ಉದ್ಯಾವರ ನದಿಯಲ್ಲಿ ದೋಣಿ ಏರಿ ಕೃಷ್ಣ ನಗರಿಗೆ ಬಂದಿದ್ದರು ರಾಷ್ಟ್ರಪಿತ!
ಇಂದು ಗಾಂಧಿ ಜಯಂತಿ.. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಷ್ಟ್ರಪಿತನ ಸ್ಮರಣೆ ಜೋರಾಗಿದೆ. ಅಂದಹಾಗೆ ಗಾಂಧೀಜಿ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದರು. ಬಂದದ್ದು ಕೇವಲ ಒಂದು ಬಾರಿಯಾದರೂ ಅವರು ನೆನಪು ಚಿರಸ್ಥಾಯಿ. ಆದರೆ, ಈ ಭೇಟಿಯ ಬಗ್ಗೆ ಅಂದು ಛಾಯಾಗ್ರಾಹಕನೊಬ್ಬ ತೆಗೆದ ಫೋಟೋ ಇಂದು ಸಾಕ್ಷಿಯಾಗಿ ಉಳಿದಿದೆ.