ETV Bharat / state

ಫ್ಯಾಕ್ಟರಿಯಲ್ಲಿ ಅಡಿಕೆ ಕಳ್ಳತನ ಮಾಡಿದ ಆರೋಪಿಯ ಬಂಧನ

author img

By

Published : Oct 12, 2019, 4:45 AM IST

ಫ್ಯಾಕ್ಟರಿಯಲ್ಲಿ ಅಡಿಕೆ ಕಳ್ಳತನ ಮಾಡಿದ ಆರೋಪಿಯ ಬಂಧನ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಚಿತ್ರಗಿಯ ಫ್ಯಾಕ್ಟರಿಯೊಂದರಲ್ಲಿ ಅಡಿಕೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರವಾರ: ಫ್ಯಾಕ್ಟರಿಯಲ್ಲಿ ಅಡಿಕೆ ಕದಿಯುತ್ತಿದ್ದವನನ್ನು ಅಡಿಕೆ ಚೀಲಗಳ ಸಹಿತ ಪೊಲೀಸರು ಬಂಧಿಸಿದ್ದಾರೆ. ಕಾಗಾಲ ಹಿಣಿಯ ಚಂದ್ರಕಾಂತ ಬೊಬ್ಬು ಹಿಣಿ ಬಂಧಿತ ಆರೋಪಿ.

ಕಳೆದ ಕೆಲ ದಿನಗಳಿಂದ ಕುಮಟಾ ಪಟ್ಟಣದ ಚಿತ್ರಿಗಿಯ ಅಡಿಕೆ ಫ್ಯಾಕ್ಟರಿಯಲ್ಲಿ ಅಡಿಕೆ ಕಳುವಾಗುತಿತ್ತು. ಈ ಬಗ್ಗೆ ದೂರು ದಾಖಲಿಸಿದ ಬಳಿಕ ಪರಿಶೀಲನೆ ನಡೆಸಿದ ಕುಮಟಾ ಪೊಲೀಸರು ಆರೋಪಿಗೆ ಬಲೆ ಬೀಸಿದ್ದು, ಅಡಿಕೆ ಚೀಲಗಳ ಸಮೇತ ರೆಡ್​ಹ್ಯಾಂಡ್ ಆಗಿ ಬಲೆಗೆ ಕೆಡವಿದ್ದಾರೆ.

ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Intro:Body:ಪ್ಯಾಕ್ಟರಿಯಲ್ಲಿ ಅಡಿಕೆ ಕಳ್ಳತನ... ಆರೋಪಿ ಅಂದರ್

ಕಾರವಾರ: ಪ್ಯಾಕ್ಟರಿಯಲ್ಲಿ ಅಡಿಕೆ ಕದಿಯುತ್ತಿದ್ದವನನ್ನು ಅಡಿಕೆ ಚೀಲಗಳ ಸಹಿತ ಬಂಧಿಸಿರುವ ಘಟನೆ ಕುಮಟಾ ತಾಲ್ಲೂಕಿನ ಚಿತ್ರಗಿಯಲ್ಲಿ ಇಂದು ನಡೆದಿದೆ.
ಕಾಗಾಲ ಹಿಣಿಯ ಚಂದ್ರಕಾಂತ ಬೊಬ್ಬು ಹಿಣಿ ಬಂಧಿತ ಆರೋಪಿ. ಕಳೆದ ಕೆಲ ದಿನಗಳಿಂದ ಪಟ್ಟಣದ ಚಿತ್ರಿಗಿಯ ಅಡಕೆ ಫ್ಯಾಕ್ಟರಿಯಲ್ಲಿ ಅಡಿಕೆ ಕಳುವಾಗುತಿತ್ತು. ಈ ಬಗ್ಗೆ ದೂರು ದಾಖಲಿಸಿದ ಬಳಿಕ ಪರಿಶೀಲನೆ ನಡೆಸಿರುವ ಕುಮಟಾ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದು, ಕಳುವಾದ ಬಿಳಿಚಾಲಿ ಅಡಕೆ ಚೀಲ ಸಹಿತ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ‌ದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.