ಪೊಲೀಸರು ಬೈಕ್ ಹಿಡಿಯುತ್ತಿದ್ದಂತೆ ಸ್ನೇಹಿತನ ಬಿಟ್ಟು ಪರಾರಿಯಾದ ಬೈಕ್ ಸವಾರ!

By

Published : Jan 24, 2022, 9:30 PM IST

Updated : Jan 28, 2022, 4:35 PM IST

thumbnail

ದಾವಣಗೆರೆ: ಪೊಲೀಸರು ಬೈಕ್ ಹಿಡಿಯುತ್ತಿದ್ದಂತೆ ಸ್ನೇಹಿತನನ್ನೇ ಬಿಟ್ಟು ಬೈಕ್ ಸವಾರ ಪರಾರಿಯಾಗಿರುವ ಘಟನೆ ನಗರದ ಶಾಮನೂರು ರಸ್ತೆಯಲ್ಲಿ ನಡೆದಿದೆ. ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಸವಾರರನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ಯವಕರು ಹೆಲ್ಮೆಟ್ ಇಲ್ಲದೆ ಬೈಕ್​​​​ನಲ್ಲಿ ಬರುತ್ತಿರುವುದನ್ನು ನೋಡಿದ ಪೊಲೀಸರು ಅವರನ್ನು ಹಿಡಿದು ಹೆಲ್ಮೆಟ್ ಖರೀದಿಸಿ ಎಂದು ಹೇಳಿದ್ದಾರೆ. ಜೊತೆಗಿದ್ದ ಸ್ನೇಹಿತನನ್ನು ಕೆಳಗಿಳಿಸಿ ಬೈಕ್ ಅನ್ನು ಸೈಡ್​​ಗೆ ಹಾಕುವ ನೆಪದಲ್ಲಿ ಅಲ್ಲಿಂದ ಯುವಕ ಬೈಕ್ ಸಮೇತ ಕಾಲ್ಕಿತ್ತಿದ್ದಾನೆ. ಇತ್ತ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಆತನ ಸ್ನೇಹಿತನನ್ನು ಸ್ವಲ್ವ ಸಮಯದ ನಂತರ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ‌.

Last Updated : Jan 28, 2022, 4:35 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.