ETV Bharat / state

ಪಾರ್ಕಿಂಗ್ ವಿಚಾರಕ್ಕೆ ಗಲಾಟೆ : ಯಾದಗಿರಿಯಲ್ಲಿ ಜಗಳ ಬಿಡಿಸಲು ಬಂದ ವ್ಯಕ್ತಿಗೆ ಚೂರಿ ಇರಿದು ಕೊಲೆ

author img

By

Published : May 15, 2023, 4:43 PM IST

argument-over-parking-man-stabbed-to-death-in-yadagiri
ಪಾರ್ಕಿಂಗ್ ವಿಚಾರಕ್ಕೆ ಗಲಾಟೆ : ಜಗಳ ಬಿಡಿಸಲು ಬಂದ ವ್ಯಕ್ತಿಗೆ ಚೂರಿ ಇರಿದು ಕೊಲೆ

ಪಾರ್ಕಿಂಗ್​ ವಿಚಾರಕ್ಕೆ ಗಲಾಟೆ ನಡೆದು ಜಗಳ ಬಿಡಿಸಲು ಬಂದ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ

ಯಾದಗಿರಿ : ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಜಗಳ ಬಿಡಿಸಲು ಬಂದ ವ್ಯಕ್ತಿಯೋರ್ವರಿಗೆ ಚಾಕುವಿನಿಂದ ಇರಿದು ಕೊಲೈಗೈದಿರುವ ಘಟನೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್​ ಬಳಿ ನಡೆದಿದೆ. ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಶ್ರೀನಿವಾಸ್​ (44) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಎಸ್. ಕೆ. ಎಮ್ ವಾಟರ್ ಸರ್ವೀಸ್​​ ಹತ್ತಿರ ಭವಾನಿ ವೈನ್​ ಶಾಪ್​​ ಮಾಲೀಕ ಚಂದ್ರಶೇಖರ ಗುತ್ತೇದಾರ ತಮ್ಮ ಕಾರನ್ನು ನಿಲುಗಡೆ ಮಾಡಿದ್ದರು. ಅದರ ಪಕ್ಕದಲ್ಲೇ ರಾಯಲ್​ ಗಾರ್ಡನ್​​ ಹೋಟೆಲ್​ಗೆ ಆಗಮಿಸಿದ್ದ ಗ್ರಾಹಕರು ಬೈಕ್ ನಿಲ್ಲಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಚಂದ್ರಶೇಖರ ಗುತ್ತೇದಾರ್​ ಅವರಿಗೆ ಕಾರು ತೆಗೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಈ ಸಂಬಂಧ ಸಮೀಪದಲ್ಲಿದ್ದ ರಾಯಲ್ ಗಾರ್ಡನ್ ಹೋಟೆಲ್​ ಮಾಲೀಕ ಅಬ್ದುಲ್​ ಸತ್ತಾರ್​ ಎಂಬವರ ಬಳಿ ಹೋಗಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ತಾರಕಕ್ಕೇರಿದೆ.

ಹೋಟೆಲ್​ ಮಾಲೀಕ, ಕೆಲಸಗಾರರು ಹಾಗೂ ಚಂದ್ರಶೇಖರ್​ ನಡುವೆ ಗಲಾಟೆ ನಡೆದಿದ್ದು, ಇವರ ತಳ್ಳಾಟದ ವೇಳೆ ಹೋಟೆಲ್ ನೌಕರನೋರ್ವ ಜಗಳ ಬಿಡಿಸಲು ಬಂದ ಶ್ರೀನಿವಾಸನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಹಮ್ಮದ್​ ಅನಾಸ್ ಅಬ್ದುಲ್ ಖಾನ್ ಕೊಲೆ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಲ್ಲಿ ಚಂದ್ರಶೇಖರ್​ ಅವರಿಗೆ ಗಾಯಗಳಾಗಿವೆ.

ಇದನ್ನೂ ಓದಿ : ಖಡಕ್​​​ವಾಸ್ಲಾ ಡ್ಯಾಂಗೆ ಈಜಲು ಬಂದ ಬಾಲಕಿಯರು: 7 ಮಂದಿ ರಕ್ಷಣೆ, ಇಬ್ಬರ ಸಾವು

ಈ ಬಗ್ಗೆ ಪ್ರತಿಕ್ರಿಯಿಸಿದ ಯಾದಗಿರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಸಿ. ಬಿ ವೇದಮೂರ್ತಿ, ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ರಾಯಲ್ ಗಾರ್ಡನ್ ಹೋಟೆಲ್​ ಬಳಿ ಭಾನುವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ರಾಯಲ್​ ಗಾರ್ಡನ್​ ಮತ್ತು ಭವಾನಿ ವೈನ್​ ಶಾಪ್​ ಮಾಲೀಕರ ನಡುವೆ ಗಲಾಟೆ ನಡೆದಿದೆ. ಈ ಭವಾನಿ ವೈನ್​ ಶಾಪ್​ ಮುಂದೆ ಮಾಲೀಕರು ತಮ್ಮ ಕಾರು ನಿಲ್ಲಿಸಿದ್ದರು. ಇವರ ಕಾರಿನ ಹಿಂದೆ ರಾಯಲ್​ ಗಾರ್ಡನ್​ ಹೋಟೆಲ್​ಗೆ ಆಗಮಿಸಿದ ಗ್ರಾಹಕರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು.

ಈ ವಾಹನವನ್ನು ತೆಗೆಯುವಂತೆ ಭವಾನಿ ವೈನ್ ಶಾಪ್​ ಮಾಲೀಕ ಚಂದ್ರಶೇಖರ್​ ಹಾಗೂ ರಾಯಲ್​ ಗಾರ್ಡನ್​ ಹೋಟೆಲ್​​ ಮಾಲೀಕ ಅಬ್ದುಲ್​ ಸತ್ತಾರ್ ಬಳಿ ಹೇಳಿದ್ದಾರೆ. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಜಗಳ ಬಿಡಿಸಲು ಬಂದಿದ್ದ ಶ್ರೀನಿವಾಸ್​ ಎಂಬವರಿಗೆ ಜಗಳದ ನಡುವೆ ಚೂರಿ ಇರಿದು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಮತ್ತು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗಿದೆ. ಘಟನೆ ಸಂಬಂಧ ಯಾದಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಇದನ್ನೂ ಓದಿ : ಹೊಸಕೋಟೆಯಲ್ಲಿ ನಿಲ್ಲದ ರಾಜಕೀಯ ವೈಷಮ್ಯ: ಕಿಡಿಗೇಡಿಗಳಿಂದ ಎಂಟಿಬಿ ವೃತ್ತದ ಬೋರ್ಡ್ ಧ್ವಂಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.