ETV Bharat / state

ಶಿವಮೊಗ್ಗದಲ್ಲಿ ಶಸ್ತ್ರಾಸ್ತ್ರಸಹಿತ ನಾಲ್ವರು ಅಂತರ್​​ರಾಜ್ಯ ಕಳ್ಳರ ಬಂಧನ

author img

By

Published : Oct 15, 2020, 12:24 PM IST

ಶಿವಮೊಗ್ಗದ ಗಾಂಧಿಬಜಾರ್​​ನಲ್ಲಿ ಸ್ಯಾಂಟ್ರೋ ಕಾರಿನಲ್ಲಿ‌ ಕುಳಿತು ನಾಲ್ವರು ಅಂತರ್​​ರಾಜ್ಯ ಕಳ್ಳರು ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ನಾಲ್ವರನ್ನು ಬಂಧಿಸಿದೆ.

Four interstate robbers arrested while attempted robbery
ದರೋಡೆಗೆ ಯತ್ನಿಸುತ್ತಿದ್ದ ನಾಲ್ವರು ಅಂತರರಾಜ್ಯ ಕಳ್ಳರ ಬಂಧನ: ಬಂಧಿತರಿಂದ ಪಿಸ್ತೂಲು, ಕಾರು ವಶ

ಶಿವಮೊಗ್ಗ: ದರೋಡೆಗೆ ಯತ್ನಿಸುತ್ತಿದ್ದ ನಾಲ್ವರು ಅಂತರ್​​ರಾಜ್ಯ ಕಳ್ಳರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಶಿವಮೊಗ್ಗದ ಗಾಂಧಿಬಜಾರ್​ ಬಳಿ ಸ್ಯಾಂಟ್ರೋ ಕಾರಿನಲ್ಲಿ‌ ಕುಳಿತು ದರೋಡೆಗೆ ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಉಮೇಶ್ ನಾಯಕ್​​​ ಮತ್ತು ದೊಡ್ಡಪೇಟೆ ಸಿಪಿಐ ವಸಂತ ಕುಮಾರ್​​ ನೇತೃತ್ವದ ತಂಡ ದಾಳಿ ನಡೆಸಿದೆ.

ಮಧ್ಯಪ್ರದೇಶದ ಸುರೇಶ್ ಸಿಂಗ್ (20), ಕಮಲ್ ಸಿಂಗ್ (35) ರಾಜಸ್ಥಾನ ಮೂಲದ ರಣವೀರ್ ಸಿಂಗ್ (34) ಮತ್ತು ರಾಮಲಾಲ್ (21) ಬಂಧಿತರು.

Four interstate robbers arrested while attempted robbery
ಬಂಧಿತರಿಂದ ಪಿಸ್ತೂಲು, ಕಾರು ವಶ

ಒಂದು ನಾಡ ಪಿಸ್ತೂಲು, 4 ಜೀವಂತ ಗುಂಡು, 1 ಚಾಕು, 4 ಮೊಬೈಲ್ ಹಾಗೂ ಒಂದು ಸ್ಯಾಂಟ್ರೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.