ಕಡಲತೀರ ಸ್ವಚ್ಛತಾ ದಿನಾಚರಣೆ: ಟ್ಯಾಗೋರ್ ಬೀಚ್​ನಲ್ಲಿ ಪೂಜೆ ಸಲ್ಲಿಸಿದ ಗೆಹ್ಲೋಟ್

author img

By

Published : Sep 17, 2022, 10:06 AM IST

coastal cleanup day celebration

ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆಗೆ ಹಿನ್ನೆಲೆ ರವೀಂದ್ರನಾಥ ಟ್ಯಾಗೋರ್ ಬೀಚ್​ನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮುದ್ರಕ್ಕೆ ಪೂಜೆ ಸಲ್ಲಿಸಿ, ಕಸವನ್ನು ಎತ್ತುವ ಮೂಲಕ ಚಾಲನೆ ನೀಡಿದರು.

ಕಾರವಾರ: ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನದ ಅಂಗವಾಗಿ ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮುದ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಸಾಂಕೇತಿವಾಗಿ ಕಸವನ್ನು ಎತ್ತುವ ಮೂಲಕ ಚಾಲನೆ ನೀಡಿದರು.

ರವೀಂದ್ರನಾಥ ಟ್ಯಾಗೋರ್ ತೀರಕ್ಕೆ ರಾಜ್ಯಪಾಲರನ್ನು ಜಿಲ್ಲಾ ಪೊಲೀಸ್ ಬ್ಯಾಂಡ್ ಸ್ವಾಗತಿಸಿಕೊಂಡಿತು. ಬಳಿಕ ಸಮುದ್ರ ದೇವನಿಗೆ ಪೂಜೆ ಸಲ್ಲಿಸಿದ ಗೆಹ್ಲೋಟ್, ಸಮುದ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಸ್ವಚ್ಛತಾ ಸಲಕರಣೆಗಳನ್ನ ಸಂಘ- ಸಂಸ್ಥೆಗಳ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಜೊತೆಗೆ ಮಯೂರವರ್ಮ ವೇದಿಕೆಯ ಬದಿಯಲ್ಲಿ ಗಿಡ ನೆಟ್ಟು, ‌ನೀರೆರೆದರು.

ಟ್ಯಾಗೋರ್ ಬೀಚ್​ನಲ್ಲಿ ಪೂಜೆ ಸಲ್ಲಿಸಿದ ಗೆಹ್ಲೋಟ್

ಇದನ್ನೂ ಓದಿ: ಸ್ವಾಯತ್ತತೆ ಪ್ರಗತಿಯ ಶುಭ ಸಂಕೇತ: ಥಾವರ್ ಚಂದ್ ಗೆಹ್ಲೋಟ್

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಜಿಲ್ಲಾ ಪಂಚಾಯತಿ ಸಿಇಒ ಪ್ರಿಯಾಂಕ ಎಂ. ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ: 25 ವರ್ಷಗಳಲ್ಲಿ ಉಡುಪಿ ಜಿಲ್ಲೆ ವೇಗವಾಗಿ ಅಭಿವೃದ್ಧಿ ಸಾಧಿಸಿದೆ: ರಾಜ್ಯಪಾಲ ಥಾವರ್​​ ಚಂದ್​ ಗೆಹ್ಲೋಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.