ರಾಷ್ಟ್ರೀಯ ಯುವಜನೋತ್ಸವ: ಜಲಕ್ರೀಡೆಯಲ್ಲಿ ಭಾಗವಹಿಸಿ ಸಂತಸಪಟ್ಟ ಯುವ ಜನರು..
![ETV Thumbnail thumbnail](https://etvbharatimages.akamaized.net/etvbharat/prod-images/320-214-17485580-thumbnail-3x2-ck.jpg)
ಧಾರವಾಡ: ರಾಷ್ಟ್ರೀಯ ಯುವಜನೋತ್ಸವದಲ್ಲಿ ಮೂರನೇ ದಿನವಾದ ಇಂದು ವಿವಿಧ ಕಾರ್ಯಕ್ರಮಗಳು ನಡೆದವು. ಧಾರವಾಡದ ಕೆಲಗೇರಿ ಕೆರೆಯಲ್ಲಿ ಜಲಕ್ರೀಡೆಯ ಆಯೋಜನೆ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಜಲಕ್ರೀಡೆಗೆ ಚಾಲನೆ ನೀಡಿದರು. ಕೆಲಗೇರಿ ಕೆರೆಯಲ್ಲಿ ನಡೆದ ಜಲಕ್ರೀಡೆಯಲ್ಲಿ ಭಾಗವಹಿಸಿದ ಯುವಕ - ಯುವತಿಯರು ಸಖತ್ ಎಂಜಾಯ್ ಮಾಡಿದರು. ಸಾಹಸಮಯ ಬೋಟಿಂಗ್, ಮಕ್ಕಳ ಬೋಟಿಂಗ್ ಸೇರಿದಂತೆ ವಿವಿಧ ಜಲಕ್ರೀಡೆಗಳನ್ನು ಆಯೋಜನೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಯುವ ಜನರು ಭಾಗವಹಿಸಿ ಸಂತಸಪಟ್ಟರು.
Last Updated : Feb 3, 2023, 8:38 PM IST