ಶಿರಡಿ ಸಾಯಿಬಾಬಾ ಮಂದಿರಕ್ಕೆ ನಟ ಅಕ್ಷಯ್​ ಕುಮಾರ್ ಭೇಟಿ​, ದರ್ಶನ

By

Published : Jan 25, 2023, 4:22 PM IST

Updated : Feb 3, 2023, 8:39 PM IST

thumbnail

ಶಿರಡಿ(ಮಹಾರಾಷ್ಟ್ರ): ಭಾರತದಲ್ಲಿ ಅತಿ ಹೆಚ್ಚು ಜನ ಪೂಜಿಸಲ್ಪಡುವ ಏಕೈಕ ಸಂತ ಎಂದರೆ ಶಿರಡಿ ಸಾಯಿಬಾಬಾ, ಬಾಲಿವುಡ್​ನ ಖ್ಯಾತ ನಟ ಅಕ್ಷಯ ಕುಮಾರ್ ಬುಧವಾರ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ, ಸಾಯಿಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್​ ಜಾಧವ್​ ಅವರು ಅಕ್ಷಯ್​ ಕುಮಾರ್​ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಸಾಯಿಬಾಬಾ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮಂದಿರಕ್ಕೆ ಬಾಲಿವುಡ್​ ಸೂಪರ್​ ಸ್ಟಾರ್​ ಅಕ್ಷಯ್​ ಕುಮಾರ್​ ಬಂದಿದ್ದಾರೆ ಎಂದು ತಿಳಿದ ಇತರ ಭಕ್ತಾಧಿಗಳು ನಟನನ್ನು ಕಂಡು ಸಂತೋಷ ಪಟ್ಟರು. ಇನ್ನು ಕೆಲವರು ಅವರನ್ನು ಕೈಕುಲಿಕಿ ಮಾತನಾಡಿಸಲು ಮುಂದಾದರು. ಶಿರಡಿ ಸಾಯಿಬಾಬಾ ದರ್ಶನಕ್ಕೆ ಇಂದು ಅಕ್ಷಯ್​ ಕುಮಾರ್​ ಅವರು ಶಿರಡಿಗೆ ಆಗಮಿಸುತ್ತಿದ್ದಾರೆ ಎಂದ ತಿಳಿದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಜಮಾಯಿಸಿದ್ದರು.

ಇದನ್ನೂ ಓದಿ: ದೇವಸ್ಥಾನದ ಆನೆಗಾಗಿ 8.40 ಲಕ್ಷ ರೂ ವೆಚ್ಚದ ಈಜುಕೊಳ ನಿರ್ಮಾಣ..

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.