ಪೊಲೀಸರು ಬೈಕ್ ಹಿಡಿಯುತ್ತಿದ್ದಂತೆ ಸ್ನೇಹಿತನ ಬಿಟ್ಟು ಪರಾರಿಯಾದ ಬೈಕ್ ಸವಾರ!
ದಾವಣಗೆರೆ: ಪೊಲೀಸರು ಬೈಕ್ ಹಿಡಿಯುತ್ತಿದ್ದಂತೆ ಸ್ನೇಹಿತನನ್ನೇ ಬಿಟ್ಟು ಬೈಕ್ ಸವಾರ ಪರಾರಿಯಾಗಿರುವ ಘಟನೆ ನಗರದ ಶಾಮನೂರು ರಸ್ತೆಯಲ್ಲಿ ನಡೆದಿದೆ. ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಸವಾರರನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ಯವಕರು ಹೆಲ್ಮೆಟ್ ಇಲ್ಲದೆ ಬೈಕ್ನಲ್ಲಿ ಬರುತ್ತಿರುವುದನ್ನು ನೋಡಿದ ಪೊಲೀಸರು ಅವರನ್ನು ಹಿಡಿದು ಹೆಲ್ಮೆಟ್ ಖರೀದಿಸಿ ಎಂದು ಹೇಳಿದ್ದಾರೆ. ಜೊತೆಗಿದ್ದ ಸ್ನೇಹಿತನನ್ನು ಕೆಳಗಿಳಿಸಿ ಬೈಕ್ ಅನ್ನು ಸೈಡ್ಗೆ ಹಾಕುವ ನೆಪದಲ್ಲಿ ಅಲ್ಲಿಂದ ಯುವಕ ಬೈಕ್ ಸಮೇತ ಕಾಲ್ಕಿತ್ತಿದ್ದಾನೆ. ಇತ್ತ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಆತನ ಸ್ನೇಹಿತನನ್ನು ಸ್ವಲ್ವ ಸಮಯದ ನಂತರ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
Last Updated : Jan 28, 2022, 4:35 PM IST