ಹೈದರಾಬಾದ್​​ನಲ್ಲಿ ಮರ್ಯಾದಾ ಹತ್ಯೆ: ಗಂಡನ ಕಳೆದುಕೊಂಡ ಅಶ್ರೀನ್​ ಸುಲ್ತಾನಾ ಹೇಳಿದ್ದೇನು?

By

Published : May 6, 2022, 11:54 AM IST

thumbnail

ಹೈದರಾಬಾದ್​: ಕುಟುಂಬಸ್ಥರ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಕ್ಕಾಗಿ ಪತ್ನಿಯ ಎದುರೇ ದಲಿತ ಸಮುದಾಯದ ಯುವಕ ನಾಗರಾಜ್‌ನನ್ನು ಬರ್ಬರವಾಗಿ ಕೊಚ್ಚಿ ಕೊಂದ ಘಟನೆ ಹೈದರಾಬಾದ್​​ನಲ್ಲಿ ಬುಧವಾರ ರಾತ್ರಿ ನಡೆದಿತ್ತು. ಇದೀಗ ಘಟನೆಗೆ ಸಂಬಂಧಿಸಿದಂತೆ ಪತ್ನಿ ಅಶ್ರೀನ್​ ಸುಲ್ತಾನಾ ಮಾತನಾಡಿದ್ದಾರೆ. 'ನನ್ನ ಮದುವೆಗೆ ನಮ್ಮ ಮನೆಯಲ್ಲಿ ಸಹೋದರ ಸೇರಿದಂತೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ನನ್ನ ಪತಿ ನಾಗರಾಜ್‌, ಸಹೋದರನ ಮುಂದೆ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿಯೂ ತಿಳಿಸಿದ್ದರು. ಆದರೆ, ಇದಕ್ಕೆ ನನ್ನ ಸಹೋದರ ಒಪ್ಪಿರಲಿಲ್ಲ. ಇದರ ಮಧ್ಯೆ ಕೂಡ ನಾವು ಮದುವೆ ಮಾಡಿಕೊಂಡೆವು. ನಿನ್ನೆ ಮನೆಗೆ ಹೋಗುತ್ತಿದ್ದ ವೇಳೆ ನನ್ನ ಸಹೋದರ ಹಾಗೂ ಮತ್ತೊಬ್ಬ ವ್ಯಕ್ತಿ ಮೋಟಾರ್​ ಸೈಕಲ್​​ನಲ್ಲಿ ಬಂದು ಗಂಡನ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ಯಾರೂ ಸಹ ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಪೊಲೀಸರು ಕೂಡ 30 ನಿಮಿಷ ತಡವಾಗಿ ಘಟನಾ ಸ್ಥಳಕ್ಕೆ ಬಂದರು ಎಂದು ಅಳಲು ತೋಡಿಕೊಂಡರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.