ಮಸೀದಿ, ಚರ್ಚ್, ದೇವಾಲಯಗಳು ನಾಯಿ ಕೊಡೆಗಳಾಗ್ತವೆ.. ಕೆಲ ನಿರ್ಗತಿಕರಿಗೆ ಆಲಯದೊಳಗೆ ಪ್ರವೇಶವೇ ನಿರ್ಬಂಧ..
ಅನಧಿಕೃತ ಕಟ್ಟಡ ಸಂರಕ್ಷಿಸಿದ್ರೇ ಸಮಾಜಕ್ಕೆ ಯಾವುದೇ ಒಳಿತಾಗಲ್ಲ. ಮಸೀದಿ, ಚರ್ಚ್, ದೇವಾಲಯಗಳು ನಾಯಿ ಕೊಡೆಗಳಾಗ್ತವೆ. ಕೆಲ ನಿರ್ಗತಿಕರಿಗೆ ದೇವಾಲಯಗಳ ಪ್ರವೇಶವೇ ನಿರ್ಬಂಧವಿದೆ. ಎಲ್ಲ ಧಾರ್ಮಿಕ ಕಟ್ಟಡಗಳಿಗೂ ಎಲ್ಲರಿಗೂ ಸಮಾನ ಅವಕಾಶ ನೀಡಿ. ನೀವು ತರುತ್ತಿರುವ ಕಾನೂನಿಂದ ಯಾವ ಸಮಾಜಕ್ಕೂ ಒಳಿತಾಗಲ್ಲ ಎಂದು ಜೆಡಿಎಸ್ ಎಂಎಲ್ಸಿ ಮರಿತಿಬ್ಬೇಗೌಡ ಗುಡುಗಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಜೆ. ಸಿ ಮಾಧುಸ್ವಾಮಿ, ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ತಾತ್ಕಾಲಿಕ ರಕ್ಷಣೆ ಒದಗಿಸುವುದಕ್ಕೆ ಸೀಮಿತವಾಗಿ ಈ ಮಸೂದೆ ತರಲಾಗಿದೆ ಅಂದರು..