ಕಾಲುವೆ ಮೇಲೆ ನಿಂತು ಡೈ ಹೊಡೆದ ವ್ಯಕ್ತಿ: ತಲೆಗೆ ಪೆಟ್ಟು ಬಿದ್ದು ಸಾವು!

author img

By

Published : Jun 24, 2022, 12:14 PM IST

Raichur

ಕಾಲುವೆಯಲ್ಲಿ ಈಜಲು ತೆರಳಿದ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು: ಕಾಲುವೆಯಲ್ಲಿ ಈಜಲು ತೆರಳಿದ ವ್ಯಕ್ತಿ ಗಂಭೀರ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದ ಬಳಿ ನಡೆದಿದೆ. ಮೃತನನ್ನು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮೂಲದ ನಿವಾಸಿ, ಖಾಸಗಿ ಕಂಪನಿಯ ನೌಕರ ರಾಜು(30) ಎಂದು ಗುರುತಿಸಲಾಗಿದೆ.

Raichur
ರಾಜು ಮೃತ ದೇಹ

ಈತ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಈಜಲು ತೆರಳಿದ್ದಾನೆ. ಈ ವೇಳೆ, ಕಾಲುವೆ ಮೇಲಿಂದ ಡೈ ಹೊಡೆದಿದ್ದರಿಂದ ತಲೆಗೆ ಮತ್ತು ಭುಜಕ್ಕೆ ಗಂಭೀರ ಪೆಟ್ಟು ಬಿದ್ದು ನೀರಿನಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.‌ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 120 ವಂಚಕ ಆ್ಯಪ್​ಗಳನ್ನು ಪ್ಲೇಸ್ಟೋರ್​​​ನಿಂದ ತೆಗೆಯುವಂತೆ ಪೊಲೀಸರ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.