಗ್ಯದ ಬಗ್ಗೆ ಆಪ್​ ಮತ್ತು ಜೈಲಿನ ಅಧಿಕಾರಿಗಳ ಮಧ್ಯೆ ತಿಕ್ಕಾಟ ಶುರುವಾಗಿದೆ.

ನವದೆಹಲಿ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರನ್ನು ಜೈಲಿನಲ್ಲೇ ಹತ್ಯೆ ಮಾಡುವ ಸಂಚು ನಡೆಯುತ್ತಿದೆ ಎಂದು ಆಮ್​ ಆದ್ಮಿ ಪಕ್ಷ (ಆಪ್​) ಗಂಭೀರ ಆರೋಪ ಮಾಡಿದೆ. ಮಧುಮೇಹದಿಂದ ಬಳಲುತ್ತಿರುವ ಅವರಿಗೆ ಇನ್ಸುಲಿನ್​ ನೀಡಲಾಗುತ್ತಿಲ್ಲ. ಇದು ಅವರನ್ನು ಕೊಲ್ಲಲು ಮಾಡುತ್ತಿರುವ ತಂತ್ರ ಎಂದು ದೆಹಲಿ ಸಚಿವ ಸೌರಭ್​ ಭಾರದ್ವಾಜ್​ ದೂರಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ್​ ಕೇಜ್ರಿವಾಲ್​ ಅವರು ಕಳೆದ 22 ವರ್ಷಳಿಂದ ಮಧುಮೇಹಕ್ಕೆ ತುತ್ತಾಗಿದ್ದಾರೆ. 12 ವರ್ಷಗಳಿಂದ ಇನ್ಸುಲಿನ್​ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಅವರ ಆರೋಗ್ಯ ಉತ್ತಮವಾಗಿದೆ. ಇನ್ಸುಲಿನ್​ ಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ತಿಹಾರ್​ ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರ ಹಿಂದೆ ಏನೋ ರಹಸ್ಯ ಅಡಗಿದೆ ಎಂದು ಅವರು ಹೇಳಿದರು.

ತಿಹಾರ್​ ಜೈಲಿನಲ್ಲಿ ವೈದ್ಯರು ಮತ್ತು ಇನ್ಸುಲಿನ್​ ಲಭ್ಯತೆ ಇಲ್ಲವಾದಲ್ಲಿ, ಕೇಜ್ರಿವಾಲ್​ ಅವರಿಗೆ ವಿಡಿಯೋ ಕಾಲ್​ ಮೂಲಕ ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಬೇಕು. ಬಿಜೆಪಿ ಮತ್ತು ತಿಹಾರ್ ಜೈಲಿನ ಅಧಿಕಾರಿಗಳು ಕೇಜ್ರಿವಾಲ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಅವರಿಗೆ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಸೌಲಭ್ಯ ನೀಡುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಮಧುಮೇಹಕ್ಕೆ ಇನ್ಸುಲಿನ್​ ನೀಡುವುದಾಗಿ ಹೇಳಿತ್ತು. ಇದೀಗ ದೆಹಲಿ ಗವರ್ನರ್​ ಜನರಲ್​ಗೆ ಪತ್ರ ಬರೆದು ಚುಚ್ಚುಮದ್ದು ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಏಮ್ಸ್​ ಆಸ್ಪತ್ರೆಯಿಂದಲೂ ಪ್ರಮಾಣಪತ್ರ ಪಡೆದಿದ್ದಾರೆ. ಇದು ಅನುಮಾನ ಮೂಡಿಸುತ್ತಿದೆ ಎಂದು ಅವರು ಹೇಳಿದರು.

ಜೈಲಧಿಕಾರಿಗಳು ಹೇಳೋದೇನು?: ಕೇಜ್ರಿವಾಲ್​ ಅವರು ಬಂಧನಕ್ಕೂ ಒಂದು ತಿಂಗಳು ಮೊದಲು ಮಧುಮೇಹಕ್ಕೆ ಇನ್ಸುಲಿನ್​ ಪಡೆಯುವುದನ್ನು ನಿಲ್ಲಿಸಿದ್ದಾರೆ. ಈಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಹೀಗಾಗಿ ಅವರಿಗೆ ಚುಚ್ಚುಮದ್ದು ಬೇಕಾಗಿಲ್ಲ ಎಂದು ದೆಹಲಿ ಗವರ್ನರ್​ ಜನರಲ್​ಗೆ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದರು.

ದೆಹಲಿ ಸಿಎಂ ಆರೋಗ್ಯದ ಬಗ್ಗೆ ತುರ್ತು ಮಾಹಿತಿ ನೀಡುವಂತೆ ಗವರ್ನರ್​ ಸೂಚಿಸಿದ್ದಕ್ಕೆ ಪತ್ರ ಬರೆದಿರುವ ಜೈಲಧಿಕಾರಿಗಳು, ಕೇಜ್ರಿವಾಲ್​ ಅವರು ಸದ್ಯ ಡಯಾಬಿಟಿಸ್​ಗೆ ಮೌಖಿಕ ಔಷಧಿಗಳನ್ನು ಮಾತ್ರ ಬಳಸುತ್ತಿದ್ದಾರೆ. ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ಪ್ರಕಾರ, ಯಾವುದೇ ಇನ್ಸುಲಿನ್ ತೆಗೆದುಕೊಳ್ಳುತ್ತಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಸೂಚಿಸಲಾಗಿದೆ ಎಂದು ಜೈಲಧಿಕಾರಿಗಳು ಹೇಳಿದ್ದಾರೆ.

ಇದಕ್ಕೂ ಮೊದಲು, ಜಾಮೀನು ಪಡೆದುಕೊಳ್ಳಲು ಕೇಜ್ರಿವಾಲ್​ ಅವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಉದ್ದೇಶಪೂರ್ವಕವಾಗಿ ಮಾವಿನಹಣ್ಣು ಮತ್ತು ಇತರ ಹೆಚ್ಚಿನ ಸಿಹಿ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು(ಇಡಿ) ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಏಪ್ರಿಲ್ 23 ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಸಿಎಂ ಕೇಜ್ರಿವಾಲ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ - Arvind Kejriwal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.