ETV Bharat / state

ಸಿಎಂ ಇಬ್ರಾಹಿಂಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ: ಹೆಚ್.ಡಿ.ದೇವೇಗೌಡ

author img

By

Published : Apr 12, 2022, 7:29 PM IST

ಏಪ್ರಿಲ್‌ 17ಕ್ಕೆ ಸಿಎಂ ಇಬ್ರಾಹಿಂರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಸಂಘಟನೆಯ ಉನ್ನತ ಸ್ಥಾನಮಾನ ನೀಡಲಾಗುವುದು ಎಂದು ದೇವೇಗೌಡರು ತಿಳಿಸಿದ್ದಾರೆ.

JDS government formation struggle from Ramanagara dargah
ರಾಮನಗರದ ದೊಡ್ಡದರ್ಗಾದಿಂದ ಜೆಡಿಎಸ್ ಸರ್ಕಾರ ರಚನೆಯ ಹೋರಾಟ ಪ್ರಾರಂಭ

ರಾಮನಗರ: ಕಾಂಗ್ರೆಸ್​ ತೊರೆದು ಜೆಡಿಎಸ್​ ಪಕ್ಷ ಸೇರಿರುವ ಸಿಎಂ ಇಬ್ರಾಹಿಂ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವುದಾಗಿ ಪರೋಕ್ಷವಾಗಿ ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ರೇಷ್ಮೆನಗರಿ ರಾಮನಗರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇದೇ ತಿಂಗಳ 17ಕ್ಕೆ ಇಬ್ರಾಹಿಂರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಸಂಘಟನೆಯ ಉನ್ನತ ಸ್ಥಾನಮಾನ ನೀಡಲಾಗುವುದು ಎಂದರು.

ರಾಮನಗರದ ದೊಡ್ಡದರ್ಗಾದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಹಾಗೂ ಸಿಎಂ ಇಬ್ರಾಹಿಂ ಪ್ರಾರ್ಥನೆ ಸಲ್ಲಿಸಿದರು.

ಈಶ್ವರಪ್ಪ ಪ್ರಕರಣ: ನೈತಿಕತೆ‌ ಇದ್ದರೆ ಈಶ್ವರಪ್ಪ‌ ಒಳ್ಳೆಯ ತೀರ್ಮಾನಕ್ಕೆ ಬರಲಿ, ಬಿಜೆಪಿಯಲ್ಲಿ‌ ಒಳಜಗಳ ನಡೆಯುತ್ತಿದೆ. ಈಶ್ವರಪ್ಪನವರೇ ಕಾಂಗ್ರೆಸ್​‌ಗೆ ಆಹಾರ ಆಗಬೇಡಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಜೆಡಿಎಸ್‌ ನಾಯಕರು ಆಗ್ರಹಿಸಿದರು.

ಇದನ್ನೂ ಓದಿ: ಆರೋಪ ಮಾಡಿದ್ಕೂಡಲೇ ಸಾಬೀತಾದಂತಲ್ಲ.. ಯಾರ್‌ ಕೊಟ್ಟಿದ್ದು, ಯಾರ್‌ ತೆಗೆದ್ಕೊಂಡಿದ್ದೆಲ್ಲ ಸಾಬೀತಾಗ್ಬೇಕು, ಆಮೇಲೆ ಕ್ರಮ.. ಆರಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.