ಇದು ಬೆಳ್ಳುಳ್ಳಿಯಲ್ಲ ಈರುಳ್ಳಿ.. ಇದೇ ಕಾರಣಕ್ಕೆ ಟ್ರಾಕ್ಟರ್​ ಚಲಾಯಿಸಿ ನಾಶ ಪಡಿಸಿದ ರೈತ!

By

Published : Sep 23, 2022, 1:33 PM IST

Updated : Feb 3, 2023, 8:28 PM IST

thumbnail

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದ ಹಿನ್ನೆಲೆ, ಈರುಳ್ಳಿ ಬೆಳೆ ಕೈ ಕೊಟ್ಟ ಕಾರಣ, ಮನನೊಂದ ರೈತ ಈರುಳ್ಳಿ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳಯಲಾಗಿದ್ದ ಈರುಳ್ಳಿ ಬೆಳೆ ಮಳೆಗೆ ಹಾನಿಯಾಗಿದ್ದು, ಈರುಳ್ಳಿ ಗಾತ್ರ ಬೆಳ್ಳುಳ್ಳಿಯಂತಿದೆ ಎಂದು ಮನನೊಂದ ರೈತ ಬೆಳೆ ಮೇಲೆ ಟ್ರ್ಯಾಕ್ಟರ್​​ ಹರಿಸಿದ್ದಾರೆ. ಸುಮಾರು 3 ರಿಂದ 4 ಲಕ್ಷ ಖರ್ಚು ಮಾಡಿ ಮಂಜುನಾಥ್ ಬೆಳೆಯನ್ನು ಬೆಳೆದಿದ್ದರು. ಈ ಬೆಳೆಯ ದುಡ್ಡು ಈರುಳ್ಳಿ ಕಿತ್ತವರ ಕೂಲಿಗೂ ಆಗುವುದಿಲ್ಲ ಎಂದು ಟ್ರ್ಯಾಕ್ಟರ್​​ ಚಲಾಯಿಸಿ ಈ ವರ್ಷ ನನ್ನ ಬೆಳೆ ಹಾಳಾಗಿ ಹೋಯಿತು ಎಂದು ಕಣ್ಣೀರು ಹಾಕಿದ್ದಾರೆ.

Last Updated : Feb 3, 2023, 8:28 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.