ಇದು ಬೆಳ್ಳುಳ್ಳಿಯಲ್ಲ ಈರುಳ್ಳಿ.. ಇದೇ ಕಾರಣಕ್ಕೆ ಟ್ರಾಕ್ಟರ್ ಚಲಾಯಿಸಿ ನಾಶ ಪಡಿಸಿದ ರೈತ!
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದ ಹಿನ್ನೆಲೆ, ಈರುಳ್ಳಿ ಬೆಳೆ ಕೈ ಕೊಟ್ಟ ಕಾರಣ, ಮನನೊಂದ ರೈತ ಈರುಳ್ಳಿ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳಯಲಾಗಿದ್ದ ಈರುಳ್ಳಿ ಬೆಳೆ ಮಳೆಗೆ ಹಾನಿಯಾಗಿದ್ದು, ಈರುಳ್ಳಿ ಗಾತ್ರ ಬೆಳ್ಳುಳ್ಳಿಯಂತಿದೆ ಎಂದು ಮನನೊಂದ ರೈತ ಬೆಳೆ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾರೆ. ಸುಮಾರು 3 ರಿಂದ 4 ಲಕ್ಷ ಖರ್ಚು ಮಾಡಿ ಮಂಜುನಾಥ್ ಬೆಳೆಯನ್ನು ಬೆಳೆದಿದ್ದರು. ಈ ಬೆಳೆಯ ದುಡ್ಡು ಈರುಳ್ಳಿ ಕಿತ್ತವರ ಕೂಲಿಗೂ ಆಗುವುದಿಲ್ಲ ಎಂದು ಟ್ರ್ಯಾಕ್ಟರ್ ಚಲಾಯಿಸಿ ಈ ವರ್ಷ ನನ್ನ ಬೆಳೆ ಹಾಳಾಗಿ ಹೋಯಿತು ಎಂದು ಕಣ್ಣೀರು ಹಾಕಿದ್ದಾರೆ.
Last Updated : Feb 3, 2023, 8:28 PM IST