ಪೊಲೀಸ್​ ವಿಚಾರಣೆ ಎದುರಿಸಿದ ಹುಬ್ಬಳ್ಳಿಯ ಪ್ರೇಮ್​ರಾಜ್.. ಮಂಗಳೂರಲ್ಲಿ ಸಿಕ್ಕಿರುವ ಆಧಾರ್​ ಕಾರ್ಡ್​ ಬಗ್ಗೆ ಸ್ಪಷ್ಟನೆ

author img

By

Published : Nov 20, 2022, 5:42 PM IST

manglore-bomb-blast-case

ರೈಲ್ವೆ ಇಲಾಖೆಯಲ್ಲಿ ಟ್ರ್ಯಾಕ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ಹುಟಗಿ ಅವರ ಆಧಾರ್​ ಕಾರ್ಡ್ ಮಂಗಳೂರಿನಲ್ಲಿ ಸ್ಫೋಟವಾದ ಸ್ಥಳದಲ್ಲಿ ಸಿಕ್ಕಿದೆ. ಪ್ರೇಮ್ ರಾಜ್ ಹುಟಗಿ ತುಮಕೂರು ಎಸ್​ಪಿ ಅವರ ಬಳಿ ವಿಚಾರಣೆಗೆ ಹಾಜರಾಗಿದ್ದರು.

ತುಮಕೂರು: ಮಂಗಳೂರು ಸ್ಫೋಟ ಪ್ರಕರಣದಲ್ಲಿ ನಕಲಿ ಆಧಾರ್​ ಕಾರ್ಡ್ ಬಳಕೆಯಾಗಿದ್ದು, ಪ್ರೇಮ್ ರಾಜ್ ಹುಟಗಿ ಎಂಬ ವ್ಯಕ್ತಿಯ ಆಧಾರ್​ ಕಾರ್ಡ್ ಬಳಕೆಯಾಗಿದೆ. ಮೂಲತಃ ಪ್ರೇಮ್ ರಾಜ್ ಹುಟಗಿ ಹುಬ್ಬಳ್ಳಿ ಮೂಲದ ವ್ಯಕ್ತಿಯಾಗಿದ್ದು, ತುಮಕೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ಟ್ರ್ಯಾಕ್ ಮ್ಯಾನ್ ಆಗಿ‌ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ಎರಡು ಬಾರಿ ಆಧಾರ್​ ಕಳೆದುಕೊಂಡಿದ್ದರು. 6 ತಿಂಗಳ‌ ಹಿಂದೆ ಧಾರವಾಡ -ಹುಬ್ಬಳ್ಳಿಗೆ ಹೋಗುವ ವೇಳೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಿಂದ ಹಾವೇರಿಗೆ ಬರುವ ವೇಳೆಯೂ ಆಧಾರ್​ ಕಳೆದುಕೊಂಡಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಧಾರವಾಡ ಹಾಗೂ ಹಾವೇರಿ ಪ್ರಯಾಣ ಮಾಡಿದ್ದರಂತೆ.

ಸ್ಫೋಟಕ್ಕೂ ನನಗೂ ಸಂಬಂಧವಿಲ್ಲ: ಪ್ರೇಮ್​ ರಾಜ್​

ಕಳೆದ ಮೂರು ವರ್ಷದಿಂದ ತುಮಕೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಪ್ರೇಮ್ ರಾಜ್ ಕೆಲಸ ಮಾಡುತ್ತಿದ್ದಾರೆ. ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬೆಳಗ್ಗೆ ಪ್ರೇಮ್ ರಾಜ್​ಗೆ ಕರೆ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ತುಮಕೂರು ಎಸ್​ಪಿ ಭೇಟಿ ಮಾಡುವಂತೆ ಸೂಚನೆ ನೀಡಿದ್ದರು. ಅಲೋಕ್ ಕುಮಾರ್ ಸೂಚನೆಯಂತೆ ತುಮಕೂರು ಎಸ್​ಪಿ ರಾಹುಲ್ ಕುಮಾರ್ ಭೇಟಿ ಮಾಡಿ ವಿಚಾರಣೆಗೆ ಒಳಗಾಗಿದ್ದಾರೆ.

ಸ್ಫೋಟಕ್ಕೂ ನನಗೂ ಸಂಬಂಧವಿಲ್ಲ: ಸ್ಫೋಟಕ್ಕೂ ನನಗೂ ಸಂಬಂಧವಿಲ್ಲ ಪೊಲೀಸರ ವಿಚಾರಣೆಗೆ ಸ್ಪಂದಿಸುತ್ತೇನೆ. ಪೊಲೀಸರು ನಮ್ಮ ಮನೆಗೆ ಬಂದು ವಿಚಾರಣೆ ಮಾಡಿದ್ದಾರೆ.‌ ಪೊಲೀಸರು ಹೇಳುವವರೆಗೂ ನನಗೆ ಮಾಹಿತಿ ಇರಲಿಲ್ಲ. ಪೊಲೀಸರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಎಂದು ಪ್ರೇಮ್ ರಾಜ್​ ತಿಳಿಸಿದ್ದಾರೆ.

ಇದನ್ನೂ ಓದಿ : ಆಧಾರ್ ಕಳೆದುಕೊಂಡಿದ್ದ ಹುಬ್ಬಳ್ಳಿಯ ಯುವಕ.. ಶಂಕಿತನ ಕೈಗೆ ಸಿಕ್ಕು​ ದುರುಪಯೋಗ: ಪೋಷಕರ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.