ಅಪಘಾತದಲ್ಲಿ ಗಾಯಗೊಂಡ ರಿಷಭ್​ ಪಂತ್​ ರಕ್ಷಿಸಿದ್ದ ನಾಲ್ವರಿಗೆ ಸಿಎಂ ಸನ್ಮಾನ

By

Published : Jan 26, 2023, 6:31 PM IST

Updated : Feb 3, 2023, 8:39 PM IST

thumbnail

ಡೆಹ್ರಡೂನ್​ (ಉತ್ತರಾಖಂಡ): ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ತಂಡದ ಬ್ಯಾಟರ್​ ರಿಷಭ್​ ಪಂತ್​ ಅವರನ್ನು ರಕ್ಷಿಸಿದ್ದ ಚಾಲಕ ಸುಶೀಲ್ ಕುಮಾರ್, ಕಂಡಕ್ಟರ್ ಪರಮ್‌ಜೀತ್, ನಿಶು ಮತ್ತು ರಜತ್ ಎಂಬುವವರಿಗೆ ಇಂದು ಸನ್ಮಾನಿಸಲಾಯಿತು. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ನಾಲ್ವರಿಗೆ ಸನ್ಮಾನಿಸಿದರು. ಅಲ್ಲದೇ ತಲಾ ಒಬ್ಬರಿಗೆ ಒಂದು ಲಕ್ಷ ರೂ ನಗದು ಸೇರಿ ಪ್ರಶಸ್ತಿ ಪತ್ರವನ್ನು ನೀಡಲಾಯಿತು. 

ಸುಶೀಲ್ ಕುಮಾರ್ ಅವರ ಪತ್ನಿ ರಿತು, ಪರಮ್‌ಜೀತ್ ಅವರ ತಂದೆ ಸುರೇಶ್​ ಕುಮಾರ್​ ಗೌರವವನ್ನು ಸ್ವೀಕರಿಸಿದರು. ಇನ್ನು ಕಳೆದ ವರ್ಷ ಡಿ.30ರಂದು ದೆಹಲಿಯಿಂದ ಮನೆಗೆ ವಾಪಸ್ಸಾಗುವಾಗ ಹಮ್ಮದ್‌ಪುರ ಝಾಲ್ ಬಳಿ ರಿಷಭ್​ ಪಂತ್​ ಅವರ ಕಾರು ಡಿವೈಡರ್​ಗೆ ಡಿಕ್ಕಿಹೊಡೆದಿತ್ತು. 

ಘಟನೆಯಲ್ಲಿ ರಿಷಭ್​ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸುಶೀಲ್ ಕುಮಾರ್, ಪರಮ್‌ಜೀತ್, ನಿಶು ಮತ್ತು ರಜತ್ ಎಂಬುವವರು ಅವರ ಸಾಹಾಯಕ್ಕೆ ದೌಡಾಯಿಸಿ ಅವರನ್ನು ರಕ್ಷಣೆ ಮಾಡಿದ್ದರು. ಅಲ್ಲದೇ ರಿಷಭ್​ ಪಂತ ಅವರಿಗೆ ಸಂಬಧಿಸಿದ ವಸ್ತುಗಳನ್ನು ಪೊಲೀಸರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದರು. ಈ ಬಗ್ಗೆ ಪಂತ್ ಕೂಡ ಅವರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಕೃತಜ್ಞತೆ ಸಲ್ಲಿಸಿದರು. 

ಇದನ್ನೂ ಓದಿ: Watch.. ಶ್ರೀನಗರದ ಲಾಲ್​ಚೌಕ್​ ಕ್ಲಾಕ್​ ಟವರ್​ ಮೇಲೆ ಹಾರಾಡಿದ ತ್ರಿವರ್ಣ ಧ್ವಜ​

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.