ETV Bharat / state

ವೈದ್ಯನಾಗುವ ಆಸೆ ವ್ಯಕ್ತಪಡಿಸಿದ ಎಸ್​ಎಸ್​ಎಲ್​ಸಿ ಟಾಪರ್!

author img

By

Published : May 19, 2022, 5:31 PM IST

Updated : May 19, 2022, 6:37 PM IST

ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಅಮೀತ ಮಾದರ 625ಕ್ಕೆ 625ಅಂಕ ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ‌ಗಳಿಸಿದ್ದಾರೆ.

ವೈದ್ಯನಾಗುವ ಆಸೆ ವ್ಯಕ್ತಪಡಿಸಿದ ಎಸ್​ಎಸ್​ಎಲ್​ಸಿ ಟಾಪರ್
ವೈದ್ಯನಾಗುವ ಆಸೆ ವ್ಯಕ್ತಪಡಿಸಿದ ಎಸ್​ಎಸ್​ಎಲ್​ಸಿ ಟಾಪರ್

ವಿಜಯಪುರ: ಪ್ರಸ್ತಕ ವರ್ಷದ ಎಸ್​​ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ.‌ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಅಮೀತ ಮಾದರ 625ಕ್ಕೆ 625ಅಂಕ ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ‌ಗಳಿಸಿದ್ದಾರೆ. ಇವರ ಜತೆ ಐಶ್ವರ್ಯ ಕನಸೆ ಹಾಗೂ ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದ ಶ್ರೇಯಾ ಬಸವಂತ್ರರಾಯ ದೇಸಾಯಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ತಾಳಿಕೋಟೆ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಶ್ರೇಯಾ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ವಿಜಯಪುರ ಜಿಲ್ಲೆಯ ಮೂವರು ಟಾಪರ್ ಆಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ರಾಜ್ಯಕ್ಕೆ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ವೈದ್ಯನಾಗುವ ಆಸೆ ವ್ಯಕ್ತಪಡಿಸಿದ ಎಸ್​ಎಸ್​ಎಲ್​ಸಿ ಟಾಪರ್!

ಈ ಬಗ್ಗೆ ಮಾತನಾಡಿದ ಮಾದರ, ತನಗೆ ತುಂಬಾ ಸಂತೋಷವಾಗಿದೆ. ಮುಂದೆ ಎಂಬಿಬಿಎಸ್ ಮುಗಿಸಿ ವೈದ್ಯನಾಗುವ ಆಸೆ ಇದೆ ಎಂದರು.

ಇದನ್ನೂ ಓದಿ: 75 ವರ್ಷಗಳ ಬಳಿಕ ಭಾರತದಲ್ಲಿರುವ ಕುಟುಂಬ ಸೇರಿಕೊಂಡ ಪಾಕ್​ ಮಹಿಳೆ

Last Updated : May 19, 2022, 6:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.