ಮಹಾರಾಷ್ಟ್ರದ ಎಡವಟ್ಟು.. ಉಕ್ಕಿ ಹರಿಯುತ್ತಿದೆ ಮಾಂಜ್ರಾ ನದಿ.. ಈಟಿವಿ ಭಾರತ್ ವಾಕ್ಥ್ರೂ..
ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಮಹಾರಾಷ್ಟ್ರದ ಧನೆಗಾಂವ್ ಜಲಾಶಯದಿಂದ ಹೊರ ಬಿಡಲಾದ ಹೆಚ್ಚುವರಿ ನೀರಿನಿಂದಾಗಿ ಜಿಲ್ಲೆಯ ನದಿ ಮಾಂಜ್ರಾ ಅಪಾಯ ಮಟ್ಟಕ್ಕೆ ತಲುಪಿದೆ. ಪರಿಣಾಮ ನದಿ ತಟದ 23 ಗ್ರಾಮಗಳಲ್ಲಿ ನೆರೆ ಭೀತಿ ಆವರಿಸಿಕೊಂಡಿದೆ. ಸೋಯಾಬಿನ್, ತೊಗರಿ, ಉದ್ದು, ಹೆಸರು ಮುಂಗಾರು ಬೆಳೆಗಳು ನೀರು ಪಾಲಾಗಿವೆ. ಈ ಕುರಿತು ಈಟಿವಿ ಭಾರತ್ ಪ್ರತಿನಿಧಿ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ..