ETV Bharat / state

ಶಿವಮೊಗ್ಗದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಎನ್​ಎಸ್​ಯುಐ ಕಾರ್ಯಕರ್ತರ ಬಂಧನ

author img

By

Published : Jul 25, 2020, 11:01 AM IST

Updated : Jul 25, 2020, 12:07 PM IST

NSUI activists
ಪಿಪಿಇ ಕಿಟ್ ಧರಿಸಿ ಸಿಎಂ ಮನೆಗೆ ಮುತ್ತಿಗೆ ಹಾಕಿದ ಎನ್​ಎಸ್​ಯುಐ ಕಾರ್ಯಕರ್ತರು

ಕೊರೊನಾ ಸಮಯದಲ್ಲಿ ಸಿಇಟಿ‌ ಪರೀಕ್ಷೆ ನಡೆಸುವುದು ಬೇಡ ಎಂದು ಆಗ್ರಹಿಸಿ ಸಿಎಂ ಮನೆಗೆ ಎನ್​ಎಸ್​ಯುಐ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಶಿವಮೊಗ್ಗ: ಸಿಇಟಿ ಪರೀಕ್ಷೆ ನಡೆಸುವ ಸರ್ಕಾರದ ನೀತಿ‌ ಖಂಡಿಸಿ ಜಿಲ್ಲಾ‌ ಎನ್​ಎಸ್​ಯುಐ ಸಂಘಟನೆ ಕಾರ್ಯಕರ್ತರು ಶಿವಮೊಗ್ಗದ‌ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಎನ್​ಎಸ್​ಯುಐ ಕಾರ್ಯಕರ್ತರ ಬಂಧನ..

‌ಶಿವಮೊಗ್ಗದ ವಿನೋಬನಗರದ ಸಿಎಂ ಮನೆಗೆ ಎನ್​ಎಸ್​ಯುಐ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಮುತ್ತಿಗೆ ಹಾಕಲು ಯತ್ನಿಸಿದರು. ಕೊರೊನಾ ಸಮಯದಲ್ಲಿ ಸಿಇಟಿ‌ ಪರೀಕ್ಷೆ ನಡೆಸುವುದು ಬೇಡ ಎಂದು ಆಗ್ರಹಿಸಿದರು.‌ ದಿನೇ ದಿನೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸಿಇಟಿ ಪರೀಕ್ಷೆ ನಡೆಸುವುದು‌ ಸೂಕ್ತವಲ್ಲ. ಇದರಿಂದ ಮಕ್ಕಳು ಭೀತಿಯಿಂದ ಪರೀಕ್ಷೆ ಬರೆಯಬೇಕಾಗುತ್ತದೆ. ಅಲ್ಲದೇ ಈಗ ಮತ್ತೆ ಸಿಇಟಿ ಕೋಚಿಂಗ್​ಗೆ ಹೋಗಬೇಕು. ಇದರಿಂದ ಪ್ರತಿನಿತ್ಯ ಮನೆಯಿಂದ ಹೊರಗೆ ಬರಬೇಕು‌. ಅಲ್ಲದೆ ಸಿಇಟಿ ಕೇಂದ್ರಕ್ಕೆ ಹೋಗುವುದಕ್ಕೂ ಸಹ ಮಕ್ಕಳು ಹಾಗೂ ಪೋಷಕರಲ್ಲಿ ಭಯ ಉಂಟಾಗುತ್ತಿದೆ. ಇದರಿಂದ ಮಕ್ಕಳು ಉತ್ತಮವಾಗಿ‌ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಬಾರದು. ಅಲ್ಲದೇ ಈ ವರ್ಷ ಸಿಇಟಿ ಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸಿದರು.

NSUI activists besieging CM's home
ಸಿಎಂ ಮನೆಗೆ ಮುತ್ತಿಗೆ ಹಾಕಿದ ಎನ್​ಎಸ್​ಯುಐ ಕಾರ್ಯಕರ್ತರು

ಈ ವೇಳೆ ಸಿಎಂ ಬಿ.ಎಸ್​.ಯಡಿಯೂರಪ್ಪ ಬೆಂಗಳೂರಿನಲ್ಲಿದ್ದರೆ, ಸಂಸದ ಬಿ.ವೈ.ರಾಘವೇಂದ್ರ ಶಿಕಾರಿಪುರದಲ್ಲಿದ್ದರು. ಬ್ಯಾರಿಕೇಡ್​​​​ನಿಂದ ಒಳಗೆ ನುಗ್ಗಲು ಯತ್ನ ಮಾಡಿದ ಎನ್​ಎಸ್​ಯುಐ ಕಾರ್ಯಕರ್ತರನ್ನು ತಡೆದ ವಿನೋಬನಗರ ಪೊಲೀಸರು, ಸುಮಾರು 12 ಜನ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

Last Updated :Jul 25, 2020, 12:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.