ETV Bharat / state

ಫಲವತ್ತಾದ ಭೂಮಿ ಇದ್ರೂ, ಕೃಷಿ ಮಾಡಲು ಮೂಗು ಮುರಿಯುತ್ತಿರುವ ಕಡಲನಗರಿ ರೈತರು..!

author img

By

Published : Sep 5, 2019, 9:58 PM IST

ಕಡಲನಗರಿ ಕಾರವಾರದಲ್ಲಿ  ಫಲವತ್ತಾದ ಭೂಮಿ ಜೊತೆಗೆ ಉತ್ತಮ ಮಳೆಯಾಗುತ್ತಿದ್ದರೂ ಕೃಷಿಯನ್ನು ನಿರ್ಲಕ್ಷಿಸಿದ ಪರಿಣಾಮ ,ಸಾವಿರಾರು ಎಕರೆ ಕೃಷಿಭೂಮಿ ಪಾಳು ಬಿದ್ದಿದೆ.

ಫಲವತ್ತಾದ ಭೂಮಿ ಇದ್ರೂ, ಕೃಷಿ ಮಾಡಲು ಮೂಗು ಮೂರಿಯುತ್ತಿರುವ ಕಡಲನಗರಿ ರೈತರು..!

ಕಾರವಾರ: ಕಡಲನಗರಿ ಕಾರವಾರದಲ್ಲಿ ಫಲವತ್ತಾದ ಭೂಮಿ ಜೊತೆಗೆ ಉತ್ತಮ ಮಳೆಯಾಗುತ್ತಿದ್ದರೂ ಕೃಷಿ ನಿರ್ಲಕ್ಷಿಸಲಾಗಿದೆ. ಪರಿಣಾಮ ,ಸಾವಿರಾರು ಎಕರೆ ಕೃಷಿಭೂಮಿ ಪಾಳು ಬಿದ್ದಿದೆ.

ಫಲವತ್ತಾದ ಭೂಮಿ ಇದ್ರೂ, ಕೃಷಿ ಮಾಡಲು ಮೂಗು ಮೂರಿಯುತ್ತಿರುವ ಕಡಲನಗರಿ ರೈತರು..!

ಕಳೆದ ಕೆಲ ವರ್ಷದ ಹಿಂದೆ ಎಲ್ಲರೂ ಕೃಷಿ ಮಾಡುತ್ತಿದ್ದರು. ಜತೆಗೆ ಕಲ್ಲಂಗಡಿ, ತರಕಾರಿ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಫಲವತ್ತಾದ ಕೃಷಿ ಭೂಮಿ ಪಾಳು ಬಿದ್ದಿದೆ. ಇಲ್ಲಿನ ಬಹುತೇಕ ಯುವಕರು ಕೃಷಿ ತೊರೆದು ಗೋವಾ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇದರಿಂದ ಕೃಷಿ ಮಾಡುವವರ ಸಂಖ್ಯೆ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರು.

ಕಾರವಾರ ತಾಲೂಕಿನ ಮಾಜಾಳಿ, ಅಸ್ನೋಟಿ, ಹಣಕೋಣ, ಹಳಗಾ, ಉಳಗಾ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಪಾಳು ಬಿದ್ದಿದೆ. ಕಳೆದ ಏಳೆಂಟು ವರ್ಷದಿಂದ ಕೃಷಿ ಮಾಡದೇ ಹಾಗೆ ಬಿಡಲಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಕೃಷಿ ಭೂಮಿಯನ್ನ ಸೈಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಕೃಷಿ ಬಗ್ಗೆ ಸೂಕ್ತ ಜಾಗೃತಿ ಮೂಡಿಸದ ಕಾರಣ ಕೃಷಿಗೆ ಹಿನ್ನಡೆಯಾಗಿದ್ದು, ತಾಲೂಕಿನಾದ್ಯಂತ ಇಷ್ಟೊಂದು ಕೃಷಿ ಭೂಮಿ ಪಾಳು ಬಿಳ್ಳುತ್ತಿರುವುದಕ್ಕೆ ಕೃಷಿ ಇಲಾಖೆ ನಿರ್ಲಕ್ಷ್ಯ ಕೂಡ ಕಾರಣ ಎನ್ನಲಾಗಿದೆ.

ಆದರೆ, ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ, ಇಲ್ಲಿನ ಕೃಷಿಕರು ಗೋವಾಕ್ಕೆ ಕಂಪನಿ ಕೆಲಸ ಮಾಡಲು ಹೋಗುತ್ತಾರೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಇತ್ತೀಚೆಗೆ ಕೆಲವರು ಕಂಪನಿ ಬಿಟ್ಟು ಕೃಷಿಯತ್ತ ಮುಖಮಾಡಿದ್ದಾರೆ ಎನ್ನುತ್ತಾರೆ.

