ETV Bharat / bharat

ಹಲ್ಲೆ ಆರೋಪ; ವದಂತಿ ಹಬ್ಬಿಸಿದ್ದಕ್ಕೆ ಮಹಿಳಾ ಸಂತೆಯ ವಿರುದ್ಧ ಕೇಸ್

author img

By ETV Bharat Karnataka Team

Published : Mar 12, 2024, 7:16 PM IST

ಅಪರಿಚಿತ ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವದಂತಿ ಹಬ್ಬಿಸಿದ ಮಹಿಳಾ ಸಂತರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಮನಾಥಪುರಂ
ರಾಮನಾಥಪುರಂ

ರಾಮನಾಥಪುರಂ (ತಮಿಳುನಾಡು) : ತಮ್ಮ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಕಾರಿಗೆ ಹಾನಿ ಮಾಡಿದ್ದಾರೆ ಎಂದು ರಾಮೇಶ್ವರಂಗೆ ಯಾತ್ರೆ ಕೈಗೊಂಡಿದ್ದ ಮಹಿಳಾ ಸಂತೆ ಸಫ್ರಾ ಪಾಠಕ್ ಅವರು ಆರೋಪಿಸಿದ್ದಾರೆ. ಈ ಯಾತ್ರೆ ಈಗ ವಿವಾದಕ್ಕೆ ಕಾರಣವಾಗಿದೆ. ಸಫ್ರಾ ಪಾಠಕ್ ಮತ್ತು ಆಕೆಯ ಸಂಬಂಧಿಕರು ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಪಾಠಕ್, ತನ್ನ ತಂದೆ ಮತ್ತು ಸಹೋದರನೊಂದಿಗೆ ರಾಮೇಶ್ವರಂಗೆ 4,000 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದರು.

ಸಿಸಿಟಿವಿ ದೃಶ್ಯಾವಳಿಗಳು ಆಕೆಯ ಹೇಳಿಕೆಗಳಿಗೆ ವಿರುದ್ಧವಾಗಿವೆ. ಸಂತೆಯ ಸಹೋದರ ರಸ್ತೆಯಿಂದ ಕಲ್ಲುಗಳನ್ನು ಸಂಗ್ರಹಿಸಿ ಕಾರಿನಲ್ಲಿ ಇರಿಸುತ್ತಿರುವುದು ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ವದಂತಿಗಳನ್ನು ಹಬ್ಬಿಸಿ, ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹುಟ್ಟುಹಾಕಿದ್ದಕ್ಕಾಗಿ ಪಾಠಕ್ ಮತ್ತು ಆಕೆಯ ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆದರೆ ಸಂತೆ ಪಾಠಕ್​​ ಮಾತ್ರ ಪೊಲೀಸರ ಆರೋಪಗಳನ್ನು ತಳ್ಳಿ ಹಾಕಿದ್ದು, ತೀರ್ಥಯಾತ್ರೆಗೆ ಹಲವರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯನ್ನು ರಾವಣ ರಾಮನ ಹಾದಿಗೆ ಅಡ್ಡಿಪಡಿಸುವುದಕ್ಕೆ ಹೋಲಿಸಿದ್ದಾರೆ. ಅವರು ತಮ್ಮ ಸ್ವರಾಜ್ಯ ಉತ್ತರಪ್ರದೇಶಕ್ಕೆ ಮರಳುವುದಕ್ಕಾಗಿ ರಾಮೇಶ್ವರಂನಿಂದ ಮಧುರೈಗೆ ತೆರಳುತ್ತಿದ್ದರು.

ಈ ನಡುವೆ ಪಾಠಕ್​ ಅವರೊಂದಿಗೆ ಸ್ಥಳೀಯ ಸಂಘಟನೆಗಳು ಪಾಲ್ಗೊಂಡಿವೆಯಾ ಅಥವಾ ಸಹಾಯ ಮಾಡಿವೆಯಾ ಎಂಬ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಅವರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ : ರಸ್ತೆ ಮೇಲೆ ನಮಾಜ್​ ಮಾಡುತ್ತಿದ್ದ ವ್ಯಕ್ತಿಗೆ ಥಳಿಸಿದ ಪೊಲೀಸ್​ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.