ETV Bharat / state

ಭದ್ರಾವತಿಯಲ್ಲಿ ಯುವಕರ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ, ಕಲ್ಲು ತೂರಾಟ

author img

By

Published : Nov 13, 2022, 10:31 PM IST

ಭದ್ರಾವತಿಯಲ್ಲಿ ಮತ್ತೆ ಚಾಕು ಇರಿತ ಪ್ರಕರಣ ನಡೆದಿದೆ. ಎರಡು ಕೋಮಿನ ಯುವಕರ ಮಧ್ಯೆ ಗಲಾಟೆ ನಡೆದು, ನಾಲ್ವರು ಗಾಯಗೊಂಡಿದ್ದಾರೆ.

ಭದ್ರಾವತಿಯಲ್ಲಿ ಯುವಕರ ನಡುವೆ ಗಲಾಟೆ
ಭದ್ರಾವತಿಯಲ್ಲಿ ಯುವಕರ ನಡುವೆ ಗಲಾಟೆ

ಶಿವಮೊಗ್ಗ: ಭದ್ರಾವತಿಯಲ್ಲಿ ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದು, ನಾಲ್ವರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಭದ್ರಾವತಿಯ ತರಿಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ಒಂದು ಕೋಮಿನ ಇಬ್ಬರು ಯುವಕರಿಗೆ ಅಲ್ಲಿಯೇ ಇದ್ದ ಕೋಳಿ ಅಂಗಡಿ ನಡೆಸುವ ವ್ಯಕ್ತಿ ತನ್ನ ಗೆಳೆಯರ ಜೊತೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ವೇಳೆ ಎರಡೂ ಕೋಮಿನ ಮೂವರಿಗೆ ಚಾಕು ಇರಿತವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಒಂದು ಕೋಮಿನವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

(ಓದಿ: ಅತೀ ಸೂಕ್ಷ್ಮ ಪ್ರದೇಶವಾದ ಶಿವಮೊಗ್ಗ: ಗನ್​ಗೆ ಕೆಲಸ ಕೊಟ್ಟ ಪೊಲೀಸ್ರು, 10 ತಿಂಗಳಲ್ಲಿ 5 ಕ್ರಿಮಿನಲ್​ಗಳಿಗೆ ಗುಂಡೇಟು!)

ಇನ್ನೊಂದು ಕೋಮಿನ ವ್ಯಕ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಬಳಿಕ ಎರಡು ಕೋಮಿನವರು ಏಕಾಏಕಿ ತಾಲೂಕು ಆಸ್ಪತ್ರೆ ಬಳಿ ಜಮಾವಣೆಗೊಂಡಾದ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮತ್ತೋರ್ವನ ತಲೆ ಕಲ್ಲು ತಗುಲಿ ಗಾಯವಾಗಿದೆ. ಈತ ಸಹ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಓದಿ: ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ: ಪ್ರಮುಖ ಆರೋಪಿ ಸೇರಿ ನಾಲ್ವರ ಬಂಧನ, ಎಸ್​ಡಿಪಿಐ ಕಚೇರಿ ಮೇಲೆ ದಾಳಿ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.