ನೋಡಿ: ತಿರುವನಂತಪುರದ ಅಕ್ಕುಲಂ ಸರೋವರದಲ್ಲಿ ಭಾರತೀಯ ಸೇನೆ ಸ್ವಾತಂತ್ರ್ಯ ದಿನಾಚರಿಸಿದ್ದು ಹೀಗೆ..
ಕೇರಳ: ಭಾರತದ ಸ್ವಾತಂತ್ರ್ಯ ದಿನವನ್ನು ಅಷ್ಟೊಂದು ಸಂಭ್ರಮದಿಂದ ಆಚರಿಸುವುದರ ಹಿಂದೆ ಸುದೀರ್ಘ ಹೋರಾಟದ ಹಾದಿಯಿದೆ. ಅನೇಕ ವೀರರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಪ್ರಾಣಾರ್ಪಣೆಯನ್ನೇ ಮಾಡಿದ್ದರು. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿನ್ನೆ ತಿರುವನಂತಪುರಂನ ಅಕ್ಕುಲಂ ಸರೋವರದಲ್ಲಿ ಮೀನುಗಾರಿಕಾ ದೋಣಿಗಳಲ್ಲಿ ಮದ್ರಾಸ್ ರೆಜಿಮೆಂಟಿನ ಯೋಧರು ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಸರೋವರದ ಮಧ್ಯದಲ್ಲಿ ಮೀನುಗಾರಿಕಾ ದೋಣಿಗಳನ್ನು ಜೋಡಿಸಿ, ತ್ರಿವರ್ಣ ಧ್ವಜದಲ್ಲಿ 75 ಎಂದು ಪ್ರದರ್ಶಿಸಿದರು.
Last Updated : Aug 16, 2021, 4:27 PM IST