ಶಿವಮೊಗ್ಗ: ಮನೆ ಮುಂದಿಟ್ಟ ಚಪ್ಪಲಿಗಳು ಬೆಳಗಾಗುವಷ್ಟರಲ್ಲಿ ಮಾಯ, ಕಳ್ಳರ ಕಾಟಕ್ಕೆ ಬೇಸತ್ತ ಜನ

By ETV Bharat Karnataka Team

Published : Nov 20, 2023, 1:41 PM IST

thumbnail

ಶಿವಮೊಗ್ಗ: ಮನೆ ಮುಂದೆ ಬಿಡುವ ಚಪ್ಪಲಿಗಳು ಬೆಳಗಾಗುವುದರೊಳಗೆ ಕಾಣೆಯಾಗುತ್ತಿರುವ ಘಟನೆ ನಗರದ ಗೋಪಾಲಗೌಡ ಬಡಾವಣೆಯಲ್ಲಿ ನಡೆಯುತ್ತಿದೆ. ಚಪ್ಪಲಿ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗೋಪಾಲಗೌಡ ಬಡಾವಣೆಯು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದೆ. ಇಲ್ಲಿನ ನಿವಾಸಿಗಳು ಉತ್ತಮವಾದ ಕಂಪನಿಯ ಹೆಚ್ಚು ದರದ ಚಪ್ಪಲಿಗಳನ್ನೇ ಧರಿಸುತ್ತಾರೆ. ಎಲ್ಲರೂ ತಮ್ಮ ಮನೆಯ ಕಾಂಪೌಂಡ್ ಒಳಗೆಯೇ ಚಪ್ಪಲಿಗಳನ್ನು ಬಿಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಚಪ್ಪಲಿ‌ ಎಗರಿಸುತ್ತಿದ್ದಾರೆ.

ಅದರಂತೆ ಮೊನ್ನೆ ದಿನ ಗೋಪಾಲಗೌಡ ಬಡಾವಣೆಯ ಜಿತೇಂದ್ರ ಗೌಡ ಎಂಬುವರ ಮನೆ ಕಾಂಪೌಂಡ್ ಒಳಗೆ ಬಿಟ್ಟಿದ್ದ ಚಪ್ಪಲಿಯನ್ನು ಕಳ್ಳನೋರ್ವ ಕದ್ದೊಯ್ದಿದ್ದಾನೆ. ಕಳ್ಳ ಚಪ್ಪಲಿ ಕದಿಯುತ್ತಿರುವ ದೃಶ್ಯ ಜಿತೇಂದ್ರ ಗೌಡ ಅವರ ಮನೆಯ ಸಿಸಿ‌ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಬಿಳಿ ಜರ್ಕಿನ್ ಹಾಕಿಕೊಂಡ ವ್ಯಕ್ತಿಯೋರ್ವ ನಿಧಾನವಾಗಿ ಬಂದು ಮನೆ ಮುಂದೆ ಬಿಟ್ಟಿರುವ ಚಪ್ಪಲಿಯನ್ನು ಕದ್ದು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಚಪ್ಪಲಿ ಕಳ್ಳರ ಹಾವಳಿಗೆ ಗೋಪಾಲಗೌಡ ಬಡಾವಣೆಯ ಜನ ಬೇಸತ್ತು ಹೋಗಿದ್ದಾರೆ.

ಸಿಸಿ ಕ್ಯಾಮರಾ ಇದ್ದರೂ ಕಳ್ಳರು ಯಾವುದೇ ಭಯವಿಲ್ಲದೆ ನಿರ್ಭಯವಾಗಿ ಚಪ್ಪಲಿ ಕದಿಯುತ್ತಿದ್ದಾರೆ. ಇಷ್ಟೆಲ್ಲಾ ಪುರಾವೆಗಳಿದ್ದರೂ ಪೊಲೀಸರು ಕಳ್ಳರನ್ನು ಬಂಧಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್​ನಿಂದ ಚಿನ್ನಾಭರಣ ಕಳವು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.