Intro:ಕಾರವಾರ:ಅದೆಷ್ಟೋ ರೈತರು ತಮಗಿರುವ ತುಂಡು ಭೂಮಿಯಲ್ಲಿಯೇ ಬಂಗಾರದಂತ ಬೆಳೆ ತೆಗೆಯುತ್ತಾರೆ. ಇನ್ನು ಕೆಲವರು ಅವರಿವರ ಭೂಮಿಯನ್ನು ಗೇಣಿಗೆ ಪಡೆದು ಬೆಳೆ ಬೆಳೆದು ಬದುಕಿನ ಬಂಡಿ ಸಾಗಿಸುತ್ತಾರೆ. ಆದರೆ ಕಡಲನಗರಿ ಕಾರವಾರದಲ್ಲಿ ಮಾತ್ರ ಫಲವತ್ತಾದ ಭೂಮಿ ಜೊತೆಗೆ ಉತ್ತಮ ಮಳೆಯಾಗುತ್ತಿದ್ದರು ಕೂಡ ಕೃಷಿಯನ್ನು ನಿರ್ಲಕ್ಷಿಸಿದ್ದು, ಪರಿಣಾಮ ಸಾವಿರಾರು ಎಕರೆ ಕೃಷಿಭೂಮಿ ಬಂಜರುಬಿಳ್ಳುವಂತಾಗಿದೆ.
ಹೌದು, ಅದೆಷ್ಟೋ ಕಡೆ ಕೃಷಿ ಭೂಮಿಗಾಗಿ ಸಾಕಷ್ಟು ಹೋರಾಟವೇ ನಡೆದಿದೆ. ಖಾಸಗಿ ಕಂಪನಿಗಳು ಕೃಷಿ ಭೂಮಿ ಖರೀದಿಗೆ ಬಂದಾಗ ರೈತರು ಬಿಟ್ಟುಕೊಡದೆ ಪಟ್ಟು ಹಿಡಿದು ಹೋರಾಟ ನಡೆಸಿರುವುದನ್ನು ನೋಡಿದ್ದೇವೆ. ಆದರೆ ಕಡಲ ನಗರಿ ಕಾರವಾರದಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ ಎಂಬಂತಾಗಿದೆ. ಕೃಷಿ ಅಂದ್ರೆ ಬಹುತೇಕ ಯುವಕರು ಮೂಗು ಮುರಿಯುತ್ತಿರುವ ಕಾರಣ ತಾಲೂಕಿನಾದ್ಯಂತ ಸಾವಿರಾರು ಎಕರೆ ಕೃಷಿಭೂಮಿ ಪಾಳುಬಿದ್ದಿದೆ.
ಕಳೆದ ಕೆಲ ವರ್ಷದ ಹಿಂದೆ ಎಲ್ಲರು ಕೃಷಿ ಮಾಡುತ್ತಿದ್ದರು. ಜತೆಗೆ ಕಲ್ಲಂಗಡಿ, ತರಕಾರಿ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಈ ಭೂಮಿ ಪಾಳು ಬಿದ್ದಿದೆ. ಇಲ್ಲಿನ ಬಹುತೇಕ ಯುವಕರು ಕೃಷಿ ತೊರೆದು ಗೋವಾ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇದರಿಂದ ಕೃಷಿ ಮಾಡುವವರ ಸಂಖ್ಯೆ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರಾದ ರವಿ ಗೌಡ.
ಕಾರವಾರ ತಾಲ್ಲೂಕಿನ ಮಾಜಾಳಿ, ಅಸ್ನೋಟಿ, ಹಣಕೋಣ, ಹಳಗಾ, ಉಳಗಾ ಸೇರಿದಂತೆ ಇನ್ನು ಹತ್ತಾರು ಗ್ರಾಮಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಪಾಳು ಬಿದ್ದಿದೆ. ಕಳೆದ ಏಳೆಂಟು ವರ್ಷದಿಂದ ಕೃಷಿ ಮಾಡದೆ ಹಾಗೆ ಬಿಡಲಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಕೃಷಿಭೂಮಿಗಳಲ್ಲಿ ಸೈಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಕಾಳಿ ನದಿ ಸಮೀಪ ಇದ್ದರೂ ಕೂಡ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ತಾಲ್ಲೂಕಿನಾದ್ಯಂತ ಇಷ್ಟೊಂದು ಕೃಷಿ ಭೂಮಿ ಪಾಳು ಬಿಳ್ಳುತ್ತಿರುವುದಕ್ಕೆ ಕೃಷಿ ಇಲಾಖೆ ನಿರ್ಲಕ್ಷ್ಯ ಕೂಡ ಕಾರಣ. ಕೃಷಿ ಬಗ್ಗೆ ಸೂಕ್ತ ಜಾಗೃತಿ ಮೂಡಿಸದ ಕಾರಣ ಕೃಷಿಗೆ ಹಿನ್ನಡೆಯಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.
ಆದರೆ ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ ಇಲ್ಲಿನ ಕೃಷಿಕರು ಗೋವಾಕ್ಕೆ ಕಂಪನಿ ಕೆಲಸ ಮಾಡಲು ಹೊಗುತ್ತಾರೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಇತ್ತೀಚೆಗೆ ಕೆಲವರು ಕಂಪನಿ ಬಿಟ್ಟು ಕೃಷಿಯತ್ತ ಮುಖಮಾಡಿದ್ದಾರೆ ಎನ್ನುತ್ತಾರೆ.
ಕಾರವಾರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿಯಿಂದ ಹಿಂದೆ ಸರಿಯುತ್ತಿದ್ದು, ಇದು ಕರಾವಳಿ ಇತರೆ ತಾಲ್ಲೂಕುಗಳಿಗೂ ಹಬ್ಬತೊಡಗಿದೆ. ಇನ್ನು ಬೆಳೆದ ಬೆಳೆಗೆ ಸರಿಯಾಗಿ ದರ ಸಿಗುವುದಿಲ್ಲ. ಆದಾಯಕ್ಕಿಂತ ನಷ್ಟವೇ ಹೆಚ್ಚಾಗುವ ಕಾರಣ ಕೃಷಿ ಮಾಡಲು ಹಿಂದೇಟು ಹಾಕುತ್ತಾರೆ ಎನ್ನುವುದು ಕೆಲ ಕೃಷಿಕರ ಮಾತಾಗಿದೆ.

ಬೈಟ್ ೧ ರವಿ ಗೌಡ, ಸ್ಥಳೀಯರು
ಬೈಟ್ ೨ ಹೊನ್ನಪ್ಪ ಗೌಡ, ಜಂಟಿ ನಿರ್ದೇಶಕರು ಕೃಷಿ ಇಲಾಖೆ


Body:ಕ


Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.