ಬಣ್ಣಾರಿ ಬಳಿ KSRTC ಬಸ್ ಗಾಜು ಪುಡಿ-ಪುಡಿ.. ನನಗೂ ಗ್ಯಾರಂಟಿ ಬೇಕು ಅಂತಾ ಆನೆ!?

By

Published : Jun 3, 2023, 3:35 PM IST

thumbnail

ಚಾಮರಾಜನಗರ: ಗ್ಯಾರಂಟಿ ಯೋಜನೆ ಕೇವಲ ನಿಮಗೇ ಏಕೆ ನನಗೂ ಬೇಕು ಎಂಬ ರೀತಿ ಆನೆಯೊಂದು ​ಕೆಎಸ್​​ಆರ್​​ಟಿಸಿ ಬಸ್​ಗೆ​​​ ಅಡ್ಡಲಾಗಿ ಬಂದು ಗಾಜನ್ನು ಪುಡಿ ಮಾಡಿರುವ ಘಟನೆ ತಮಿಳುನಾಡಿನ‌ ಬಣ್ಣಾರಿ ಬಳಿ ನಡೆದಿದೆ. ಚಾಮರಾಜನಗರದ ಗುಂಡ್ಲುಪೇಟೆ ಡಿಪೋಗೆ ಸೇರಿರುವ ಸಾರಿಗೆ ಸಂಸ್ಥೆ ಬಸ್ ಮೈಸೂರಿನಿಂದ ಕೊಯಮತ್ತೂರಿಗೆ ತೆರಳುವಾಗ ಬಣ್ಣಾರಿ ಬಳಿ ಏಕಾಏಕಿ ರಸ್ತೆ ಮೇಲೆ ಪ್ರತ್ಯಕ್ಷಗೊಂಡ ಹೆಣ್ಣಾನೆ ಸಾರಿಗೆ ಬಸ್​​ನ ಗಾಜನ್ನು ಒಡೆದು ಹಾಕಿದೆ.

ಈ ಸಂಬಂಧ ಕೆಎಸ್ಆರ್​​ಟಿಸಿ ಚಾಮರಾಜನಗರ ವಿಭಾಗದ ಡಿಸಿ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ಗಾಯ, ಪ್ರಾಣಾಪಾಯ ಸಂಭವಿಸಿಲ್ಲ. ಬಸ್​​ನ ಗಾಜು ಒಡೆದು ಹೋಗಿದ್ದರಿಂದ 10 ಸಾವಿರ ರೂ. ನಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಕೇವಲ ಮನುಷ್ಯರಿಗೆ ಏಕೆ ನಮಗೂ ಬೇಕು ಎಂದು ಆನೆ ಗಾಜು ಒಡೆದಿದೆ ಎಂಬ ಅಡಿಬರಹದಲ್ಲಿ ಫೋಟೋವೊಂದು ವೈರಲ್​ ಆಗಿದೆ.

ಇದನ್ನೂ ಓದಿ: ಬಾಲಸೋರ್​ ರೈಲು ಅಪಘಾತ- ಸಾವಿನ ಸಂಖ್ಯೆ 261ಕ್ಕೆ ಏರಿಕೆ: ಹಳಿಗಳ ಮೇಲೆ ಮರಣ ಮೃದಂಗ, ಸುಮಾರು 50 ಟ್ರೈನ್​ಗಳು ರದ್ದು​!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.